ಹೆಬ್ಬೂರು: ಭಕ್ತಾದಿಗಳಿಗೆ ಊಟ ಬಡಿಸಿದ ಗೌರಿಶಂಕರ್!

ಹೆಬ್ಬೂರು: ಭಕ್ತಾದಿಗಳಿಗೆ ಊಟ ಬಡಿಸಿದ ಗೌರಿಶಂಕರ್!

ಹೆಬ್ಬೂರು: ಭಕ್ತಾದಿಗಳಿಗೆ ಊಟ ಬಡಿಸಿದ ಗೌರಿಶಂಕರ್!


ತುಮಕೂರು:ತಾಲೂಕಿನ ಹೆಬ್ಬೂರಿನ ಸಿದ್ಧನಾಯಕನಪಾಳ್ಯದಲ್ಲಿ ನಡೆದ ಆಂಜನೇಯಸ್ವಾಮಿ ದೇವಾಲಯದ ಮಹೋತ್ಸವದಲ್ಲಿ ಶಾಸಕ ಡಿ.ಸಿ.ಗೌರಿಶಂಕರ್ ಭಕ್ತಾದಿಗಳಿಗೆ ಸ್ವತಃ ಊಟ ಬಡಿಸುವ ಮೂಲಕ ಅಚ್ಚರಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ವಿವಿಧ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಶ್ರಮಿಸುತ್ತಿದ್ದು, ಈಗಾಗಲೇ ಕೊಲ್ಲಾಪುರದಮ್ಮ ದೇಗುಲದ ಗೋಪುರ ಜೀರ್ಣೋದ್ಧಾರ ಮಾಡಿದ್ದೇನೆ. ಗ್ರಾಮಾಂತರ ಕ್ಷೇತ್ರದಲ್ಲಿ ಉಳ್ಳವರು ದೇವಾಲಯಗಳ ಅಭಿವೃದ್ಧಿಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.
ಕಳೆದ ಎರಡು ವರ್ಷಗಳಿಂದಲೂ ಕೊರೋನ ಹಿನ್ನಲೆಯಲ್ಲಿ ರೈತರಿಂದ ತರಕಾರಿ, ಹಣ್ಣು, ಹಂಪಲು ಖರೀಧಿಸಿ ಗ್ರಾಮಾಂತರ ಕ್ಷೇತ್ರದ ಜನತೆಗೆ ಉಚಿತವಾಗಿ ವಿತರಿಸಿದ್ದೇನೆ, ಜೊತೆಗೆ ಉಚಿತ ಔಷಧಿಗಳನ್ನು ಸಹ ನೀಡಿದ್ದೇನೆ, ಕೊರೋನವನ್ನೂ ಲೆಕ್ಕಿಸದೇ ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ತಿಳಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 1200 ಕೋಟಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಗ್ರಾಮಾಂತರ ಕ್ಷೇತ್ರದಲ್ಲಿ ಮನೆ ಮಗನಾಗಿ ಎಲ್ಲರ ಕಷ್ಟಸುಖದಲ್ಲಿ ಭಾಗಿಯಾಗಿದ್ದೇನೆ. ಕರೋನಾ ಎರಡನೇ ಅಲೆ ಬಂದ ವೇಳೆಯಲ್ಲಿಯೂ ಸಹ ಕ್ಷೇತ್ರದ ಜನರ ಆರೋಗ್ಯ ಕಾಪಾಡಲು ನಾನು ಹಾಗೂ ನನ್ನ ಕಾರ್ಯಕರ್ತರು ಶ್ರಮಿಸಿದ್ದೇವೆ ಎಂದರು.
ಗ್ರಾಮಾAತರ ಕ್ಷೇತ್ರದ ಹೆಬ್ಬೂರು ಹಾಗೂ ಗೂಳೂರು ಭಾಗದ ಕೆರೆಗಳಿಗೆ ಏತ ನೀರಾವರಿ ಯೋಜಜನೆ ಮೂಲಕ ನೀರು ಹರಿಸಲಾಗುತ್ತಿದೆ, ಈ ಭಾಗದ 25 ಕೆರೆಗಳಿಗೆ ವೃಷಭಾವತಿ ನೀರು ಹರಿಸಲು ಸರ್ಕಾರದಿಂದ ಅನುಮೋದನೆ ದೊರೆತಿದ್ದು ಪೈಪ್ ಲೈನ್ ಅಳವಡಿಸಿ ಶೀಘ್ರವಾಗಿ ಕೆರೆಗಳಿಗೆ ನೀರು ಹರಿಸುವುದಾಗಿ ಭರವಸೆ ನೀಡಿದರು.
ಹೆಬ್ಬೂರು ಚಿಕ್ಕಣ್ಣಸ್ವಾಮಿ ದೇವಸ್ಥಾನದ ಧರ್ಮದರ್ಶಿ ಡಾ.ಪಾಪಣ್ಣ, ಗೋವಿಂದಪ್ಪ, ಕೆ.ಬಿ.ರಾಜಣ್ಣ, ಸಿರಾಕ್ ರವೀಶ್, ರಾಮಚಂದ್ರಪ್ಪ ಸೇರಿದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.