ಕೆರೆಗಳ ರಕ್ಷಣೆಗೆ ಪ್ರತ್ಯೇಕ ಅನುದಾನ ಒದಗಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡ್ತೇನೆ-ಪರಮೇಶ್ವರ

ಕೆರೆಗಳ ರಕ್ಷಣೆಗೆ ಪ್ರತ್ಯೇಕ ಅನುದಾನ ಒದಗಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡ್ತೇನೆ-ಪರಮೇಶ್ವರ


ಕೆರೆಗಳ ರಕ್ಷಣೆಗೆ ಪ್ರತ್ಯೇಕ ಅನುದಾನ ಒದಗಿಸಲು
ಮುಖ್ಯಮಂತ್ರಿಗಳಿಗೆ ಮನವಿ ಮಾಡ್ತೇನೆ-ಪರಮೇಶ್ವರ


ಕೊರಟಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಬರುವ ಅಯವ್ಯಯದಲ್ಲಿ ಕೆರೆಗಳ ಸಂರಕ್ಷಣೆಗೆ ಪ್ರತ್ಯೇಕ ಅನುದಾನ ಒದಗಿಸುವಂತೆ ಕೋರುವುದಾಗಿ ಶಾಸಕ ಡಾ. ಜಿ. ಪರಮೇಶ್ವರ ತಿಳಿಸಿದರು.
ಅವರು ತಾಲೂಕಿನ ನಡೆದ ಚನ್ನರಾಯನದುರ್ಗ ಹೋಬಳಿಯ ಗಟ್ಲಹಳ್ಳಿ ಗ್ರಾಮದ ಗಟ್ಲಹಳ್ಳಿಕೆರೆ ತುಂಬಿ ಹರಿದ ಹಿನ್ನೆಲೆಯಲ್ಲಿ ಕಿರುನೀರಾವರಿ ಇಲಾಖೆಯಿಂದ ಏರ್ಪಡಿಸಿದ್ದ ಗಂಗಾಪೂಜೆ ನೆರವೇರಸಿ ಬಾಗಿನ ಅರ್ಪಿಸಿ ಮಾತನಾಡಿದರು.
ಪ್ರಾಕೃತಿಕ ವೈಪರಿತ್ಯಗಳಿಂದ ಮಳೆಯು ಆಕಾಲಿಕವಾಗಿ ಬೀಳುತ್ತಿದ್ದು ನನ್ನ ವಿಧಾನಸಭಾ ವ್ಯಾಪ್ತಿಯಲ್ಲೇ ಮಳೆಯು ಕೆಲವು ಭಾಗದಲ್ಲಿ ಉತ್ತಮವಾಗಿ ಆಗಿದೆ. ಕೆಲವು ಭಾಗದಲ್ಲಿ ಕೊರತೆ ಇದೆ. ಈ ರೀತಿ ಹವಾಮಾನ ವೈಪರಿತ್ಯಗಳು ವರ್ಷಗಳಲ್ಲಿ ಏರುಪೇರುಗಳಾಗುತ್ತಿರುತ್ತವೆ. ಆದ್ದರಿಂದ ಗ್ರಾಮ, ಪಟ್ಟಣ, ನಗರ ಪ್ರದೇಶಗಳಲ್ಲಿರುವ ಕೆರೆಗಳನ್ನು ಮೊದಲು ಸಂರಕ್ಷಿಸುವ ಯೋಜನೆಗೆ ಸರ್ಕಾರ ಮುಂದಾಗಬೇಕು. ಪ್ರತಿ ಕೆರೆಗಳಲ್ಲಿ ಹೊಳೆತ್ತುವ ಕಾಮಗಾರಿಗಳಾಗಬೇಕಿದ್ದು, ಈ ಕೆಲಸದಲ್ಲಿ ಗ್ರಾಮಸ್ಥರ ಪಾತ್ರ ಮಹತ್ವದ್ದಾಗಿದೆ. ಇದರಿಂದ ಮಳೆ ನೀರು ಹೆಚ್ಚು ಶೇಖರಣೆಯಾಗಲಿದ್ದು ಬಿದ್ದಂತಹ ಮಳೆ ನೀರು ವ್ಯಯವಾಗುವುದಿಲ್ಲ. ಹಲವಾರು ಕೆರೆಗಳು ಶಿಥಿಲವಾಗುತ್ತಿದ್ದು ಅವುಗಳ ದುರಸ್ತಿ ಆಭಿವೃದ್ಧಿಗೆ ವಿಶೇಷ ಅನುದಾನದ ಅವಶ್ಯಕವಿದೆ ಎಂದರು.
ಈ ಹಿಂದೆ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ವಿಶ್ವಬ್ಯಾಂಕ್ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಕೆರೆಗಳ ಸಂರಕ್ಷಣೆಗೆ 800 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು. ಆದ್ದರಿಂದ ಈ ಬಾರಿಯ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಕೆರೆಗಳ ಸಂರಕ್ಷಣೆಗೆ ವಿಶೇಷ ಅನುದಾನ ನೀಡುವಂತೆ ಒತ್ತಾಯಿಸಿ ಮನವಿ ಮಾಡಲಾಗುವುದು. ಇದರಿಂದ ವರುಣನ ಅತಿವೃಷ್ಟಿ, ಅನಾವೃಷ್ಟಿಯ ಪ್ರಭಾವ ಸ್ವಲ್ವ ಕಡಿಮೆಯಾಗುತ್ತದೆ. ಬಯಲು ಸೀಮೆ ಪ್ರದೇಶಗಳಿಗೆ ಬೃಹತ್ ನೀರಾವರಿ ಯೋಜನೆಗಳೊಂದಿಗೆ ಮಳೆನೀರಿನ ಹೆಚ್ಚು ಕ್ರೋಢೀಕರಣಕ್ಕಾಗಿ ಕೆರೆಗಳ ಪುನಶ್ಚೇತನ ಅಗತ್ಯವಾಗಿದೆ ಎಂದರು.
ಗಟ್ಲಹಳ್ಳಿ ಕೆರೆ ತಂಬಿದ ಹಿನ್ನೆಲೆಯಲ್ಲಿ ಸಂಪ್ರದಾಯದAತೆ ಗಂಗಾ ಪೂಜೆ ನರವೇರಿಲಾಗಿದ್ದು ಇದಕ್ಕೆ ಗ್ರಾಮಸ್ಥರು, ವಿಶೇಷವಾಗಿ ಮಹಿಳೆಯರು ಗಾಮ ಪಂಚಾಯಿತಿ ಅಧ್ಯಕ್ಷ ಸದಸ್ಯ ಜೊತೆಗೂಡಿರವುದು ಸಂತೋಷತAದಿದೆ. ಎತ್ತಿನಹೊಳೆ ಯೋಜನೆಯಲ್ಲಿ ಕೆರೆ ತುಂಬಿಸುವ ಕಾರ್ಯದಲ್ಲಿ ಈ ಕೆರೆಯು ಸೇರಿದೆ. ಗ್ರಾಮಸ್ಥರ ಕೋರಿಕೆಯಂತೆ ಈ ಗ್ರಾಮದಲ್ಲಿ ಶಾಲಾ ಕಾಂಪೌAಡ್, ಆಟದ ಮೈದಾನ, ಡೈರಿ ಕಟ್ಟಡ ಮಾಡಿಕೊಡಲಾಗುವುದು. ಗಟ್ಲಗೊಲ್ಲಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯಕ್ಕೆ ಸಮುದಾಯ ಭವನ ಕಟ್ಟಲು ಅನುದಾನ ನೀಡಲಾಗುವುದು ಎಂದರು. ಕಾಂiÀiðಕ್ರಮದಲ್ಲಿ ತಹಸೀಲ್ದಾರ್ ನಹಿದಾ ಜಮ್‌ಜಮ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ದೊಡ್ಡ ಸಿದ್ದಯ್ಯ, ಕಿರು ನೀರಾವರಿ ಇಲಾಖೆ ಎಇ ರಮೇಶ್ ಕುಮಾರ್, ಎಇಇಗಳಾದ ಉಮಾ ಮಹೇಶ್, ಮಂಜುನಾಥ್, ಮಲ್ಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕರೆ ಶಂಕರ್, ಕೋಡ್ಲಹಳ್ಳಿ ಅಶ್ವತ್ಥನಾರಾಯಣ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಯುವ ಅಧ್ಯಕ್ಷ ವಿನಯಕುಮಾರ್, ಮಹಿಳಾ ಅಧ್ಯಕ್ಷರುಗಳಾದ ಜಯಮ್ಮ, ಶೈಲಜ, ಗ್ರಾಪಂ ಅಧ್ಯಕ್ಷ ಶಿವರಾಮ್, ಮಾಜಿ ಅಧ್ಯಕ್ಷೆ ಲಕ್ಷೀ, ಸದಸ್ಯೆ ರಮಾಮಣಿ, ಮಾಜಿ ತಾಪಂ ಸದಸ್ಯ ರವಿಕುಮಾರ್, ಮುಖಂಡರುಗಳಾದ ಗೊಂದಿಹಳ್ಳಿ ರಂಗರಾಜು, ವೆಂಕಟಪ್ಪ, ಚಿನ್ನಿಗಣ್ಣ, ದೊಡ್ಡಸಿದ್ದಪ್ಪ, ಕುಮಾರ್, ಬಸವರಾಜು, ಕಿರಣ್, ಕೇಬಲ್ ಆನಂದ್ ಸೇರಿದಂತೆ ಇತರರು ಹಾಜರಿದ್ದರು.