``ಪುನೀತ್‌ರದು ಭಾರತೀಯರ ಮನಸಿನಲ್ಲಿ ಅಚ್ಚಳಿಯದ ಸೇವೆ’’ ಪುಣ್ಯ ಸ್ಮರಣೆಯಲ್ಲಿ ಮಾಜಿ ಶಾಸಕ ರಫೀಕ್ ಅಹಮದ್ ಸ್ಮರಣೆ

``ಪುನೀತ್‌ರದು ಭಾರತೀಯರ ಮನಸಿನಲ್ಲಿ ಅಚ್ಚಳಿಯದ ಸೇವೆ’’ ಪುಣ್ಯ ಸ್ಮರಣೆಯಲ್ಲಿ ಮಾಜಿ ಶಾಸಕ ರಫೀಕ್ ಅಹಮದ್ ಸ್ಮರಣೆ


``ಪುನೀತ್‌ರದು ಭಾರತೀಯರ ಮನಸಿನಲ್ಲಿ ಅಚ್ಚಳಿಯದ ಸೇವೆ’’
ಪುಣ್ಯ ಸ್ಮರಣೆಯಲ್ಲಿ ಮಾಜಿ ಶಾಸಕ ರಫೀಕ್ ಅಹಮದ್ ಸ್ಮರಣೆ

ತುಮಕೂರು: ಇತ್ತೀಚೆಗೆ ನಿಧನರಾದ ಚಲನಚಿತ್ರ ನಾಯಕ ನಟ ಪುನೀತ್ ರಾಜ್‌ಕುಮಾರ್ ಅವರ 11ನೇ ದಿನದ ಪುಣ್ಯ ಸ್ಮರಣೆಗೆ ಅಂಗವಾಗಿ ಮಾಜಿ ಶಾಸಕ ಡಾ. ರಫೀಕ್ ಅಹಮದ್ ಅವರು ನಗರದ ವಿವಿಧ ವೃತ್ತಗಳಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. 


ನಗರದ ಗುಬ್ಬಿ ಗೇಟ್ ವೃತ್ತ, ಭದ್ರಮ್ಮ ವೃತ್ತ ಹಾಗೂ ಕ್ಯಾತ್ಸಂದ್ರ ವೃತ್ತಗಳಲ್ಲಿ ಅಕಾಲಿಕ ಮರಣಕ್ಕೆ ತುತ್ತಾದ ತನ್ನ ನಟನೆಯ ಮೂಲಕವೇ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದ್ದ ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆ ಆಂಗವಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.


ಈ ವೇಳೆ ಮಾತನಾಡಿದ ಡಾ. ರಫೀಕ್ ಅಹಮದ್, ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆ ಅಂಗವಾಗಿ ನಾಡಿನೆಲ್ಲಡೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಜನರು ಹಮ್ಮಿಕೊಂಡಿದ್ದು, ತುಮಕೂರಿನ ವಿವಿಧೆಡೆ ನಮ್ಮ ಕಡೆಯಿಂದ ನೂರಾರು ಜನರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಆರು ತಿಂಗಳ ಬಾಲಕನಿಂದ ಚಲನಚಿತ್ರದಲ್ಲಿ ನಟಿಸುತ್ತಾ, ಸುಮಾರು 46 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ಮನೋಜ್ಞ ನಟನೆಯ ಮೂಲಕ ಕರ್ನಾಟಕವಲ್ಲದೆ ಇಡೀ ಭಾರತದ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಎಡಗೈನಲ್ಲಿ ದಾನ ಮಾಡಿದ್ದು ಬಲಗೈಗೆ ಗೊತ್ತಾಗಬಾರದು ಎಂಬAತೆ ತಮ್ಮ ಕುಟುಂಬದವರಿಗೂ ತಿಳಿಯದಂತೆ ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ಪುನೀತ್ ತೊಡಗಿದ್ದು, ಅವರ ನಿಧನದ ನಂತರ ಒಂದೊAದೇ ಬೆಳಕಿಗೆ ಬರುತ್ತಿವೆ. ಅವರ ಈ ಮಾನವೀಯ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಈ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಗವಂತ ಪುನೀತ್ ರಾಜಕುಮಾರ್ ಕುಟುಂಬಕ್ಕೆ, ಅಭಿಮಾನಿಗಳಿಗೆ ಅವನ ಸಾವಿನ ನೋವು ಭರಿಸುವಂತಹ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.


ಮಾಜಿ ಸಚಿವ ಗುಬ್ಬಿ ಶಾಸಕ ವಾಸಣ್ಣ, ನಗರಪಾಲಿಕೆ ವಿರೋಧ ಪಕ್ಷದ ನಾಯಕ ಜೆ. ಕುಮಾರ್, ಸ್ಥಾಯಿ ಸಮಿತಿ ಸದಸ್ಯ ನಯಾಜ್, ಪಾಲಿಕೆ ಮಾಜಿ ಸದಸ್ಯ ಮೆಹಬೂಬ್ ಪಾಷ, ಜಾಕಿರ್ ಪಾಷ ಮತ್ತಿತರರು ಜೊತೆಗಿದ್ದರು.