ಸವಾಲಿನ ರಾಜಕಾರಣದ ನಂತರ ಅಭಿವೃದ್ಧಿಯತ್ತ ಚಿತ್ತ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ ಗೌರಿಶಂಕರ್

ಸವಾಲಿನ ರಾಜಕಾರಣದ ನಂತರ ಅಭಿವೃದ್ಧಿಯತ್ತ ಚಿತ್ತ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ ಗೌರಿಶಂಕರ್

ಸವಾಲಿನ ರಾಜಕಾರಣದ ನಂತರ ಅಭಿವೃದ್ಧಿಯತ್ತ ಚಿತ್ತ
ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ ಗೌರಿಶಂಕರ್


ತುಮಕೂರು: ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆಯ ಬಗ್ಗೆ ಮಾಜಿ ಶಾಸಕ ಸುರೇಶ್ ಗೌಡ ಅವರೊಂದಿಗೆ ಸವಾಲಿನ ರಾಜಕಾರಣದ ಜೊತೆ ಜೊತೆಗೇ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ. ಗೌರಿಶಂಕರ್.
ತಾಲ್ಲೂಕಿನ ನೇರಳಾಪುರದಲ್ಲಿರುವ ಕೆಂಪಮ್ಮ ದೇವಿ ದೇವಸ್ಥಾನದ ಮುಂಭಾಗದ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದ ಅವರು, ಹರಳೂರು ಗ್ರಾಮ ಪಂಚಾಯಿತಿಯ ಕೊಟ್ಟಿಗೆ ಗೊಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುರಸ್ಥಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದರು.
ಇದರೊಂದಿಗೆ ದೊಡ್ಡೇಗೌಡನಪಾಳ್ಯ, ನಾಯಕನಪಾಳ್ಯ, ಗುನೇಗೊಲ್ಲಹಳ್ಳಿ, ಸಿದ್ಧಾಪುರ, ಭೈರಸಂದ್ರ, ರೈತರಪಾಳ್ಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲ್ಲೂಕನ್ನು ಅಭಿವೃದ್ಧಿ ಮಾಡುವುದೇ ನನ್ನ ಗುರಿ ಎಂದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರಪ್ಪ, ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ಗ್ರಾ.ಪಂ. ಸದಸ್ಯರಾದ ಎಸ್. ವಿಜಯಕುಮಾರಿ, ಪವಿತ್ರ, ಮೇಘನ, ಶಾರದಮ್ಮ, ಶ್ರೀನಿವಾಸ್, ಸುರೇಶ್, ಸೊಸೈಟಿ ಬೈಲಪ್ಪ ಜೆಡಿಎಸ್ ಮುಖಂಡರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.