ನಬಾರ್ಡ್, ಡಿಸಿಸಿಬ್ಯಾಂಕ್ ಸಹಯೋಗದಲ್ಲಿ ರೈತಮಾಲ್ ಸ್ಥಾಪನೆಗೆ ಚಿಂತನೆ ಒAದೇ ಸೂರಿನಡಿ ಕಡಿಮೆ ದರಕ್ಕೆ ಎಲ್ಲಾ ಕೃಷಿ ಸಲಕರಣೆ -ರಮೇಶ್‌ಕುಮಾರ್

ನಬಾರ್ಡ್, ಡಿಸಿಸಿಬ್ಯಾಂಕ್ ಸಹಯೋಗದಲ್ಲಿ ರೈತಮಾಲ್ ಸ್ಥಾಪನೆಗೆ ಚಿಂತನೆ ಒAದೇ ಸೂರಿನಡಿ ಕಡಿಮೆ ದರಕ್ಕೆ ಎಲ್ಲಾ ಕೃಷಿ ಸಲಕರಣೆ -ರಮೇಶ್‌ಕುಮಾರ್

ನಬಾರ್ಡ್, ಡಿಸಿಸಿಬ್ಯಾಂಕ್ ಸಹಯೋಗದಲ್ಲಿ ರೈತಮಾಲ್ ಸ್ಥಾಪನೆಗೆ ಚಿಂತನೆ
ಒAದೇ ಸೂರಿನಡಿ ಕಡಿಮೆ ದರಕ್ಕೆ ಎಲ್ಲಾ ಕೃಷಿ ಸಲಕರಣೆ -ರಮೇಶ್‌ಕುಮಾರ್

ಕೋಲಾರ:- ನಬಾರ್ಡ್ ಹಾಗೂ ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಅನ್ನದಾತನಿಗೆ ಅಗತ್ಯವಾದ ಎಲ್ಲಾ ಪರಿಕರಗಳು ಒಂದೇ ಸೂರಿನಡಿ ಸಿಗುವಂತೆ ಮಾಡುವ ರೈತ ಮಾಲ್ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ, ಕೃಷಿಕನ ಋಣ ತೀರಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದು, ಅಂತಿಮ ರೂಪ ನೀಡಲು ನ.13 ರಂದು ಮತ್ತೆ ಸಭೆ ಕರೆಯುವುದಾಗಿ ಶಾಸಕ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.
ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರು ಹಾಗೂ ಸಹಕಾರಿ ಮುಖಂಡರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ರೈತರಿಗೆ ಅಗತ್ಯವಾದ ಗೊಬ್ಬರ,ಕೃಷಿ ಯಂತ್ರಗಳು, ಕೀಟನಾಶಕ, ಕೃಷಿಗೆ ಅಗತ್ಯವಾದ ಎಲ್ಲಾ ರೀತಿಯ ಸಲಕರಣೆಗಳನ್ನು ಒಂದೇ ಸೂರಿನಡಿ ಸಿಗುವಂತೆ ಮಾಡಲು ಟಿಎಪಿಸಿಎಂಎಸ್ ಆಶ್ರಯದಲ್ಲಿ ರೈತ ಮಾಲ್ ಸ್ಥಾಪಿಸುವ ಮೂಲಕ ರೈತರು ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ದುರುಪಯೋಗಕ್ಕೆ ಅವಕಾಶವಿಲ್ಲದಂತೆ ರೈತರಿಗೆ ಡಿಸಿಸಿ ಬ್ಯಾಂಕ್ ಮೂಲಕ ಕ್ರೆಡಿಟ್ ಕಾರ್ಡ್ ನೀಡಲಿದ್ದು, ಅದನ್ನು ಬಳಸಿ ಅಗತ್ಯ ಸಲಕರಣೆ ಪಡೆಯಬಹುದಾಗಿದೆ, ಜತೆಗೆ ಕಂಪನಿಗಳಿAದ ರೈತರಿಗೆ ಅಗತ್ಯವಾದ ಉತ್ಪನ್ನವನ್ನು ನೇರವಾಗಿ ಮಾಲ್ ಪಡೆಯುವುದರಿಂದ ರೈತರಿಗೆ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಉತ್ಪನ್ನ ಸಿಗಲಿದೆ ಎಂದರು.
2004 ರಿಂದ 2014ರವರೆಗೂ ಡಿಸಿಸಿ ಬ್ಯಾಂಕ್ ದಿವಾಳಿಯಾಗಿ ಜಿಲ್ಲೆಯ ರೈತರಿಗೆ ಯಾವುದೇ ಸಾಲ ಮನ್ನಾ ಪ್ರಯೋಜನ ಸಿಕ್ಕಿರಲಿಲ್ಲ,ಇದೀಗ ಬ್ಯಾಂಕ್ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ,ವಾಣಿಜ್ಯ ಬ್ಯಾಂಕುಗಳು, ಚಿನ್ನದ ಸಾಲ ನೀಡುವ ಬ್ಯಾಂಕುಗಳಿಗೆ ಕರುಣೆ ಇಲ್ಲ, ರೈತರ ಶೋಷಣೆ ನಡೆಯುತ್ತಿದೆ, ಇದೆಲ್ಲವನ್ನು ತಪ್ಪಿಸಿ ರೈತರ ಋಣ ತೀರಿಸುವ ಸದುದ್ದೇಶ ಇದಾಗಿದೆ ಎಂದರು.
ಕುರಿ,ಕೋಳಿ,ಮೇಕೆ ಮಾಂಸ ಕಸಾಯಿಖಾನೆ ಸ್ಥಾಪನೆ, ಮಾಂಸ ರಫ್ತು ಕುರಿತಂತೆ ಅಗತ್ಯ ಮಾಹಿತಿ ಸಂಗ್ರಹಿಸಲು ನಸೀರ್ ಅಹಮದ್ ಅವರಿಗೆ, ಹಣ್ಣು, ತರಕಾರಿ ಬೆಳೆ ಮತ್ತು ಬೇಡಿಕೆ ಕುರಿತು ಮಾಹಿತಿ ಸಂಗ್ರಹಿಸಲು ಡಿಸಿಸಿ ಬ್ಯಾಂಕ್ ನಿರ್ದೇಶಕ ಅನಿಲ್‌ಕುಮಾರ್ ಅವರಿಗೆ ಸೂಚಿಸಿದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಎರಡೂ ಜಿಲ್ಲೆಗಳಲ್ಲಿ ರೈತ ಮಾಲ್ ಸ್ಥಾಪಿಸುವ ಮೂಲಕ ರೈತರಿಗೆ ನೆರವಾಗುವ ಪ್ರಯತ್ನ ಶ್ಲಾಘನೀಯ, ಇದರ ಜತೆಗೆ ರೈತರಿಗೆ ನ್ಯಾನೋ ಗೊಬ್ಬರ ಬಳಕೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.


ರೈತ ಉತ್ಪಾದಕ ಸಂಸ್ಥೆ ಮೂಲಕ ವಹಿವಾಟು


ಶಾಸಕ ಶಿವಶಂಕರರೆಡ್ಡಿ ಮಾತನಾಡಿ, ಕೇಂದ್ರದ ಇತ್ತೀಚಿನ ನೀತಿ ಖಾಸಗೀಕರಣದತ್ತ ಸಾಗಿದೆ, ರೈತ ಮಾಲ್ ಜತೆಗೆ ರೈತ ಉತ್ಪಾದಕ ಸಂಸ್ಥೆಗಳನ್ನು ಬಲಿಷ್ಟಗೊಳಿಸುವ ಮೂಲಕ ರೈತರ ಉತ್ಪನ್ನಗಳಿಗೂ ಮಾರುಕಟ್ಟೆ ಒದಗಿಸುವ ಪ್ರಯತ್ನ ನಡೆಸಬೇಕಾಗಿದೆ ಎಂದ ಅವರು, ರಾಜ್ಯದಲ್ಲೇ ಇದು ಹೊಸ ಪ್ರಯತ್ನ ಎಂದರು. 
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ರೈತರಿಗೆ ಅಗತ್ಯ ಸಲಕರಣೆ ಒದಗಿಸುವುದರ ಜತೆಗೆ ರೈತ ಬೆಳೆದ ಬೆಳೆಗಳ ಮಾರಾಟಕ್ಕೆ ಮಧ್ಯವರ್ತಿಗಳ ಕಾಟ ತಪ್ಪಿಸಲು ಪ್ರಯತ್ನ ಮಾಡೋಣ ಎಂದರು.
ಕೆಸಿ ವ್ಯಾಲಿಗಾಗಿ ಸದನದಲ್ಲಿ ರಮೇಶ್‌ಕುಮಾರ್ ಕಣ್ಣೀರು ಹಾಕಿದ್ದನ್ನು ಮರೆಯಲು ಸಾಧ್ಯವಿಲ್ಲ, ಜತೆಗೆ ಡಿಸಿಸಿ ಬ್ಯಾಂಕ್ ಮೂಲಕ ಬಡ್ಡಿರಹಿತ ಸಾಲ ಕೊಡಿಸಲು ಅವರು ಪ್ರಯತ್ನ ಫಲ ನೀಡಿತು ಎಂದು ತಿಳಿಸಿ, ಡಿಸಿಸಿ ಬ್ಯಾಂಕ್ ಮೂಲಕ ಇಂದು ಲಕ್ಷಾಂತರ ಮಹಿಳೆಯರ ಬದುಕು ಹಸನಾಗಿದೆ, ಬ್ಯಾಂಕ್ ಮನೆಮಾತಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ನಸೀರ್ ಅಹಮದ್ ಮಾತನಾಡಿ, ರೈತ ಮಾಲ್ ಜತೆಗೆ ಜಿಲ್ಲೆಯಲ್ಲಿ ಪುಡ್ ಪ್ರೊಸೆಸ್ಸಿಂಗ್ ಯುನಿಟ್‌ಗಳ ಸ್ಥಾಪನೆಗೂ ಒತ್ತು ನೀಡಬೇಕು, ಕೃಷಿ ಉತ್ಪನ್ನಗಳ ರಫ್ತಿಗೆ ಒತ್ತು ನೀಡಬೇಕು, ಈ ನಿಟ್ಟಿನಲ್ಲಿ ಆಲೋಚನೆ ಅಗತ್ಯ ಎಂದರು.
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಇಡೀ ದೇಶದಲ್ಲೇ ನಡೆಸುತ್ತಿರುವ ಮೊದಲ ಪ್ರಯೋಗ ಇದಾಗಿದ್ದು, ಇದಕ್ಕೆ ಎಲ್ಲರ ಸಹಮತ ಇದೆ, ಕ್ರೆಡಿಟ್ ಕಾರ್ಡ್ ವಹಿವಾಟಿನಿಂದ ಬ್ಯಾಂಕ್-ಗ್ರಾಹಕರ ನಡುವೆ ಸಂಪರ್ಕ ವೃದ್ದಿಗೂ ಸಹಕಾರಿಯಾಗಲಿದೆ ಎಂದರು.


ಸಹಕಾರಿ ವ್ಯವಸ್ಥೆಯಲ್ಲಿ ಅಸಾಧ್ಯವೆಂಬುದಿಲ್ಲ


ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಸಹಕಾರಿ ವ್ಯವಸ್ಥೆಯಲ್ಲಿ ಅಸಾಧ್ಯವೆಂಬುದಿಲ್ಲ, ಇಚ್ಚಾಶಕ್ತಿ ಇದ್ದರೆ ಸಾಧನೆ ಮಾಡಬಹುದು, ಪ್ಯಾಕ್ಸ್ ಮತ್ತು ಟಿಎಪಿಸಿಎಂಎಸ್‌ಗಳಿಗೆ ಶೇ.1 ರ ಬಡ್ಡಿದರದಲ್ಲಿ ನಬಾರ್ಡ್ ಸಾಲ ನೀಡಲಿದ್ದು, ರೈತ ಮಾಲ್ ಸ್ಥಾಪನೆಯ ಹಾದಿ ಸುಗಮವಾಗಿದೆ ಎಂದರು.
ನಬಾರ್ಡ್ ಸಿಜಿಎಂ ಮುಂದಿನ ವಾರ ಬೆಂಗಳೂರಿನ ಅಪೆಕ್ಸ್ ಬ್ಯಾಂಕಿಗೆ ಬರಲಿದ್ದು, ಈ ಕುರಿತು ಮಾತನಾಡುವೆ, ಇದರಿಂದ ಸಹಕಾರಿ ವ್ಯವಸ್ಥೆಯ ಗೌರವ ಹೆಚ್ಚಲಿದೆ ಎಂದರು.
ಸಭೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಶ್ರೀನಿವಾಸನ್, ಕೋಚಿಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ, ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಹನುಮಂತರೆಡ್ಡಿ, ನಾಗನಾಳ ಸೋಮಣ್ಣ, ಮಾಜಿ ಉಪಾಧ್ಯಕ್ಷ ನಾಗರಾಜ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಮಾತನಾಡಿ ರೈತಮಾಲ್ ಉತ್ತಮ ಕಲ್ಪನೆಯಾಗಿದ್ದು, ಇದು ಶೀಘ್ರವಾಗಲಿ ಎಂದು ಕೋರಿದರು.
ಸಭೆಯಲ್ಲಿ ಸಹಕಾರಿ ಯೂನಿಯನ್ ಅಧ್ಯಕ್ಷ ಅ.ಮು.ಲಕ್ಷಿö್ಮÃನಾರಾಯಣ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್‌ಕುಮಾರ್,ಚೆನ್ನರಾಯಪ್ಪ, ಎಸ್.ವಿ.ಸುಧಾಕರ್, ಗೋವಿಂದರಾಜು,ವೆAಕಟರೆಡ್ಡಿ, ಚಿಕ್ಕಬಳ್ಳಾಪುರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಾಗೇಪಲ್ಲಿ ನಾಗರಾಜ್,ಚಂದ್ರಶೇಖರ್, ನಾರಾಯಣಸ್ವಾಮಿ, ಶ್ರೀನಿವಾಸಪುರ ಟಿಎಪಿಸಿಎಂಎಸ್ ಅಧ್ಯಕ್ಷ ಬಗ್ಗಲಘಟ್ಟ ಶ್ರೀನಿವಾಸರೆಡ್ಡಿ,ಅಣ್ಣಿಹಳ್ಳಿ ನಾಗರಾಜ್ ಮತ್ತಿತರರಿದ್ದರು.