‘ಬುದ್ಧನ ಕತೆಗಳು’ ಕೃತಿಯಲ್ಲಿ ಅರಿವಿನ ‘ಕಿಡಿ’ಯಿದೆ’

 ‘ಬುದ್ಧನ ಕತೆಗಳು’ ಕೃತಿಯಲ್ಲಿ ಅರಿವಿನ ‘ಕಿಡಿ’ಯಿದೆ’

 ‘ಬುದ್ಧನ ಕತೆಗಳು’ ಕೃತಿಯಲ್ಲಿ ಅರಿವಿನ ‘ಕಿಡಿ’ಯಿದೆ’


ಜಿ.ವಿ.ಆನಂದಮೂರ್ತಿಯವರ ಕೃತಿ ಬಿಡುಗಡೆ ಸಮಾರಂಭದಲ್ಲಿ ನಟರಾಜ ಬೂದಾಳು

ತುಮಕೂರು: ಬುದ್ಧ ನಿರ್ವಾಣ ಹೊಂದುವ ಅಂತಿಮ ಕ್ಷಣದಲ್ಲಿ ಪ್ರಿಯ ಭಿಕ್ಕು ಆನಂದನಿಗೆ ತಿಳಿಸಿದ ಕೊನೆಯ ಮಾತು ‘ಅತ್ತ ದೀಪ ಭವ’ ದ ರೀತಿಯಲ್ಲಿ ನಿನ್ನೊಳಗಿನ ಜ್ಯೋತಿಯನ್ನು ನೀನೇ ಹಚ್ಚಿಕೊಳ್ಳುವುದು ಅರಿವನ್ನು ಪಡೆವ ಒಂದು ವಿಧಾನ, ಹೀಗೆ ನಮ್ಮ ಅಂಗೈ ಮುಂಗೈಯೊಳಗೆ ಅರಿವಿನ ದೀಪವನ್ನು ಹಚ್ಚಿಕೊಳ್ಳಲು ಬೇಕಾದ ‘ಕಿಡಿ’ ಜಿ.ವಿ. ಆನಂದಮೂರ್ತಿಯವರು ಬರೆದು ಪ್ರಕಟಿಸಿರುವ ಬುದ್ಧನ ಕತೆಗಳಲ್ಲಿವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ನಟರಾಜ್ ಬೂದಾಳ್ ಅಭಿಪ್ರಾಯಪಟ್ಟರು.
ಭಾನುವಾರ ಬೆಳಿಗ್ಗೆ ನಗರದ ಕನ್ನಡ ಭವನದಲ್ಲಿ ಬೋಧಿಮಂಡಲ ಮತ್ತು ಪ್ರೀತಿ ಪುಸ್ತಕ ಪ್ರಕಾಶನ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಡಾ.ಜಿ.ವಿ.ಆನಂದಮೂರ್ತಿ ಸಂಕಲಿಸಿದ ಬುದ್ಧನ ಕಥೆಗಳು ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ನಿತ್ಯದ ಭಾಷೆಯನ್ನು ದಾಟದೆ ಹೋದರೆ ಬೌದ್ದ ತಾತ್ವಿಕತೆಯನ್ನು ಹೇಳಲು ಸಾಧ್ಯವಿಲ್ಲ. ಹಾಗೆಯೇ ಕಸುಬನ್ನು ಅತ್ಯಂತ ಶ್ರದ್ಧೆಯಿಂದ ಮಾಡುವುದರ ಮೇಲೆ ಬೌದ್ಧ ತಾತ್ವಿಕತೆ ನಿಂತಿದೆ. ಚಮ್ಮಾರ, ಕಮ್ಮಾರನ ಅಡಿಗಲ್ಲಿನ ಮೇಲೆ ಮಾಡುವ ಕೆಲಸದಲ್ಲಿ ಸಾಲು ಪಕ್ಕ ಸಾಲು ಉಳುವ ಸಾಲಿನಲ್ಲಿ, ದಶದಿಕ್ಕಿನಿಂದ ಎಳೆಗಳನ್ನು ಎಳೆತಂದು ಸೀರೆಯನ್ನು ನೇಯ್ಗೆ ಮಾಡುವ ಕಾಯಕದಲ್ಲಿ ಬೌದ್ಧ ತಾತ್ವಿಕತೆ ಇದೆ. ಇದು ಒಂದು ಮಾರ್ಗ ಎಂದರು.
ಜೈನ ಹಾಗೂ ಬೌದ್ಧ ದರ್ಶನದಲ್ಲಿ ಜೀವನವಿಡೀ ಓದಿದರೂ ಮುಗಿಯದಷ್ಟು ಕಥೆಗಳ ಭಂಡಾರವೇ ಇದೆ.  ಸಂಗೀತ, ಸಾಹಿತ್ಯ ಧರ್ಮ ಇವೆಲ್ಲಾ ಒಂದು ಹಂತಕ್ಕೆ ಮೈಮರೆಸುತ್ತವೆ. ಇದು ಒಳ್ಳೆಯದಲ್ಲ. ಯಾವುದೇ ಕಥೆ, ದರ್ಶನ, ಕಲೆಯಾಗಲಿ ಅಂತಿಮವಾಗಿ ತತ್ವವಾಗಿ ಪರಿಣಮಿಸದೇ ಹೋದರೆ ಅದರ ಉದ್ದೇಶವೇ ಅರ್ಥವಾಗುವುದಿಲ್ಲ ಎಂದು ಹೇಳಿದರು ಬೂದಾಳು.
ಬುದ್ಧ ಗುರು ಕೇವಲ ಒಬ್ಬನಿಲ್ಲ. ಬೌದ್ಧ ಪರಂಪರೆಯಲ್ಲಿ ಸಾವಿರಾರು ಬುದ್ದನ ಕಲ್ಪನೆಗಳು ಇವೆ. ಅದರಲ್ಲಿ ನಾನೂ ಒಬ್ಬ ಅಂದುಕೊಳ್ಳಬಹುದು. ಎಷ್ಟು ಜನರಿದ್ದಾರೋ ಅಷ್ಟು ಬುದ್ದರಿದ್ದಾರೆ. ಬುದ್ದ ಹೀಗೆ ಹೇಳಿದ ಎಂದು ಯಾರೂ ಹೇಳುವುದಿಲ್ಲ. ನಾನು ಏನು ಕೇಳಿಸಿಕೊಂಡೆ ಎಂಬುದನ್ನಷ್ಟೇ ಭಿಕ್ಕುಗಳು ಹೇಳುತ್ತಾರೆ. ಬುದ್ದನನ್ನು ನಾನು ಹೇಗೆ ಕೇಳಿಸಿಕೊಂಡೆ ಎಂಬುದು ಮುಖ್ಯ. ಬುದ್ದ ಒಬ್ಬ ವಿಜ್ಞಾನಿ. ಇದೇ ರೀತಿಯಲ್ಲಿ ಕೇಳಿಸಿಕೊಳ್ಳುವ ಅಗತ್ಯವಿದೆ. ಬುದ್ದ ಲೋಕವನ್ನು ಸರಿಯಾಗಿ ವಿವರಿಸಿಕೊಟ್ಟ ವಿಜ್ಞಾನಿ ಎಂದು ವಿವರಿಸಿದರು.
ಬುದ್ದನ ಎದುರಿಗೆ ನಿಲ್ಲಬೇಕು. ಸಮಾನವಾಗಿ ನಿಲ್ಲಬೇಕು. ಇದು ಬುದ್ದ ಬಯಸಿದ್ದು. ಪಾದದ ಬಳಿ ನಿಲ್ಲುವುದಲ್ಲ. ಅದು ಭಕ್ತಿಯಾಗುತ್ತದೆ. ಬುದ್ದ ಭಕ್ತಿಯನ್ನು ಬಯಸಿದವನು ಅಲ್ಲ. ಸಮಾನತೆ ಬಯಸಿದವನು. ಬುದ್ದನ ಬಳಿ ಸಂಪೂರ್ಣ ಸಮರ್ಪಣೆ ಅಲ್ಲ. ವೈದ್ಯನ ಮುಂದೆ ಕುಳಿತಹಾಗೆ. ವೈದ್ಯ ಹೇಳಿದ್ದೆಲ್ಲವನ್ನೂ ರೋಗಿ ನಂಬಬಾರದು. ಅದನ್ನು ಪ್ರಶ್ನಿಸಬೇಕು. ಆನಂತರವೇ ಚಿಕಿತ್ಸೆಗೆ ಒಡ್ಡಿಕೊಳ್ಳಬೇಕು. ಹಾಗಾಗಿ ಬುದ್ದ ಒಬ್ಬ ವೈದ್ಯನ ಥರ ಎಂದು ವಿಶ್ಲೇಷಿಸಿದರು.
ಬುದ್ದಮಾರ್ಗ ಉತ್ತು ಬಿತ್ತಿ ಬೆಳೆದ ರೀತಿಯದು. ಅದು ಓದಿನಿಂದ, ಕೇಳಿಸಿಕೊಳ್ಳುವುದರಿಂದ ಮತ್ತು ಇತರೆ ಆವರಣಗಳಿಂದ ಪಡೆದುಕೊಳ್ಳುವುದಲ್ಲ. ಅದು ಲಿಂಗಾಯತದAತೆ. ಲಿಂಗ ಕಟ್ಟಿಕೊಳ್ಳುವುದರಿಂದ, ಹುಟ್ಟಿನಿಂದ ಲಿಂಗಾಯತನಾಗುವುದಿಲ್ಲ. ಅದು ಉತ್ತು, ಬಿತ್ತು ಬೆಳೆಯಬೇಕು. ಹಾಗೆಯೇ ಬೌದ್ಧ ತಾತ್ವಿಕತೆ ಉತ್ತು ಬಿತ್ತಿ ಬೆಳೆಯಬೇಕಾದುದು ಎಂದು ಹೇಳಿದರು.
ಸರಿಯಾಗಿ ಬಾಳುವುದು. ಹೀಗೆಂದರೆ ಹೋಗುತ್ತಹೋಗುತ್ತಲೇ ಕೇಳಿಕೊಂಡು ಹೋಗುವ ಮತ್ತು ಸರಿಪಡಿಸಿಕೊಂಡು ಹೋಗುವುದು ಬೌದ್ಧ ತಾತ್ವಿಕತೆ . ಜನರು ವಾಸ್ತವದಿಂದ ಕಥೆಗೆ ಹೋಗುವ ಮನಸ್ಥಿತಿಗೆ ಹೊಂದಿಕೊAಡವರು. ಕಥೆ, ದರ್ಶನಕ್ಕೆ ಕಾಲ್ಪನಿಕ ಭಾಷೆ ಬಳಸಿರುವುದೇ ಹೆಚ್ಚು. ಕನ್ನಡ ಸಾಹಿತ್ಯ ಬೂಸ ಸಾಹಿತ್ಯ ಎಂಬ ಮಾತನ್ನು ಕುವೆಂಪು, ಬಸವಲಿಂಗಪ್ಪ ಹೇಳಿದ್ದರು. ಆದರೆ ಅದು ಇಡೀ ವಿಶ್ವಸಾಹಿತ್ಯಕ್ಕೆ ಸಂಬAಧಿಸಿದ್ದು, ಈ ಬೂಸಾ ಸಾಹಿತ್ಯ ಸುಮ್ಮನಿರುವುದಿಲ್ಲ. ಅದು ಬೆಳೆಯುತ್ತ ಹೋಗುತ್ತದೆ. ಅಜ್ಞಾನವನ್ನು ತುಂಬುತ್ತದೆ. ಇದನ್ನು ತೊಡೆದುಹಾಕುವುದೇ ಜ್ಞಾನ ಎಂದು ಹೇಳಿದರು.
ಯಾವುದು ಸಾದು, ಯಾವುದು ಅಸಾದು ಎಂಬುದನ್ನು ಹೋಗುತ್ತಲೇ ನಿವಾರಿಸಿಕೊಳ್ಳಬೇಕು. ಬೌದ್ಧ ತಾತ್ವಿಕತೆ ತಿಳಿದುಕೊಂಡು ಗುಡ್ಡೆಹಾಕುವುದಲ್ಲ. ಇರುವುದನ್ನು ಕಳೆದುಕೊಳ್ಳುವುದು. ಸುಮ್ಮನಿರುವುದು ಹೇಗೆ ಎಂದರೆ ಏನು ಹೇಳುವುದು. ಬೌದ್ಧ ತಾತ್ವಿಕತೆ ಸುಮ್ಮನಿರುವುದು. ಮಹಾವಿಜ್ಞಾನಿ ಏನನ್ನು ಹೇಳಲಿಲ್ಲ ಎಂಬುದಕ್ಕಿAತ ಏನು ಹೇಳಿಲ್ಲ ಎಂಬುದು ಮುಖ್ಯ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಬೂದಾಳು ತಿಳಿಸಿದರು.
 


ಗೋವುಗಳೂ ವ್ಯಾಘ್ರಗಳಾಗುತ್ತವೆ: ಜಿ.ವಿ.ಆನಂದಮೂರ್ತಿ 


ಕೃತಿಕಾರ ಡಾ.ಜಿ.ವಿ.ಆನಂದಮೂರ್ತಿ ಮಾತನಾಡಿ, ಬುದ್ಧನ ತತ್ವಗಳು ಚಿಂತನೆಯಾಗಿ ಇದ್ದಾಗ ಏನೂ ತೊಂದರೆಯಾಗುವುದಿಲ್ಲ, ಅವುಗಳನ್ನು ಅನುದಿನದ ಜೀವನದಲ್ಲಿ ಅನುಷ್ಟಾನಗೊಳಿಸಲು ಹೊರಟಾಗ ಗೋವುಗಳೂ ವ್ಯಾಘ್ರಗಳಾಗಿ ಎರಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಕೊರೊನಾ ಸೋಂಕು ಕಾಣಿಸಿಕೊಂಡ ಒಂದೂವರೆ ವರ್ಷದಿಂದ ನಾವು ಯಾರೂ ಮುಗುಳ್ನಕ್ಕೇ ಇಲ್ಲ, ನಗುವುದನ್ನೇ ಮರೆತುಬಿಟ್ಟಿದ್ದೇವೆ. ಯಾರ ಮನೆಯಲ್ಲಿ ನೋಡಿದರೂ ದುಃಖ,ಸಂಕಟ. ಇಂಥಾ ಸನ್ನಿವೇಶದಲ್ಲೂ ನಿನ್ನೆ ನಟರಾಜ ಬೂದಾಳು ಅವರ ಅನುವಾದಿತ ಸರಹಪಾದ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿರುವುದನ್ನು ಕಂಡ ಮೇಲೆ ನನ್ನ ಮುಖದಲ್ಲಿ ಒಂದಿಷ್ಟು ನಗು ಮೂಡಿದೆ. ಜೀವನದ ಬಗ್ಗೆ ಭರವಸೆ ಹುಟ್ಟಿದೆ ಎಂದರು ಆನಂದಮೂರ್ತಿ. 
ಬೌದ್ಧ ಚಿಂತನೆಯನ್ನು ಧರ್ಮ ಎಂದು ಗುರುತಿಸಿದ ತಕ್ಷಣ ಅದು ಸ್ಥಗಿತಗೊಂಡು ಬಿಡುತ್ತದೆ. ಆದ್ದರಿಂದ ಅದೊಂದು ಜೀವನ ವಿಧಾನ ಎಂದು ಗುರುಗಳಾದ ದಿವಂಗತ ಕೆ.ಎಂ.ಶAಕರಪ್ಪನವರು ತಿಳಿಸಿಕೊಟ್ಟಿದ್ದರು. ಜೊತೆಗೆ ಕವಿ ವೀಚಿ ಹಾಗೂ ಕೆ.ಬಿ.ಸಿದ್ದಯ್ಯ ಅವರು ಒಂದು ಕಾಲದಲ್ಲಿ ನನ್ನನ್ನು ಬೌದ್ಧಿಕವಾಗಿ ರೂಪಿಸಿದವರು ಎಂದರು. 
ರೇಷ್ಮೆ ಇಲಾಖೆ ಅಧಿಕಾರಿ ಚೇತನಾ ಅವರು ಮಾತನಾಡಿ, ಈ ವೇದಿಕೆಯಲ್ಲಿ ಬಿಡುಗಡೆಯಾದ ಬುದ್ಧನ ಕತೆಗಳು ಕೊಳ್ಳುಬಾಕ ಸಂಸ್ಕೃತಿಯ ಈ ದಿನಗಳಲ್ಲೂ ಪ್ರಸ್ತುತವಾಗಿವೆ ಎಂದರು.
ಹಿAಸೆ ಭಾರತದಲ್ಲಿ ಇಂದಿಗೂ ತಾಂಡವವಾಡುತ್ತಿದ್ದು ಬೌದ್ಧ ಚಿಂತನೆಗಳು ಬಿಡುಗಡೆಯ ಹಾದಿ ತೋರುತ್ತವೆ ಎಂದು ಅಧ್ಯಕ್ಷತೆ ವಹಿಸಿದ್ದ ಚಿಕ್ಕಮಗಳೂರಿನ ದಲಿತ ಮುಖಂಡ ಹೆಚ್.ಎಂ.ರುದ್ರಸ್ವಾಮಿ ಅಭಿಪ್ರಾಯಪಟ್ಟರು.
ಅವರು ಮಾತನಾಡಿ, ಭಾರತ ದೇಶದಲ್ಲಿ ಎರಡು ಥರದ ಧರ್ಮಗಳಿವೆ, ನಿಯಮಗಳನ್ನು ಅನುಸರಿಸಬೇಕಾದ ಧರ್ಮಗಳಿವೆ ಎಂದು ಅಂಬೇಡ್ಕರ್ ಹೇಳಿ ತತ್ವಾಧಾರಿತ ಬೌದ್ಧ ಧರ್ಮವನ್ನು ಆಯ್ಕೆ ಮಾಡಿದ್ದರು. ಭಾರತೀಯ ಸಾಮಾಜಿಕ ಸನ್ನಿವೇಶದಲ್ಲಿ ಮಾನಸಿಕ ಗುಲಾಮಗಿರಿಯಿಂದ ಬಿಡುಗಡೆಯಾಗಲು ಅವಶ್ಯಕತೆ ಇರುವ ಎಲ್ಲ ಅಂಶಗಳು ಆನಂದಮೂರ್ತಿ ಅವರು ಸಂಕಲಿಸಿರುವ ಬುದ್ಧನ ಕಥೆಗಳಲ್ಲಿ ಇವೆ ಎಂದರು.
ಪುಸ್ತಕ ಪ್ರೀತಿ ಪ್ರಕಾಶನದ ಪ್ರಕಾಶಕ ಹಾಗೂ ಪತ್ರಕರ್ತ ದೊಡ್ಡ ಹುಲ್ಲೂರು ರುಕ್ಕೋಜಿ ಮಾತನಾಡಿದರು. 
ಪ್ರಾಸ್ತಾವಿಕವಾಗಿ ಮಾತನಾಡಿದ ಬೋಧಿ ಮಂಡಲದ ಅಧ್ಯಕ್ಷ ಡಾ. ಬಸವರಾಜು, ಕಳೆದ ೨೮-೨೯ ವರ್ಷಗಳ ಹಿಂದೆ ತುಮಕೂರಿನ ಗೆಳೆಯರು ಬೋಧಿ ಮಂಡಲವನ್ನು ಸ್ಥಾಪಿಸಿದ ಕುರಿತು ವಿವರಿಸಿದರು. 
ಸರಹಪಾದ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿರುವುದಕ್ಕೆ ಲೇಖಕ ಡಾ.ನಟರಾಜ್ ಬೂದಾಳ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿದರು.ಕತೆಗಾರ ಗುರುಪ್ರಸಾದ ಕಂಟಲಗೆರೆ ನಿರೂಪಿಸಿದರು. ಡಾ.ಹೆಚ್.ಆರ್.ಸ್ವಾಮಿ ವಂದಿಸಿದರು.