ರಂಗಾಯಣದಿಂದ ನಗರದಲ್ಲಿ ನಾಳೆ ಹಕ್ಕಿ ಕಥೆ - ಮಕ್ಕಳ ಪಪ್ಪೆಟ್ ನಾಟಕ

ರಂಗಾಯಣದಿಂದ ನಗರದಲ್ಲಿ ನಾಳೆ ಹಕ್ಕಿ ಕಥೆ - ಮಕ್ಕಳ ಪಪ್ಪೆಟ್ ನಾಟಕ


ರಂಗಾಯಣದಿಂದ ನಗರದಲ್ಲಿ ನಾಳೆ
ಹಕ್ಕಿ ಕಥೆ - ಮಕ್ಕಳ ಪಪ್ಪೆಟ್ ನಾಟಕ

ತುಮಕೂರು: ಝೆನ್ ಟೀಮ್ ಇದೇ ತಿಂಗಳ 12 ರ ಶುಕ್ರವಾರ ಸಂಜೆ 6.45 ಕ್ಕೆ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶಿವಮೊಗ್ಗ ರಂಗಾಯಣ ಕಲಾವಿದರು ಪ್ರಸ್ತುತಪಡಿಸುತ್ತಿರುವ `ಹಕ್ಕಿ ಕಥೆ' ಎಂಬ ವಿನೂತನ ಮಕ್ಕಳ ಪಪ್ಪೆಟ್ ನಾಟಕ ಆಯೋಜಿಸುತ್ತಿದೆ ಎಂದು ಝೆನ್ ಟೀಮ್‌ನ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.


ಪಪ್ಪೆಟ್ ಹಾಗೂ ಅಭಿನಯ ಮಾದರಿಯಲ್ಲಿ ನಡೆಯುವ ಈ ನಾಟಕ ಮಕ್ಕಳನ್ನು ಬೇರೆಯz್ದೆÃ ಲೋಕಕ್ಕೆ ಕರೆದುಕೊಂಡು ಹೋಗುವುದಲ್ಲದೆ ಸಿನಿಮಾದ ಅನುಭವವನ್ನು ಕೊಡುತ್ತದೆ. ಸುಮಾರು 20 ಮಂದಿ ಅಭಿನಯಿಸುವ ಈ ನಾಟಕ ಮಕ್ಕಳ ಮನೋವಿಕಾಸ ಹಾಗೂ ಅವರ ಆಲೋಚನಾ ಕ್ರಮಗಳನ್ನು ವಿಸ್ತರಿಸುತ್ತದೆ. ಒಂದು ಗಂಟೆ 20 ನಿಮಿಷ ಅವಧಿಯ ಈ ನಾಟಕದಲ್ಲಿ ಮಕ್ಕಳಿಗೆ ಕಚಗುಳಿ ಇಡುವ ಅನೇಕ ದೃಶ್ಯಗಳಿವೆ. ಈ ನಾಟಕ ಮಿಸ್ ಮಾಡಿಕೊಂಡರೆ ಏನನ್ನೋ ಕಳೆದುಕೊಂಡAತಾಗುತ್ತದೆ. ಈ ನಾಟಕಕ್ಕೆ 30 ರುಪಾಯಿ ಪ್ರವೇಶ ಶುಲ್ಕವಿದೆ ಎಂದು ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.
ಈ ಮಕ್ಕಳ ನಾಟಕವನ್ನು ರೋಟರಿ 3190 ಸಹಾಯಕ ರಾಜ್ಯಪಾಲ ಬೆಳ್ಳಿ ಲೋಕೇಶ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್, ನೇತ್ರ ತಜ್ಞ ಡಾ. ಕೆ.ಆರ್. ಮಂಜುನಾಥ್, ಛಾಯಾಗ್ರಾಹಕ ಟಿ.ಹೆಚ್. ಸುರೇಶ್ ಹಾಗೂ ಉಗಮ ಶ್ರೀನಿವಾಸ್ ಪಾಲ್ಗೊಳ್ಳಲಿದ್ದಾರೆ. ಈ ನಾಟಕವನ್ನು ಗಣೇಶ್ ಮಂದಾರ್ತಿ, ಶ್ರವಣ್ ಹೆಗ್ಗೋಡು ನಿರ್ದೇಶಿಸಿದ್ದಾರೆ.
ಕಥೆ ಬಗ್ಗೆ.......
ಹಿರಿಯ ಸಾಹಿತಿ ನಾ. ಡಿಸೋಜಾ ಅವರ ಕಾದಂಬರಿ ಆಧಾರಿತ ಹಕ್ಕಿ ಕಥೆ ಎಂಬ ಮಕ್ಕಳ ನಾಟಕವನ್ನು ಶಿವಮೊಗ್ಗ ರಂಗಾಯಣದ ಕಲಾವಿದರು ಅಭಿನಯಸಿದ್ದಾರೆ. ಪ್ರಕೃತಿಯ ಇತರ ಜೀವಿಗಳ ಸಹಜ ಬದುಕಿನ ಮೇಲೆ ಮನುಷ್ಯನ ಹಸ್ತಕ್ಷೇಪ ಎಂಥದ್ದು ಮತ್ತು ಅದಕ್ಕೆ ಪ್ರಕೃತಿ ಕೊಡುವ ತಿರುಗೇಟು ಏನು ಎಂಬುದು ಈ ನಾಟಕದಲ್ಲಿ ಅಡಕವಾಗಿದೆ. ಪಶ್ಚಿಮಘಟ್ಟಗಳ ಮೇಲಾಗುವ ಮನುಷ್ಯನ ಯಂತ್ರದಾಳಿಗೆ ಹೆದರಿ ಹಕ್ಕಿಗಳು ಕಾಡನ್ನು ತೊರೆಯುತ್ತವೆ. ಅಲ್ಲಿಂದ ಶುರುವಾಗುವ ಆ ಜೀವಿಗಳ ಬದುಕು ದಾರುಣವಾಗುತ್ತಾ ಬರುವ ಚಿತ್ರಣ ಈ ನಾಟಕದಲ್ಲಿದೆ. ಕಾರ್ಖಾನೆಯ ವಿಷದ ಹೊಗೆ, ಡೈನಾಮೈಟ್‌ಗಳ ಸ್ಫೋಟ, ಮುಳುಗಡೆಯ ಪ್ರದೇಶಗಳಿಂದಾಗುವ ಅವಾಂತರ ಹೀಗೆ ಒಂದಾದ ಮೇಲೊಂದು ಅವಘಡಗಳಿಗೆ ಸಿಲುಕಿ ಹಕ್ಕಿಗಳು ಸಾಯುತ್ತವೆ. ಕೊನೆಯಲ್ಲಿ ಮರಗಳ ಕೇಡಿಗೆ ಹೆದರಿ ಮೊಬೈಲ್ ಟವರ್‌ಗಳ ಮೇಲೆ ಗೂಡು ಕಟ್ಟುವ ಸ್ಥಿತಿ, ಮನುಷ್ಯನ ಆಧುನಿಕ ಬದುಕಿನ ಕ್ರೌರ್ಯವನ್ನು ವ್ಯಂಗ್ಯವಾಗಿ ತೋರಿಸುತ್ತದೆ. ಅಲ್ಲಿಗೂ ಬರುವ ಮನುಷ್ಯನ ಸ್ವಾರ್ಥ ಬುದ್ಧಿಗೆ ಪ್ರಕೃತಿ ತನ್ನದೇ ರೀತಿಯಲ್ಲಿ ಉತ್ತರಿಸಿಬಿಡುತ್ತದೆ. ಇಂತಹ ಸನ್ನಿವೇಶಗಳು ನಾಟಕದಲ್ಲಿ ಚಿತ್ರಿತವಾಗಿದೆ.