ಕುಣಿಗಲ್: ಬಾಕಿ ವಿದ್ಯುತ್ ಬಿಲ್ ಪಾವತಿಸದಿದ್ದಲ್ಲಿ ಸಂಪರ್ಕ ಕಡಿತ

ಕುಣಿಗಲ್: ಬಾಕಿ ವಿದ್ಯುತ್ ಬಿಲ್   ಪಾವತಿಸದಿದ್ದಲ್ಲಿ ಸಂಪರ್ಕ ಕಡಿತ


ಕುಣಿಗಲ್: ಬಾಕಿ ವಿದ್ಯುತ್ ಬಿಲ್


ಪಾವತಿಸದಿದ್ದಲ್ಲಿ ಸಂಪರ್ಕ ಕಡಿತ


ತುಮಕೂರು: ಕುಣಿಗಲ್ ಬೆಸ್ಕಾಂ ವ್ಯಾಪ್ತಿಯ ಕುಣಿಗಲ್, ಹುಲಿಯೂರುದುರ್ಗ, ಯಡಿಯೂರು ಉಪ ವಿಭಾಗಗಳಲ್ಲಿರುವ ಗ್ರಾಮ ಪಂಚಾಯಿತಿಗಳು ಕುಡಿಯುವ ನೀರು ಮತ್ತು ಬೀದಿ ದೀಪಗಳ ಬಾಕಿ ಮೊತ್ತವನ್ನು ಕೂಡಲೇ ಪಾವತಿಸದೇ ಇದ್ದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಎಚ್ಚರಿಕೆ ನೀಡಿದ್ದಾರೆ. 


ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದ ನಿಯಮಾನುಸಾರ ಗ್ರಾಮ ಪಂಚಾಯತಿಗೆ ಸಂಬAಧಿಸಿದ ವಿದ್ಯುತ್ ಬಾಕಿಯನ್ನು ಉಳಿಸಿಕೊಂಡಿರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಈಗಾಗಲೇ ನೋಟೀಸ್ ಜಾರಿಗೊಳಿಸಲಾಗಿದೆ.


ವಿದ್ಯುತ್ ಸಂಪರ್ಕ ಕಡಿತಗೊಳಿಸುವುದರಿಂದ ಸಾರ್ವಜನಿಕರಿಗೆ ಆಗುವ ತೊಂದರೆಗೆ ಬೆಸ್ಕಾಂ ಜವಾಬ್ದಾರರಾಗುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ. ಕುಣಿಗಲ್ ವಿಭಾಗದಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ಒಟ್ಟು ೩೭೭೬.೯೨ ಲಕ್ಷ ರೂ.ಗಳು ಬಾಕಿ ಇದ್ದು, ಕೂಡಲೇ ಬಾಕಿ ಪಾವತಿಸದಿದ್ದಲ್ಲಿ ವಿದ್ಯುತ್ ಸಂಪರ್ಕ ನಿಲುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.