ಇಂದು ಡಾ.ಪ್ರಿಯಾಂಕ ರವರ  ``ಕಾಲ ನಾ....!'',   ``ಹದಿಹರೆಯದವರ ನಿತ್ಯ ಗೊಂದಲಗಳ ಗುಟ್ಟು'' ಪುಸ್ತಕ ಬಿಡುಗಡೆ 

priyanka-m-g-book-release-today

ಇಂದು ಡಾ.ಪ್ರಿಯಾಂಕ ರವರ  ``ಕಾಲ ನಾ....!'',   ``ಹದಿಹರೆಯದವರ ನಿತ್ಯ ಗೊಂದಲಗಳ ಗುಟ್ಟು'' ಪುಸ್ತಕ ಬಿಡುಗಡೆ 


ಇಂದು ಡಾ.ಪ್ರಿಯಾಂಕ ರವರ  ``ಕಾಲ ನಾ....!'',  
``ಹದಿಹರೆಯದವರ ನಿತ್ಯ ಗೊಂದಲಗಳ ಗುಟ್ಟು'' ಪುಸ್ತಕ ಬಿಡುಗಡೆ 

ತುಮಕೂರು: ಅಂಕಣಕಾರರಾದ ಡಾ.ಪ್ರಿಯಾಂಕ ಎಂ.ಜಿ ಅವರ ``ಕಾಲ ನಾ....!'' ಮತ್ತು ``ಹದಿಹರೆಯದವರ ನಿತ್ಯ ಗೊಂದಲಗಳ ಗುಟ್ಟು'' ಎಂಬ ಎರಡು ಪುಸ್ತಕಗಳು ಡಿಸೆಂಬರ್ 30ರ ಗುರುವಾರ ಆನ್‌ಲೈನ್‌ನಲ್ಲಿ ಲೋಕಾರ್ಪಣೆ ಆಗಲಿವೆ.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಡಾ.ವಿರೇಶಾನಂದ ಸರಸ್ವತಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ. ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕಿ ಡಾ.ಪ್ರಿಯಾಂಕ ಎಂ.ಜಿ., ಬೆಂಗಳೂರು ಲೊಯೋಲ ಪದವಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡ.ಕುಮಾರಸ್ವಾಮಿ ಬಿಜ್ಜಿಹಳ್ಳಿ ಹಾಜರಿರುವರು.

`ಕಾಲ ನಾ...!' ಪುಸ್ತಕ ಕುರಿತು ಡಾ.ಲೋಲಾಕ್ಷಿ ಎನ್.ಕೆ., `ಹದಿಹರೆಯದವರ ನಿತ್ಯ ಗೊಂದಲಗಳ ಗುಟ್ಟು ಕೃತಿ ಕುರಿತು ಡಾ.ಡಿ.ಸಿ.ಚಿತ್ರಲಿಂಗಯ್ಯ ವಿಮರ್ಶೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ತುಮಕೂರು ವಿವಿ ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ, ನಗರದ ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಶಾಲಿನಿ ಬಿ.ಆರ್., ವಿಜಯವಾಣಿ ಡೆಪ್ಯೂಟಿ ಎಡಿಟರ್ ನಾಗರಾಜ ಇಳೆಗುಂಡಿ, ಸಿಎ ವಲೇರಿಯನ್ ಡಾಲ್ಮೇಡ, ಎಸ್‌ಎಲ್‌ಎನ್ ಪ್ರಕಾಶಕ ಉಮೇಶ್, ಮನೋ ವೈದ್ಯ ಡಾ.ಲೋಕೇಶ್ ಭಾಗವಹಿಸಲಿದ್ದಾರೆ.