“ನಾನಷ್ಟೇ ಅಲ್ಲ ನನ್ನವರೆಲ್ಲಾ ಶೋಷಣೆ, ದಬ್ಬಾಳಿಕೆ,  ಹಾಗೂ ತಾರತಮ್ಯ ಕುರಿತಾದ ಕಥೆಗಳ ಉಗ್ರಾಣ” ನೇತ್ರಾವತಿ.ಕೆ.ಬಿ

ದಲಿತರು ಹಿಂದೂ ಧರ್ಮದ ತಾರತಮ್ಯ ಶ್ರೇಣಿ ವ್ಯವಸ್ಥೆಯ ಕೆಳ ಮೆಟ್ಟಿಲುಗಳ ಮೇಲೆ ಜಾಗ ಪಡೆಯುತ್ತಾರೆ . ವ್ಯಕ್ತಿಯ ಸ್ಥಾನಮಾನಗಳು ಆತನ ಹುಟ್ಟಿನಿಂದ ನಿರ್ಧಾರಿತವಾಗುತ್ತವೆ. ಮೀಸೆ ಬೆಳೆಸಿಕೊಂಡ ಅಥವಾ ಮದುವೆಯಲ್ಲಿ ಕುದುರೆ ಏರಿದನೆಂಬ ತೀರಾ ಕ್ಷುಲ್ಲಕ ಎನ್ನಬಹುದಾದ ಕಾರಣಗಳಿಗಾಗಿ ಮೇಲ್ಜಾತಿಯಿಂದ ಕೊಲ್ಲಲ್ಪಟ್ಟಿದ್ದಾರೆ ಅಥವಾ ನಾನಾ ರೀತಿಯ ಹಿಂಸೆಗೆ ಒಳಗಾಗಿದ್ದಾರೆ. ಇರಲು ನೆಲೆ, ಮೂಲಭೂತ ಸೌಕರ್ಯ ಅಥವಾ ಅಂತರಜಾತಿ ವಿವಾಹಗಳಿಗಾಗಿ ದೊಡ್ಡ ಮಟ್ಟದ ಹೋರಾಟವನ್ನೇ ಮಾಡಬೇಕಾಗುತ್ತದೆ. ಈ ದೇಶದಲ್ಲಿ ಜಲಗಾರರಾಗಿ, ಜಾಡಮಾಲಿಗಳಾಗಿ, ಹೊಲಸು ಗುಂಡಿಗಳನ್ನ ತಮ್ಮ ಕೈಗಳಿಂದ ತೊಳೆದು ಬದುಕಬೇಕಾದಂತಹ ಒತ್ತಡವನ್ನು ಸಮಾಜ ಅವರ ಮೇಲೆ ಹೇರಿದೆ.  ಜಾತಿ ಪದ್ಧತಿ ಅನ್ನೋದು ಬರಿಯ ಭಾರತದಲ್ಲಿ ಮಾತ್ರ ಬಲಿಷ್ಟವಾಗಿರದೆ ಅಮೇರಿಕದಲ್ಲಿ ನೆಲೆಸಿರುವ ಭಾರತೀಯರಲ್ಲೂ ಆಳವಾಗಿ ಬೇರೂರಿದೆ. ಜಾತಿ ಎಂಬ ಪಿಡುಗನ್ನ ಪ್ರಪಂಚಾದ್ಯAತ ನೆಲೆಸಿರುವ ಭಾರತೀಯ ಸಮೂಹಗಳಲ್ಲಿ ಕಾಣಬಹುದು. “ಹೋರಾಟವೆಂಬುದು ದಲಿತನ ಪ್ರತಿ ದಿನದ ಅನುಭವ. ಅದೇ ಅವನ ಬದುಕು. ನನ್ನ ಬದುಕು ಕೂಡ ಒಂದು ಪ್ರಬಲ ಪ್ರತಿರೋಧ. ನಾನಷ್ಟೇ ಅಲ್ಲ ನನ್ನವರೆಲ್ಲಾ ಶೋಷಣೆ, ದಬ್ಬಾಳಿಕೆ, ಹಾಗೂ ತಾರತಮ್ಯ ಕುರಿತಾದ ಕಥೆಗಳ ಉಗ್ರಾಣ” ಎನ್ನುತ್ತಾರೆ ತಮಿಳುನಾಡಿನ ಹೆಸರಾಂತ ಸಿನಿಮಾ ನಿರ್ದೇಶಕ ಪಾ. ರಂಜಿತ್

“ನಾನಷ್ಟೇ ಅಲ್ಲ ನನ್ನವರೆಲ್ಲಾ ಶೋಷಣೆ, ದಬ್ಬಾಳಿಕೆ,  ಹಾಗೂ ತಾರತಮ್ಯ ಕುರಿತಾದ ಕಥೆಗಳ ಉಗ್ರಾಣ”                              ನೇತ್ರಾವತಿ.ಕೆ.ಬಿ

ಜೀವದ ಕತೆ 22

ಕೆ.ಬಿ.ನೇತ್ರಾವತಿ



      ಹುಟ್ಟುತ್ತಾ ಯಾವುದೇ ಬೇಧ ಭಾವ ಮನಸ್ಸಿನಲ್ಲಿಲ್ಲದೆ ಹುಟ್ಟುವ ನಾವು ಬೆಳೆಯುತ್ತಾ ಅದನ್ನು ಸಮಾಜ ನಮಗೆ ಕಲಿಸುತ್ತದೆ ಅಥವಾ ಕುಟುಂಬದ ಸದಸ್ಯರು ಅದನ್ನು ನಮ್ಮ ಮೇಲೆ ಹೇರುತ್ತಾ ಹೋಗುತ್ತಾರೆ. ಇದರ ಅವಶ್ಯಕತೆ ಇದೆಯೇ?!


     ನನ್ನ ಪ್ರಕಾರ ಇಲ್ಲ, ಈ ಸೃಷ್ಟಿಯಲ್ಲಿ ಎಲ್ಲಾ ಥರದ ಜೀವಿಗಳು, ಸಸ್ಯಗಳು , ತರಕಾರಿಗಳು ಇರುವ ಈ ಪ್ರಪಂಚದಲ್ಲಿ ಎಲ್ಲಾ ವಸ್ತು, ಎಲ್ಲಾ ಸಸ್ಯಗಳನ್ನು ಎಲ್ಲಾ ಪ್ರಾಣಿಗಳನ್ನು ಅವುಗಳ ಇರುವ ರೀತಿಯಲ್ಲೇ ಚಂದವೆಂದು ಪರಿಭಾವಿಸಿ ಆದರಿಸುವ ನಾವು ಮನುಷ್ಯರಲ್ಲೇಕೆ ನೀನು ಕಪ್ಪು ನೀನು ಕೀಳು ನೀನು ಬಿಳಿ ಅದಕ್ಕೆ ಶ್ರೇಷ್ಠ, ನೀನು ಕಪ್ಪಗಿದ್ದರೂ ನೀನು ಮೇಲ್ಜಾತಿ ನೀವು ಶ್ರೇಷ್ಠ, ನೀನು ಬೆಳ್ಳಗಿದ್ದರೂ ನೀನು ದಲಿತ ನೀನು ಶ್ರೇಷ್ಠನಲ್ಲ ಅಂತ ಬೇಧ ಭಾವ ತೋರಿಸುವ ಈ ಸಮಾಜಕ್ಕೆ ಏನೆನನ್ನಬೇಕು.


    ನನಗೂ ಕೂಡ ನಾನು ಕಪ್ಪು ಅದು ಕೀಳು ಹಾಗಿದ್ದರೆ ಮದುವೆಯಾಗದು, ಅಪ್ಪ ಅಮ್ಮನಿಗೆ ಕಷ್ಟ ಅಂತ ನನ್ನ ತಲೆಗೆ ಈ ಸಮಾಜ ತುಂಬಿದ್ದರ ಬಗ್ಗೆ “ಏಯ್ ಕರ್ಕಿ” ಅಧ್ಯಾಯದಲ್ಲಿ ಬರೆದಿದ್ದೇನೆ. ಆದರೆ ಅದೇ ತರಕಾರಿಗಳಲ್ಲಿ ಎಲ್ಲಾ ತರಕಾರಿಗಳನ್ನು ಅದರ ಬಣ್ಣ ಆಕಾರ ನೋಡದೆ ಅದರ ರುಚಿ ಗುಣ ವಿಶೇಷತೆ ಮೇಲೆ ಎಲ್ಲ ತರಕಾರಿ, ಸೊಪ್ಪು ತಿನ್ನುತ್ತೇವೆ. ಅದೇ ಜಾಣತನ ಮನುಷ್ಯರ ಮೇಲೆ ಯಾಕೆ ತೋರಿಸಲ್ಲ ಈ ಸಮಾಜ. ಒಬ್ಬ ಗಿಡ್ಡ, ಉದ್ದ , ದಪ್ಪ, ಕಪ್ಪು ಬಿಳಿ ಹೇಗಿದ್ದರೇನು ಗುಣ ನೋಡಬಹುದಲ್ಲವೇ?


     ಇನ್ನು ನಾವು ಹುಟ್ಟಿದ ಕುಟುಂಬದಲ್ಲಿ ನೀನು ಹೆಣ್ಣು ಕೀಳು ನೀನು ಗಂಡು ಅದಕ್ಕೆ ಶ್ರೇಷ್ಠ ಎಂಬ ಬೇಧ ಭಾವ ನಿಜಕ್ಕೂ ನಿಮ್ಮಲ್ಲಿ ಕೀಳರಿಮೆ ಮೂಡಿಸುತ್ತದೆ. ಇದೇ ಮತ್ತೊಂದು ಅಧ್ಯಾಯ “ಅವಳು ಅಲ್ಲೇ ಬಿದ್ದಿರಲಿ, ಸಾಯಲಿ ಬಾ…!? ದಲ್ಲಿ ಬರೆದಿರುವುದು.


     ಇನ್ನ ಶಾಲೆಗೆ ಹೋಗಲು ಶುರುವಾದ ನಂತರ ನಿನ್ನ ಜಾತಿ ಯಾವುದು ಎಂದು ಕೇಳಿ ನಿನಗೆ ತಿಳಿಯದ ಮತ್ತೊಂದು ವಿಷಯವನ್ನ ನಿನ್ನ ತಲೆಗೆ ತುಂಬಲಾಗುತ್ತದೆ. ನಿನ್ನನ್ನು ಇನ್ನಷ್ಟು ನಿಕೃಷ್ಟ ಎಂಬಂತೆ ಬಿಂಬಿಸಲಾಗುತ್ತದೆ. ಮೇಲ್ಜಾತಿಯವರಾದರೆ ಹೆಮ್ಮೆಯಿಂದ ಅವರ ಜಾತಿ ಹೇಳುತ್ತಾರೆ ಕೂಡಲೇ ಅವರಿಗೆ ಸ್ನೇಹಿತರೂ ಕೂಡ ಆಗುತ್ತಾರೆ ಅವರಿಗೆ ಯಾವುದೇ ಕೀಳರಿಮೆಯನ್ನ ಈ ಸಮಾಜ ನೀಡುವುದಿಲ್ಲ ಇಷ್ಟಕ್ಕೂ ಇವೆಲ್ಲ ಮನುಷ್ಟನ ಸೃಷ್ಟಿ ಅಲ್ಲವೇ? ಇದೇ ನನ್ನ ಅಧ್ಯಾಯ “ಅದೂ ಒಂದು ಜಾತಿ,ಈಗ ಗೊತ್ತಾಯ್ತಲ್ಲ ಹೋಗು” ಎಂಬಲ್ಲಿ ಬರೆದಿರುವುದು.


    ಅಂದರೆ ಹುಟ್ಟಿದಾಗ ನಿನಗೆ ಅರಿವಿರದ ತಾರತಮ್ಯ ಮೇಲು ಕೀಳುಗಳನ್ನ ಈ ಸಮಾಜ , ಸಮಾಜದ ಅಂಗವಾದ ಕುಟುಂಬ ನಿನ್ನ ಮೇಲೆ ಹೇರುತ್ತಾ ಹೋಗುತ್ತದೆ. ಅದರಿಂದ ನಿನ್ನ ಮನಸ್ಸಿನ ಮೇಲೆ ಉಂಟಾಗಬಹುದಾದ ನೋವಿನ ಬಗ್ಗೆ ಈ ಸಮಾಜ ಎಂದೂ ಯೋಚಿಸುವುದಿಲ್ಲ. ನೀನು ಸಣ್ಣ ವಯಸ್ಸಿನಿಂದಲೇ ಒಂಥರಾ ಅರಿವಿಗೆ ಬಾರದ ಕೀಳರಿಮೆ ಒಂಟಿತನದಿಂದ ನರಳುವಂತೆ ಮಾಡುತ್ತದೆ. ಇಂದಿಗೂ ಅದು ಎಷ್ಟು ಜೀವಂತವೆಂದರೆ ಉದಾಹರಣೆಗೆ ಸಚಿವಾಲಯದಲ್ಲಿ ಯಾವ ಜಾತಿ ಮಿನಿಸ್ಟರ್ ಯಾವ ಇಲಾಖೆಗೆ ನೇಮಕಗೊಳ್ಳುತ್ತಾನೆ. ಅವನದೇ ಜಾತಿಯ ಜನ ಆ ಇಲಾಖೆಯ ಮುಖ್ಯ ಸ್ಥಾನಗಳನ್ನ ಅಲಂಕರಿಸುತ್ತಾರೆ. ಅಂದರೆ ಯೋಚಿಸಿ ನಮ್ಮ ಮಾದಿಗ ಜನಾಂಗದ ಮಿನಿಸ್ಟರ್‌ಗಳು ಎಷ್ಟು ಜನರಿದ್ದಾರೆ? ಅಕಸ್ಮಾತ್ ಇದ್ದರೂ ಅವರು ಕೂಡ ಮೇಲ್ಜಾತಿ ಅಧಿಕಾರಿ, ಮಿನಿಸ್ಟರ್ ಗಳನ್ನ ಓಲೈಸಲು ಅವರು ಕೊಟ್ಟ ಲೆಟರ್ ನ್ನು ಪರಿಗಣಿಸಿ ಮೇಲ್ಜಾತಿಯವರನ್ನೇ ನೇಮಿಸಿಕೊಳ್ಳುತ್ತಾರೆ. ಯಾವ ಸರ‍್ಕಾರ ಬಂದರೂ ಈ ಜಾತಿಯ ಆಟ ನಡೆಯುತ್ತಲೇ ಇರುತ್ತದೆ. ಜೀ ಹುಜೂರ್ ಅನ್ನುವ ಅವರು ಹೇಳುವ ಕೆಲಸ ಮಾಡುವ ತನ್ನ ತಲೆ ಉಪಯೋಗಿಸದೆ ಇರುವ ಮಾದಿಗ ಜನಾಂಗದ ಅಧಿಕಾರಿಗಳನ್ನ ಮಾತ್ರ ಇವರು ತಮ್ಮ ಇಲಾಖೆಯಲ್ಲಿ ಇಟ್ಟುಕೊಳ್ಳುತ್ತಾರೆ. ನನ್ನ ಅನುಭವದ ಪ್ರಕಾರ ಇಂದಿಗೂ ಬಲಗೈ ಜಾತಿಯವರು ಎಡಗೈ ಜಾತಿಯವರಿಗೆ ಏನೂ ಸಹಾಯ ಮಾಡುವುದಿಲ್ಲ. 


    ಇಂಥದೇ ಪರಿಸ್ಥಿತಿ ನಾನು ಸಚಿವಾಲಯಕ್ಕೆ ಕರ‍್ತವ್ಯ ವರದಿ ಮಾಡಿಕೊಂಡಾಗ ಕೂಡ ಇತ್ತು. ನಮಗೆ ಡಿಪಿಎಆರ್ ನಿಂದ ಪೋಸ್ಟಿಂಗ್ ಕೊಟ್ಟಾಗ ನಾವು ಐದು ಜನ ಹೆಣ್ಣು ಮಕ್ಕಳಿಗೆ ಪರ‍್ಲಿಮೆಂಟರಿ ಅಫೇರ‍್ಸ್ ಇಲಾಖೆಗೆ ಸ್ಥಳ ನಿಯುಕ್ತಿಗೊಳಿಸಲಾಗಿತ್ತು. ಅಂತೆಯೇ ನಾವು ಅಷ್ಟು ಜನ ರಿಪೋರ‍್ಟ್ ಮಾಡಲು ತೆರಳಿದಾಗ ಅವರು ಬರೀ ನಮ್ಮ ಹೆಸರುಗಳನ್ನಷ್ಟೇ ಕೇಳಿದರು. ಅಂದರೆ ಅದಾಗಲೇ ಅವರಿಗೆ ನಾವು ಯಾವ ಯಾವ ಜಾತಿ ಎಂಬ ವಿಷಯ ತಿಳಿದಿತ್ತು ಅಂತ ಅರ‍್ಥ. ಕೂಡಲೇ ಅವರು ನಾವು ಐವರಲ್ಲಿ ಮೂವರು ಲಿಂಗಾಯಿತರಿದ್ದರು. ಅವರಲ್ಲಿ ಒಬ್ಬಳನ್ನ ಕಾರ್ಯದರ್ಶಿ ಆಪ್ತ ಶಾಖೆಗೆ, ಮತ್ತಿಬ್ಬರನ್ನ ಅಪರ ಕಾರ್ಯದರ್ಶಿ ಶಿಯವರ ಆಪ್ತ ಶಾಖೆಗೆ, ಮತ್ತೊಬ್ಬ ರೆಡ್ಡಿ ಜಾತಿಯವರನ್ನ ಮತ್ತೊಂದು ಅಪರ ಕಾರ್ಯದರ್ಶಿ  ಆಪ್ತ ಶಾಖೆಗೆ ಮತ್ತು ನನ್ನನ್ನ ಟಪಾಲುಗಳನ್ನು ಬರೆಯುವ ಸ್ವೀಕೃತಿ ಮತ್ತು ರವಾನೆ ಶಾಖೆಗೆ ನಿಯೋಜಿಸಿದರು. ಊಹಿಸಿಕೊಳ್ಳಿ ಅದೆಷ್ಟು ಬೇಗ ಈ ಜಾತಿ ಮಾಹಿತಿ ರವಾನೆಯಾಗುತ್ತದೆ. 


    ಇಂದಿಗೂ ನಾನು ಉದ್ಯೋಗದಲ್ಲಿರುವ ರಾಜ್ಯ ಸರ್ಕಾರದ ಕಚೇರಿಯಲ್ಲಿ ಕೂಡ ಜಾತಿಯ ಕಾರಣದಿಂದಾಗಿ ನಮಗೆ ಸಿಗುವ ಗೌರವ ಕಡಿಮೆಯೇ, ಕಾರಣ ಮೇಲ್ಜಾತಿ ಅಧಿಕಾರಿಗಳು, ಜೊತೆಗೆ ದಲಿತರಲ್ಲಿ ಎಡಗೈ ಬಲಗೈ ಎಂಬ ಮೇಲು ಕೀಳು ಬೇರೆ. ಅವರು ನಿಮ್ಮನ್ನು ಆದಷ್ಟೂ ಅವರಿಗಿಂತ ಕೀಳು ಅಂತ ತೋರಿಸುವುದಕ್ಕೇ ಸದಾ ಹಾತೊರೆಯುತ್ತಿರುತ್ತಾರೆ. 


    ಜಾತಿ ಹೆಸರಿನಿಂದ ಎಲ್ಲಾ ರೀತಿಯ ಕಷ್ಟ ಕೋಟಲೆ ಅವಮಾನಗಳಿಗೆ ಬಲಿಯಾಗುವ ನಾವು ನಮ್ಮ ಜನ (ಕುಟುಂಬದವರು ಕೂಡ) ಕೂಡ ನಮಗೆ ಮೋಸ ಮಾಡಬಹುದೆಂದು ಊಹಿಸಿರದೆ ಇದ್ದ ನಾನು ಅದರ ಬಲಿಪಶುವಾದಾಗ ಆಗುವ ಆಘಾತ ಎಲ್ಲಾ ಅಧ್ಯಾಯಗಳಲ್ಲಿ ಕಾಣಸಿಗುತ್ತದೆ. ಬೇರೆ ಜಾತಿಯಲ್ಲಿ ಇರುವಂತಹ ಒಗ್ಗಟ್ಟು ಇನ್ನೂ ನಮ್ಮವರಲ್ಲಿ ಕಾಣಬೇಕಿದೆ. ಅಥವಾ ನಾವು ಇನ್ನೂ ಹೆಚ್ಚು ಸಂಘಟಿತರಾಗಬೇಕಿದೆ. ನಮ್ಮ ಜನರ ಮೋಸದ ಮುಖ ಕಂಡಿರುವ ನಾನು ಅವರಿಂದ ದೂರ ಉಳಿಯಲು ತರ‍್ಮಾನಿಸಲು ಅವರ ಈ ನಡವಳಿಕೆಯೇ ಕಾರಣ, 


     ನನಗೆ ಮತ್ತು ನನ್ನ ಅಕ್ಕನಿಗೆ ಒಂದು ಕನಸಿತ್ತು, ನಾವಿಬ್ಬರೂ ಕೆಲಸಕ್ಕೆ ಸೇರಿದ ಮೇಲೆ ನಮ್ಮದೇ ಆದ ಒಂದು ಎಜುಕೇಷನ್ ಇನ್ಸಿಟಿಟ್ಯೂಷನ್ ತೆರೆಯಬೇಕು ಅದರಲ್ಲಿ ನಮ್ಮ ಮಾದಿಗ ಜನಾಂಗದ ವಿದ್ಯರ‍್ಥಿಗಳಿಗೆ ಹೆಚ್ಚು ಅವಕಾಶ ಕೊಡಬೇಕು ಜಸ್ಟ್ ಲೈಕ್ ಕ್ರಿಶ್ಚಿಯನ್ ವಿದ್ಯಾಸಂಸ್ಥೆಗಳು ಹಾಗೇ ಅವರಿಗೆ ಅತ್ಯಾಧುನಿಕ ಎಲ್ಲಾ ಸೌಕರ‍್ಯ ಇರುವ ಒಂದು ಫ್ರೀ ಹಾಸ್ಟೆಲ್ ಕಟ್ಟಬೇಕು ಎಂಬುದಾಗಿತ್ತು. ಆದರೆ ನಮ್ಮ ಜೀವನ ದಡ ಸೇರಲೇ ಇಲ್ಲ . ಹೀಗಾಗಿ ಹೀಗೊಂದು ಕನಸಿತ್ತು ಅನ್ನುವುದು ಕೂಡ ಮರೆತುಹೋಯಿತು.


    ಗಂಡಸರ ಮದುವೆಯೇತರ ಸಂಬಂಧಗಳಿಂದ ಕುಟುಂಬ ಅನ್ಯಾಯ ಆಗುವುದು ಅದರಿಂದ ರಸ್ತೆ ಮಧ್ಯೆ ಗಂಡ ಹೆಂಡತಿ ನಿಂತು ಜಗಳವಾಡುವುದು, ಗಂಡ ಹೆಂಡತಿಗೆ ಹೊಡೆಯುವುದು ಇದೆಲ್ಲಾ ಸಣ್ಣದರಲ್ಲಿ ನೋಡುತ್ತಿದ್ದ ನನಗೆ ಅದು ಕಡೆಗೆ ನಮ್ಮ ಮನೆ ಹೊಸ್ತಿಲಿಗೇ ಬರುತ್ತದೆ ಎಂದು ಊಹಿಸಿರಲಿಲ್ಲ. ಇವೆಲ್ಲಾ ನಮ್ಮ ವೈಯಕ್ತಿಕ ಅನ್ನಿಸಿದರೂ ಸಮಾಜದಿಂದ ನಾವು ಅನುಭವಿಸುವ ಮೇಲು ಕೀಳಿನ, ತಾರತಮ್ಯ , ಅನ್ಯಾಯ, ಶೋಷಣೆಗಳ ಕತೆಯೇ ನನ್ನ ಈ ಜೀವದ ಕತೆ


*****


     21ನೇ ಶಾತಮಾನದಲ್ಲೂ ನಾವು ದಲಿತರಿಗೆ ಮೀಸಲಾತಿ ಏಕೆ ಬೇಕು ಅಂತ ಸಮಾಜಕ್ಕೆ ರ‍್ಥಮಾಡಿಸುವಲ್ಲಿ ಸೋತಿದ್ದೇವೆ. ಅದಕ್ಕಾಗಿಯೇ ಇನ್ನೂ ಬಹಳ ಜನ ದಲಿತರಿಗೆ ಎಲ್ಲದರಲ್ಲೂ ರಿಯಾಯಿತಿ ಇದೆ ಉದಾ: ಟ್ಯಾಕ್ಸ್ ಕಟ್ಟುವುದರಲ್ಲಿ , ಅಂತ ಕೂಡ ಹೇಳುತ್ತಾರೆ. ಅಂದರೆ ಒಂದು ಗುಂಪಿನ ಒಳಗೆ ವಾಟ್ಸಪ್ ನಲ್ಲಿ ಹರಡುವ ಇಂತಹ ಹಸೀ ಸುಳ್ಳು ವದಂತಿಗಳು ಬೇಗ ಹರಡುತ್ತವೆ. ಅದಕ್ಕೆ ಪೂರಕ ಮಾಹಿತಿಯನ್ನು ಯಾರೂ ಹರಿಯ ಬಿಡುವುದಿಲ್ಲ ಅವು ಜನಕ್ಕೆ ತಲುಪುವುದೂ ಇಲ್ಲ.


    ಉದಾಹರಣೆ 1: ಒಂದು ದಲಿತ ಕುಟುಂಬದಲ್ಲಿ ಓದು ಬರಹ ಬರದೆ ಇರುವ ಕುಟುಂಬದಲ್ಲಿ ಅವರ ಮಕ್ಕಳಿಗೆ ರ‍್ಥವಾಗದ್ದನ್ನ ಹೇಳಿಕೊಡಲು ಕಷ್ಟ ಆಗುತ್ತದೆ. ಅವರನ್ನು ಟ್ಯೂಷನ್ ಗೆ ಕಳಿಸುವುದು ಕೂಡಾ ಕಷ್ಟ ಇರುತ್ತದೆ. ಆದರೆ ಅದೇ ಉನ್ನತ ಜಾತಿ ಕುಟುಂಬಗಳಲ್ಲಿ ಅವರಿಗೆ ಮನೆಗಳಲ್ಲಿ ಹೇಳಿ ಕೊಡಲು ಅಪ್ಪ ಅಮ್ಮ ಓದಿರುತ್ತಾರೆ, ಟ್ಯೂಷನ್ ಗೆ ಕಳಿಸಲು ಶಕ್ತರಾಗಿರುತ್ತಾರೆ. ಸಹಾಯ ಮಾಡಲು ಅವರದೇ ಕಮ್ಯುನಿಟಿಯ ಬೇರೆ ಕುಟುಂಬಗಳಿರುತ್ತದೆ. ಆದರೆ ದಲಿತರಲ್ಲಿ ಓದಿರುವ ಮುಂದೆ ಬಂದಿರುವ ಕುಟುಂಬಗಳು ಅವರದೇ ಜಾತಿಯ ಮಕ್ಕಳಿಗೆ ಸಹಾಯ ಮಾಡಲು ಅವರೊಂದಿಗೆ ಗುರುತಿಸಿಕೊಳ್ಳಲು ಹಿಂದೆಗೆಯುತ್ತಾರೆ. ಇದಾಗಬಾರದು ನಮ್ಮ ಜನರಲ್ಲಿ ಸಾಮರಸ್ಯ ಮೂಡಬೇಕಿದೆ. ಸಹಾಯ ಮನೋಭಾವ ಮೂಡಬೇಕಿದೆ. ತಮ್ಮದೇ ಕೆಲವು ಸ್ನೇಹಿತರ ಗುಂಪು ಕಟ್ಟಿಕೊಂಡು ಕೆಲವು ಸಭೆ ಮಾಡಿಕೊಂಡು ದಲಿತ ಕುಟುಂಬಗಳಿಗೆ ಸಹಾಯವಾಗುವಂತಹ ಅಥವಾ ದಲಿತ ಸಮಾಜಕ್ಕೆ ಸಹಾಯವಾಗುವಂತಹ ಯಾವುದೇ ಕರ‍್ಯಕ್ರಮ ಮಾಡದೆ ಹೆಸರಿಗಾಗಿ ನಡೆಸುವ ಈ ಸಂಘಗಳಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ. 


     ನಮ್ಮ ದಾವಣಗೆರೆ ಇಂಜಿನಿಯರಿಂಗ್ ಕಾಲೇಜಲ್ಲಿ ಟೀಚಿಂಗ್ ಸರಿ ಇಲ್ಲ ಅಂದಾಗ ಅದೇ ಮೇಲ್ಜಾತಿ ಹೆಣ್ಣು ಮಕ್ಕಳು ಅವರದೇ ಜಾತಿಯ ಸೀನಿಯರ್ ಗಳಿಂದ ಬಾಪೂಜಿ ಕಾಲೇಜಿನ ಅದೇ ಜಾತಿಯವರಿಂದ ಎಲ್ಲ ಸಹಾಯ ಪಡೆದರು, ಆದರೆ ನನ್ನೊಂದಿಗೆ ಹಂಚಿಕೊಳ್ಳಲಿಲ್ಲ. ಇಂಥ ಅಸಂಖ್ಯ ನಿದರ್ಶನಗಳು ನನ್ನ ಜೀವನದಲ್ಲಿ ನಡೆದಿವೆ, ನಡೆಯುತ್ತಿವೆ, ನಡೆಯುತ್ತಲೇ ಇರುತ್ತವೆ. ಇದು ಸಿನಿಕತನವಲ್ಲ. ವಾಸ್ತವ.


    ಇನ್ನು ಅಂರ‍್ಜಾತಿ ವಿವಾಹ, ನಮ್ಮ ದಲಿತ ಹುಡುಗರನ್ನ ಮೇಲ್ಜಾತಿ ಹೆಣ್ಣು ಮಕ್ಕಳು ಮದುವೆಯಾಗಿರುವ ಉದಾಹರಣೆ ಸಮಾಜದ ತುಂಬಾ ಕಾಣಸಿಗುತ್ತದೆ. ಆದರೆ ದಲಿತ ಹೆಣ್ಣು ಮಕ್ಕಳನ್ನ ಮೇಲ್ಜಾತಿ ಹುಡುಗರು ಮದುವೆಯಾಗಿದ್ದು ಬೆರಳೆಣಿಕೆಯಷ್ಟು ಜನ. ಆದ್ದರಿಂದ ದಲಿತ ಹುಡುಗರನ್ನು ಮೇಲ್ಜಾತಿ ಹೆಣ್ಣುಮಕ್ಕಳು ಮದುವೆಯಾಗಿರುವ ಬಹಳಷ್ಟು ಕುಟುಂಬಗಳಲ್ಲಿ ಹೆಂಡತಿಯ ಕಡೆಯವರೇ ಪ್ರಾಬಲ್ಯ ಹೊಂದಿ ಗಂಡನ ಅಪ್ಪ, ಅಪ್ಪ, ಅಣ್ಣ, ತಮ್ಮ, ಅಕ್ಕ, ತಂಗಿಯರು ನರ‍್ಲಕ್ಷ್ಯಕ್ಕೊಳಗಾಗಿರುವುದೇ ಹೆಚ್ಚು. ಇಂತ ಅಂರ‍್ಜಾತಿ ವಿವಾಹಗಳಿಂದ ಹೇಳಿಕೊಳ್ಳುವಂತಹ ಬದಲಾವಣೆ ಆಗದು, 


     ನಮ್ಮ ಅಪ್ಪ ಸುಮಾರು ರ‍್ಷ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ನಮ್ಮ ತಮ್ಮನನ್ನೂ ಕರೆದುಕೊಂಡು ದಲಿತ ಸಮಾವೇಶಗಳಿಗೆ, ಪ್ರತಿಭಟನೆಗಳಿಗೆ ಹೋಗುತ್ತಿತ್ತು. ಅವತ್ತಿನ ಎಲ್ಲ ದಲಿತ ಮುಖಂಡರೂ ನಮ್ಮ ಮನೆಗೆ ಬಂದು ಇದ್ದು ಊಟ, ತಿಂಡಿ ಮಾಡುತ್ತಿದ್ದರು. ನಮ್ಮ ಅಪ್ಪ ಡ್ಯೂಟಿಗೆ ರಜ ಹಾಕಿ ದಲಿತ ಸಮಾವೇಶಕ್ಕೆ ಹೋಗುವಾಗ ಕದ್ದು ಜ್ವರ ಅಂತ ಕದ್ದು ಮಲಗುತ್ತಿದ್ದವರು ಇವತ್ತು ದೊಡ್ಡ ದಲಿತ ನಾಯಕರೂ ಚಿಂತಕರೂ ಆಗಿಹೋಗಿದ್ದಾರೆ. ಎಲ್ಲ ಜಾತಿಯ ಶೋಷಿತರು, ಬಡವರು ದಲಿತರು ಎಂದು ಹೇಳುತ್ತಾ ಈ ರಾಜ್ಯದಲ್ಲಿ ನಡೆದ ದಲಿತ ಸಂಘಟನೆಗಳು ಎಡ-ಬಲಗಳಿಂದ ಹಿಡಿದು ಕಾರಣವೇ ಅಲ್ಲದ ಕಾರಣಗಳಿಗಾಗಿ ಒಡೆದು ಚೂರು ಚೂರಾದ ಮಡಕೆಯಂತಾಗಿಬಿಟ್ಟಿವೆ.


    ದಲಿತರು ಕುಡಿಯುತ್ತಾರೆ, ಮದ್ಯ ಸೇವನೆ ಮಾಡಬಾರದು ಎಂದು ಎಲ್ಲ ಸಭೆ ಸಮಾರಂಭಗಳಲ್ಲಿ ಭಾಷಣ ಮಾಡುತ್ತಾರೆ, ಆದರೆ ನಾನು ಸರ‍್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಇದೇ ತರಹದ ರ‍್ಚೆಯಲ್ಲಿ “ನಾವೂ ಮನುಷ್ಯರು, ಕಕ್ಕಸ್‌ ಗುಂಡಿ ವಾಸನೆ ಹರಡಿಸುವ ಚರಂಡಿ ಇವುಗಳನ್ನು ಕ್ಲೀನ್ ಮಾಡಲು ನಮಗೂ ಕಷ್ಟವೇ, ಅದಕ್ಕೆ ಕುಡಿಯುತ್ತೇವೆ ಎಂದು ಹೀಗೆ ಕುಡಿಯುತ್ತಾ ಅದಕ್ಕೆ ದಾಸರಾಗುತ್ತಾರೆ. ಈಗ ಒಳಚರಂಡಿ, ಸಂಪ್ ಕ್ಲೀನ್ ಮಾಡಲು ಮೋಟಾರೈಸ್ಡ್‌ ಲಾರಿ ಪೈಪು ಬಂದಿದೆ,. ಆದರೂ ಮ್ಯಾನ್‌ ಹೋಲ್‌ ಕ್ಲೀನ್‌ ಮಾಡಲು ಇಳಿದು ಸಾವು ಎಂಬ ಎಷ್ಟೊಂದು ಸುದ್ದಿಗಳಲ್ಲಿ ಸಾಯುತ್ತಿರುವುದು ದಲಿತರೇ, 


     ನಮ್ಮ ಜನರಲ್ಲಿ ಸ್ವಲ್ಪ ತಿಳಿವಳಿಕೆ ಬಂದಿದೆ. ಈ ತಿಳಿವಳಿಕೆ ಇನ್ನಷ್ಟು ಎತ್ತರಕ್ಕೆ ಏರಬೇಕು ಮಾದಿಗ ಜಾತಿಯವರಿಗಾಗಿಯೇ ಮೀಸಲಿರಿಸಿರುವ ಈ ಜಾಡಮಾಲಿ, ಕಸ ಗುಡಿಸುವವರು, ಇನ್ನಿತರೆ ಕೆಲಗಳನ್ನ ಮಾದಿಗ ಜಾತಿಯವರು ಮಾಡುವುದು ನಿಲ್ಲಿಸಬೇಕು. ತಮ್ಮ ಮಕ್ಕಳನ್ನ ಹೆಚ್ಚು ಹೆಚ್ಚು ಓದಿಸಿ ಅದರಿಂದ ಆಚೆ ತರಬೇಕು ಇನ್ನೂ ತಲೆ ತಲಾಂತರಕ್ಕೆ ಆ ಕೆಲಸಕ್ಕೆ ಮಾದಿಗರಿಗೆ ಸೇರಿದ್ದು ಎಂಬ ಮನೋಭಾವದಿಂದ ಹೊರಬರಬೇಕಿದೆ. ಇದಕ್ಕೆ ಸಂಘ ಸಂಸ್ಥೆಗಳು ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೈವೇಟ್ ಟ್ಯೂಷನ್ ಗೆ, ಸಹಾಯ ಮಾಡಬೇಕು, ಸರ‍್ಕಾರದ ಫ್ರೀ ಹಾಸ್ಟೆಲ್ ಗುಣಮಟ್ಟ ಕಡಿಮೆ ಇದ್ದು ಇನ್ನೂ ಹೆಚ್ಚಿನ ಸೌಲಭ್ಯವುಳ್ಳ ಅತ್ಯಾಧುನಿಕ ಹಾಸ್ಟೆಲ್ ಕಟ್ಟಿ ಅದರಲ್ಲಿ ಮಾದಿಗ ಜಾತಿಯ ಮಕ್ಕಳು ಓದುವಂತಾಗಬೇಕು. 


   ನೀನು ಏನೇ ಹಣಗಳಿಸಿದರೂ ಜಾತಿಯ ಸಂಕೋಲೆಯಿಂದ ಹೊರ ಬರಲಾಗದ ನಾವು ಸಾಯುವವರೆಗೆ ಅದನ್ನ ಅನುಭವಿಸುವ ನಾವು ಈಗ ಪ್ರಪಂಚದ ತುಂಬ ತುಂಬಿರುವ ಇದೇ ಮನಸ್ಥಿತಿಯ ಭಾರತೀಯರಿಂದ ಜಾತೀಯತೆ ಇಡೀ ವಿಶ್ವವನ್ನೆ ತುಂಬಿಕೊಂಡಿದೆ, ಹಾಗಾಗಿ ನೀನು ಯಾವುದೋ ದೇಶದ ಮೂಲೆಯಲ್ಲಿ ನಿನ್ನ ಪಾಡಿಗೆ ಬದುಕುವುದಕ್ಕಿಂತ ಇದೇ ಭಾರತದಲ್ಲಿ ಇದ್ದು ಜೈಸಬೇಕಿದೆ.


     ಆದರೂ ಅದು ಸುಲಭವಲ್ಲ. ದಲಿತ ಬಲಗೈ ಪಂಗಡದ ನಮ್ಮ ಒಳಾಡಳಿತ ಇಲಾಖೆ ಸಚಿವರಾಗಿರುವ ಡಾ.ಪರಮೇಶ್ರ‍್ರವರು ಆಗಾಗ ಹೇಳುತ್ತಾರೆ. “ನೋಡಿ ನನಗೆ ಏನು ಕಡಿಮೆಯಾಗಿದೆ, ಹಣ ಇದೆ , ಅಂತಸ್ತಿದೆ, ಆದರೂ ನನ್ನನ್ನು ಜಾತಿಯಿಂದ ಗುರುತಿಸುತ್ತಾರೆ ಎಂದು ದುಗುಡದಿಂದ ಹೇಳುತ್ತಾರೆ. ಆದರೆ ಇದೇ ಮನುಷ್ಯರು ತಮ್ಮಂತೆಯೇ ಜನಿಸಿದ ಎಡಗೈನವರನ್ನು ದೂರ ಇಡುತ್ತಾರೆ .ಅದೇ ರೀತಿ ಎಡಗೈ ನವರು ದಕ್ಲರನ್ನು ದೂರ ಇಡುತ್ತಾರೆ. ಹೀಗೆ ಶ್ರೇಣೀಕೃತ ಕ್ರೂರ ಜಾತಿ ವ್ಯವಸ್ಥೆಯನ್ನು ಇಂದಿನ ದಿನಗಳಲ್ಲಿ ಇನ್ನೂ ಗಟ್ಟಿಯಾಗಿಸುವಲ್ಲಿ ಕ್ರಮವಹಿಸುತ್ತಿವೆ ಸರ‍್ಕಾರಗಳು.


     ನಾನು “ನಾನು ಮತ್ತು ದೇವರು” ಚಾಪ್ರ‍್ನಲ್ಲಿ ಇದೇ ವಿಷಯವನ್ನು ವಿಷದವಾಗಿ ಬರೆದಿದ್ದೇನೆ, ನಾವು ಪೂಜೆ ಮಾಡದಿದ್ದರೆ ನಮ್ಮ ಮನೆಗಳಲ್ಲಿ ದೇವರೆಂದು ಪರಿಗಣಿಸಲಾದ ಫೋಟೋ ಅಥವಾ ಮರ‍್ತಿಗಳು ಇಲ್ಲದಿದ್ದರೆ ಯಾವ ತೊಂದರೆಯೂ ಆಗದು. ಅದಕೋಸ್ಕರ ದೇವಸ್ಥಾನಕ್ಕೆ ಹೋಗಿ ಯಾಕೆ ಅವಮಾನ ಅನುಭವಿಸಬೇಕು. ಹಾಗೂ ನಿಮ್ಮ ಮನಸ್ಸಿನ ಸಮಾಧಾನಕ್ಕೆ ಅವಶ್ಯಕವೆನಿಸಿದರೆ ನಿಮ್ಮ ಮನೆ ಅಂಗಳದಲ್ಲೆ ನಿಮಗೆ ಬೇಕಾದ ದೇವರ ಮರ‍್ತಿ ಇಟ್ಟು ಪೂಜೆ ಮಾಡಿ. ನಾನೂ ಅದೇ ಹಾದಿಯಲ್ಲಿದ್ದೇನೆ ಈಗ ನಮ್ಮ ಮನೆಯಲ್ಲಿ ಇರುವುದು ಅಜ್ಜಿ ಅಮ್ಮನಿಗೆ ಕೊಟ್ಟಿದ್ದ ಅಮ್ಮ ನನಗೆ ಕೊಟ್ಟಿರುವ ಬೆಳ್ಳಿ ಗಣೇಶ, ತಾರಾ ಹಾಗೂ ಪುಟಾಣಿ ಬುದ್ಧ. 


   ಮೊನ್ನೆ ಯಾವುದೋ ಆಟೋಬಯಾಗ್ರಫಿ ಬಿಡುಗಡೆ ಸಮಾರಂಭದಲ್ಲಿ ಯಾರೋ ಮಾಡಿದ ಭಾಷಣ ಕೇಳಿದೆ, ಆತ ಹೇಳುತ್ತಿದ್ದ, ಅಟೋಬಯಾಗ್ರಫಿ ಎಂದರೆ ಬರೀ ಗೋಳು ಬರೆಯುತ್ತಾರೆ. ನೋಡಿ ಹೀಗೆ ಇವರಂತೆ ಹಾಸ್ಯಮಯವಾದ ಸಂತೋಷದ ಜೀವನ ಚರಿತ್ರೆ ಬರೆಯಬೇಕು, ಹಾಗೆ ಹೀಗೆ ಕಾಗೆ ಗೂಗೆ ಅಂತ. ಇದನ್ನು ಹೇಳುವವರು ಮುಂದುವರೆದ ಜಾತಿಗಳವರೇ ಹೊರತು ಬೇರೆಯವರಲ್ಲ. ಅವರ ಜಾತಿಯವರಿಗೆ ಬಡತನ ಇರಬಹುದು, ಆದರೆ ಸಮಾಜದಲ್ಲಿ ಒಳ್ಳೆ ಹೆಸರು ಗೌರವ ಇರುತ್ತದೆ. ಅದನ್ನು ಸೋಶಿಯಲ್ ಕ್ಯಾಪಿಟಲ್ ಎನ್ನುತ್ತಾರೆ. ಆದರೆ ನಾವು ದಮನಿತರು, ಅಸ್ಪೃಶ್ಯರು, ದಲಿತರು, ಎಷ್ಟೇ ಹಣ ಗಳಿಸಿದರೂ ದೇವಸ್ಥಾನದ ಗರ್ಭಗುಡಿಗೆ ಕರೆದು ಪೂಜೆ ಮಾಡಲು ಅವಕಾಶ ಕೊಡುವರೇ, ಇಲ್ಲ. ಅಥವಾ ಜಾತಿ ಕೇಳದೆ ಈ ಸಮಾಜದಲ್ಲಿ ಮನೆ ಬಾಡಿಗೆಗೆ ಕೊಡುವರೇ ಅಥವಾ ಮದುವೆಗೆ ಹೆಣ್ಣು -ಗಂಡು ನೋಡುವಾಗ ತಮ್ಮ ಜಾತಿ ಮೀರಿ ಸಂಬಂಧ ಬೆಳೆಸುತ್ತಾರೆಯೇ? ಇಲ್ಲ. ಈ ಸ್ಟಿಗ್ಮಾ ಅನ್ನು ಬೆನ್ನಿಗಂಟಿಸಿಕೊಂಡು ಹುಟ್ಟುವ ದಲಿತರು ಸಾಯುವವರೆಗೂ ಅದರಾಚೆ ಬರುವುದಕ್ಕೆ ಸಾಧ್ಯವಿಲ್ಲ. ಅಂದ ಮೇಲೆ ಆ ಜಾತಿಯಿಂದ ಹುಟ್ಟುವ ಕೋಟಲೆಗಳು ಖಂಡಿತ ಮುಂದುವರೆದ ಜಾತಿಯವರಿಗೆ ಇರಲ್ಲ ಹಾಗಾಗಿ ಅವರ ಹಣಕಾಸಿನ ಕಷ್ಟಗಳನ್ನೇ ದೊಡ್ಡದು ಮಾಡಿ ಸಿನಿಮಾ ಮಾಡಿ ಹಣ ಮಾಡಿದ ಈ ಜನ ಈಗ ದಲಿತರ ಇಂತಹ ಕಷ್ಟಗಳ ಜೀವನ ಕತೆಗಳನ್ನು ಹಳಿಯುವುದರಲ್ಲಿ ಹೊಸತೇನೂ ಇಲ್ಲ. 


    ನಮ್ಮ ಕಷ್ಟಗಳಿಗೆ , ಜೀವನದ ದುರಂತಗಳಿಗೆ ಒಂದು ಈ ಜಾತಿ ಕಾರಣವಾದರೆ, ಕುಟುಂಬಗಳ ಒಳಗೆ ಸಂಬಂಧಗಳ ಒಳಗೆ ಸಾಮರಸ್ಯ, ಪ್ರೀತಿ, ಹೊಂದಾಣಿಕೆ ಇಲ್ಲದಿರುವುದು ಮತ್ತೊಂದು ಕಾರಣ. ಎಲ್ಲ ಮನುಷ್ಯರನ್ನು ಸಮಾನವಾಗಿ ಕಂಡ ಬುದ್ದ, ಬಸವ, ಅಂಬೇಡ್ಕರ್ ನಮಗೆ ಮಾದರಿಯಾಗಬೇಕು. ನಮ್ಮ ಜನ ಜಾತಿ, ಹಣ, ಅಧಿಖಾರ, ಅಂತಸ್ತುಗಳನ್ನೇ ಆದರಿಸಿ ಟೊಳ್ಳು, ಜೊಳ್ಳಾಗಿರುವ ಸಮಾಜದ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿ ತಮ್ಮ ಏಳಿಗೆಯತ್ತ ನಡೆಯಬೇಕು. ಈ ಏಳಿಗೆಗೆ ನಮ್ಮ ಜನ ಇನ್ನಷ್ಟು ಸಂಘಟಿತರಾಗಬೇಕಿದೆ, ಇಲ್ಲವಾದಲ್ಲಿ ನಮ್ಮ ಕುಟುಂಬಕ್ಕೆ ಆದ ಅನ್ಯಾಯಗಳೇ ಮುಂದುವರೆಯುತ್ತದೆ ಎಂಬುದೇ ನನ್ನ ಈ “ಜೀವದ ಕತೆ”ಯ ಆಶಯ. 


ನಮಸ್ಕಾರ.