ವಾಸಣ್ಣ ಕಾಂಗ್ರೆಸ್‌ಗೆ ಬಂದ್ರೆ ಅವರೇ ನಮ್ಮ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ವಾಸಣ್ಣ ಕಾಂಗ್ರೆಸ್‌ಗೆ ಬಂದ್ರೆ ಅವರೇ ನಮ್ಮ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ


ವಾಸಣ್ಣ ಕಾಂಗ್ರೆಸ್‌ಗೆ ಬಂದ್ರೆ ಅವರೇ ನಮ್ಮ ಅಭ್ಯರ್ಥಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ


ಗುಬ್ಬಿ: ನಾಲ್ಕು ಬಾರಿ ಶಾಸಕರಾದ ಶ್ರೀನಿವಾಸ್‌ಗೆ ನಾಲ್ಕೈದು ಬಾರಿ ಮುಳುಗುವ ಜೆಡಿಎಸ್ ಹಡುಗಿನಿಂದ ಹೊರಬಂದು ಕಾಂಗ್ರೆಸ್‌ಗೆ ಬರಲು ಹೇಳಿದ್ದೆ. ಆದರೆ ಪಕ್ಷನಿಷ್ಟೆ ತೋರಿದ್ದ ಅವರು ಇತ್ತೀಚಿನ ವಿದ್ಯಮಾನಗಳ ಬಳಿಕ ನಿರ್ಧರಿಸಿ ಕಾಂಗ್ರೆಸ್‌ಗೆ ಬಂದಲ್ಲಿ ಎಲ್ಲಾ ರೀತಿಯಲ್ಲೂ ಸಹಕರಿಸಿ ಅಭ್ಯರ್ಥಿ ಮಾಡುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವೇದಿಕೆಯಲ್ಲಿ ಬಹಿರಂಗವಾಗಿ ಘೋಷಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವಕಾಲೇಜು ಮೈದಾನದಲ್ಲಿ ನಡೆದ ಚಾಲುಕ್ಯ ಆಸ್ಪತೆ ್ರಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗುಬ್ಬಿ ಶ್ರೀನಿವಾಸ್ ಅವರಿಂದ ಜೆಡಿಎಸ್ ಬೆಳೆದಿತ್ತು. ಅವರನ್ನೇ ದೂರವಿಟ್ಟು ಸಮಾವೇಶ ಮಾಡಿದ ಕುಮಾರಸ್ವಾಮಿ ಬಗ್ಗೆ ಏನು ಹೇಳುವುದು. ಏನಾದರೂ ಮಾತನಾಡಿದರೆ ಜಾತಿ ಬಣ್ಣಕಟ್ಟಿ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ನಾನು ನಿಜವಾದ ಜಾತ್ಯತೀತ ನಿಲುವು ಉಳ್ಳವನು ಎಂದರು.
ಬಿಜೆಪಿ ಸರ್ಕಾರ ಕಿತ್ತೊಗೆಯುವ ನಿಟ್ಟಿನಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಮತ್ತು ಎಂಎಲ್ಸಿ ಕಾಂತರಾಜು ಅವರು ಕಾಂಗ್ರೆಸ್ ಸೇರಬೇಕು. ಈಗಾಗಲೇ ಕಾಂತರಾಜು ಬರುವ ಸೂಚನೆ ನೀಡಿದ್ದಾರೆ. ಶ್ರೀನಿವಾಸ್ ಕಾಂಗ್ರೆಸ್‌ಗೆ ಬರಲು ನಿರ್ಧರಿಸಲು ಜನರ ಮುಂದೆ ಬರುತ್ತಾರೆ. ಮತ್ತೊಮ್ಮೆ 5ನೇ ಬಾರಿ ಶಾಸಕರಾಗಿ ಆಯ್ಕೆ ಮಾಡಬೇಕು ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಜೆಡಿಎಸ್ ನನ್ನ ಗೌರವ ಕಳೆದಿದೆ: ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ ಜೆಡಿಎಸ್ ಸಮಾವೇಶವು ನನ್ನ ಗೌರವ ಕಳೆದಿದ್ದಲ್ಲದೆ ಪ್ರಾಮಾಣಿಕ ಕಾರ್ಯಕರ್ತರ ಮರ್ಯಾದೆ ಕಳೆದ ಕುಮಾರಸ್ವಾಮಿ ಅವರು ಅಪಪ್ರಚಾರಕ್ಕೆ ಮುಂದಾಗಿ ಮಾಜಿ ಪ್ರಧಾನಿ ದೇವೇಗೌಡರ ಸೋಲಿಗೆ ನಾನು ಕಾರಣ ಎನ್ನುತ್ತಾರೆ. ವಾಮಾಚಾರ ಮಾಡಿ ದೇವರುಗಳ ಕೈಕಾಲು ಕಟ್ಟಿ ಮನೆಯಲ್ಲಿಟ್ಟುಕೊಂಡ ಆ ಕುಟುಂಬ ಎಲ್ಲಿಗೆ ಬಂದರೂ ನಾನು ಬಂದು ಪ್ರಮಾಣ ಮಾಡುತ್ತೇನೆ. ಹೊಟ್ಟೆಗೆ ಏನು ತಿನ್ನುತ್ತಾರೋ ತಿಳಿಯುತ್ತಿಲ್ಲ. ಸುಳ್ಳು ಹೇಳಲು ಒಬ್ಬ ಗಣಿಧಣಿ ಕರೆತಂದು ಕಾರ್ಯಕ್ರಮ ಮಾಡಿ ಭಾವುಕತೆ ಕಣ್ಣೀರಿಗೆ ಗ್ಲಿಜಿರಿನ್ ಕರ್ಚಿಫ್ ಬಳಸಿದ್ದು ಎಲ್ಲರಿಗೂ ತಿಳಿದಿದೆ. ಈ ಮೊಸಳೆ ಕಣ್ಣೀರು ಇಲ್ಲಿ ಕೆಲಸ ಮಾಡಲ್ಲ. ಕಳೆದ 20 ವರ್ಷದಿಂದ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಇವರ ಅಂತರAಗ ಮರ್ಮ ತಿಳಿಯಲು ಇಷ್ಟು ವರ್ಷ ಬೇಕಾಯಿತು. ಕತ್ತು ಹಿಡಿದು ನೂಕಿದ ನಂತರ ಜನರ ಮುಂದೆ ನಿಂತಿದ್ದೇನೆ. ಸಿದ್ದರಾಮಯ್ಯ ಅವರ ಆಹ್ವಾನ ಪ್ರೀತಿಗೆ ನಾನು ಚಿರಋಣಿ. ಜನರೇ ನನ್ನ ಮುನ್ನೆಡೆಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಎಂಎಲ್ಸಿ ಬೆಮೆಲ್ ಕಾಂತರಾಜು, ಗಾಯತ್ರಿ ಶಾಂತೇಗೌಡ, ಮಾಜಿ ಸಚಿವರಾದ ಟಿ.ಬಿ. ಜಯಚಂದ್ರ, ಎಚ್.ಎಂ. ರೇವಣ್ಣ, ಮಾಜಿ ಶಾಸಕ ಕೆ.ಎನ್. ರಾಜಣ್ಣ, ಮುಖಂಡರಾದ ಆರ್. ರಾಜೇಂದ್ರ, ಕೆ.ಎಂ. ರಾಮಚಂದ್ರಪ್ಪ, ಚಾಲುಕ್ಯ ಆಸ್ಪತ್ರೆ ಎಂಡಿ ಡಾ. ಮುರುಳೀಧರ್, ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ, ಉಪಾಧ್ಯಕ್ಷೆ ಮಹಾಲಕ್ಷ್ಮಿ ಹಾಗೂ ಎಲ್ಲಾ ಸದಸ್ಯರಿದ್ದರು.


ಕೋಮುವಾದಿ ಪಕ್ಷ ಅಧಿಕಾರದಿಂದ ತೊಲಗಬೇಕಿದೆ. ಆರ್‌ಎಸ್‌ಎಸ್ ಕೈಗೊಂಬೆಯಾದ ಮುಖ್ಯಮಂತ್ರಿ ಬೊಮ್ಮಾಯಿ ಬರೀ ಬುರುಡೆ ಬಿಡುತ್ತಾರೆ. ಹಸಿವು ನೀಗಿಸುವ ಅನ್ನಭಾಗ್ಯಕ್ಕೆ ಕತ್ತರಿ ಹಾಕುವ ಕೆಲಸ ಮಾಡುತ್ತಿರುವ ಬಿಜೆಪಿಗೆ ಹಸಿವಿನ ಬಗ್ಗೆ ತಿಳಿದಿಲ್ಲ.
- ಸಿದ್ದರಾಮಯ್ಯ, ವಿಧಾನ ಸಭೆ ವಿರೋಧ ಪಕ್ಷದ ನಾಯಕ


ಪಕೋಡ ಮಾರಿ ಜೀವಿಸೋಕೂ ಈಗಾಗಲ್ಲ!
ಯುವಶಕ್ತಿಗೆ ಮೋದಿ ಹುಚ್ಚು ಹಿಡಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಕೇಂದ್ರ ಸರ್ಕಾರ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಈಗ ಪಕೋಡಾ ಮಾರಿ ಜೀವನ ಮಾಡಲು ಹೇಳುತ್ತಾರೆ. ಆದರೆ ಅಡುಗೆ ಎಣ್ಣೆ ಬೆಲೆ ಕೇಳಿದರೆ ಈ ಪಕೋಡಾ ಉದ್ಯೋಗವನ್ನೂ ಮಾಡಲಾಗದು ಎಂದು ವ್ಯಂಗ್ಯವಾಡಿದರು.