ಬಿಟ್ಟನಕುರಿಕೆ ದಲಿತರಿಗೆ ವಸತಿ: ಡಿಸಿ ವೈ.ಎಸ್.ಪಾಟೀಲರ  ಭರವಸೆ ಕೊಂತಿ ಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ- ಹಳ್ಳಿ ಕಡೆ ಕಾರ‍್ಯಕ್ರಮ 

ಬಿಟ್ಟನಕುರಿಗೆ ದಲಿತರಿಗೆ ವಸತಿ: ಡಿಸಿ ವೈ.ಎಸ್.ಪಾಟೀಲರ  ಭರವಸೆ ಕೊಂತಿ ಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ- ಹಳ್ಳಿ ಕಡೆ ಕಾರ‍್ಯಕ್ರಮ 

ಬಿಟ್ಟನಕುರಿಕೆ ದಲಿತರಿಗೆ ವಸತಿ: ಡಿಸಿ ವೈ.ಎಸ್.ಪಾಟೀಲರ  ಭರವಸೆ   ಕೊಂತಿ ಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ- ಹಳ್ಳಿ ಕಡೆ ಕಾರ‍್ಯಕ್ರಮ 

ಬಿಟ್ಟನಕುರಿಕೆ ದಲಿತರಿಗೆ ವಸತಿ: ಡಿಸಿ ವೈ.ಎಸ್.ಪಾಟೀಲರ  ಭರವಸೆ


ಕೊಂತಿ ಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ- ಹಳ್ಳಿ ಕಡೆ ಕಾರ‍್ಯಕ್ರಮ 


ತುಮಕೂರು: ಬಿಟ್ಟನಕುರಿಕೆ ಗ್ರಾಮದ ಸರ್ವೆ ನಂಬರ್ 28 ರಲ್ಲಿ  40ಕ್ಕೂ  ಹೆಚ್ಚು ದಲಿತ ಕುಟುಂಬಗಳು  ಮೂವತ್ತಕ್ಕಿಂತ ಹೆಚ್ಚು ವರ್ಷಗಳಿಂದ ವಾಸಿಸುತ್ತಿದ್ದಾರೆ. ಆ ಕುಟುಂಬಗಳು ಅಲ್ಲಿಯೇ ಇರಲು ಅವಕಾಶ ಮಾಡಿಕೊಡಬೇಕೆಂದು ಮಾಡಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲರು ಸುಪ್ರೀಂ ಕೋರ್ಟ್ ಆದೇಶದನ್ವಯ ಕೆರೆ-ಗೋಕಟ್ಟೆಗಳಲ್ಲಿ ಮನೆಗಳನ್ನು ನಿರ್ಮಿಸುವುದಕ್ಕೆ ಅವಕಾಶವಿರುವುದಿಲ್ಲ ಎಂದ ಅವರು,  ಈ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಸ್ಥಳಾವಕಾಶ ಇರುವ ಕಡೆ ನಿವೇಶನಗಳನ್ನು ಮಾಡಿ ಅನುದಾನವನ್ನು ಒದಗಿಸಲಾಗುವುದು.ಅಲ್ಲಿಯವರೆಗೆ ಜನರಲ್ಲಿ ಯಾವುದೇ ರೀತಿಯ ಆತಂಕ ಬೇಡ ಎಂದು ಧೈರ್ಯ ನೀಡಿದರು.

ಅವರು ಶನಿವಾರ ತುಮಕೂರು ತಾಲ್ಲೂಕು ದೇವಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಂತಿಹಳ್ಳಿ ಗ್ರಾಮದಲ್ಲಿ ಜನರ  ಮನವಿಗಳಿಗೆ ಸ್ಪಂದಿಸಿ ನೊಂದವರಿಗೆ ಅಭಯ ನೀಡಿದರು. 


 ನಿವೇಶನ ರಹಿತ, ವಸತಿರಹಿತ ಅರ್ಹ ಫಲಾನುಭವಿಗಳಿಗೆ 15 ದಿನದೊಳಗೆ ಆದ್ಯತೆಯ ಮೇಲೆ ನಿವೇಶನ, ವಸತಿ ಮಂಜೂರಾತಿ ಪತ್ರ ವಿತರಿಸಬೇಕು ಎಂದು ದೇವಲಾಪುರ ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚಿಸಿದರು.


ದೇವಲಾಪುರ ಗ್ರಾಮದಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ  ನೀರಿನ ಘಟಕ 3 ತಿಂಗಳಿಂದ ಕೆಟ್ಟು ನಿಂತಿರುವ ಬಗ್ಗೆ ಗ್ರಾಮಸ್ಥರೊಬ್ಬರು ದೂರಿದಾಗ ಸ್ಪಂದಿಸಿದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣಮೂರ್ತಿಯವರು ಎಇಇ, ಪಿಡಿಓ ಅವರೊಂದಿಗೆ ಮಾತನಾಡಿ, ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ದನಿಗೂಡಿಸಿದ ಜಿಲ್ಲಾಧಿಕಾರಿಗಳು ನೀರಿನ ಗುಣಮಟ್ಟವನ್ನು ಪರಿಶೀಲಿಸುವಂತೆ ಸೂಚಿಸಿದರು.


ದೇವಲಾಪುರ ಗ್ರಾಮದ ವಸಂತ ಎಂಬ ಮಹಿಳೆಗೆ ಮನೆನೀಡಲು , ಬಿಟ್ಟನಕುರಿಕೆ ಗ್ರಾಮದ ದಿಲೀಪ್ ಎಂಬುವರು ಸಾಗುವಳಿ ಚೀಟಿ ನೀಡಲು, ಶಾಲೆಯ ಮುಂಭಾಗ ಕೊಳಚೆ ತುಂಬಿಕೊAಡಿರುವುದನ್ನು ಸ್ವಚ್ಚಗೊಳಿಸಲು ಗಮನಹರಿಸುವಂತೆ ಪಿಡಿಓಗೆ ಸೂಚಿಸಿದರು.


 ವಿದ್ಯಾಭ್ಯಾಸಕ್ಕಾಗಿ ದೂರದ ಊರುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಇಲ್ಲದೇ ನಡೆದುಕೊಂಡು ಹೋಗುವಂತಹ ಪರಿಸ್ಥಿತಿಯಿದೆ ಕೂಡಲೇ ಕೆಎಸ್‌ಆರ್‌ಟಿಸಿ ಬಸ್ ಬಿಡಿಸುವಂತೆ ನಾಯಕರ ಪಾಳ್ಯದ ಗ್ರಾಮಸ್ಥರೊಬ್ಬರು ಮನವಿ ಮಾಡಿದರು.
ಗ್ರಾಮಕ್ಕೆ ರಸ್ತೆ, ಊರಿಗೆ ಸಕಾಲಕ್ಕೆ ಬಸ್, ಹೊಲಕ್ಕೆ ಹೋಗಲು ದಾರಿ ಮಾಡಿಸಿಕೊಡುವುದು, ಸೇರಿದಂತೆ ಅನೇಕ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ಹೇಳಿಕೊಂಡಾಗ ಸಮಾಧಾನದಿಂದ ಮನವಿ ಆಲಿಸಿ ಪರಿಹಾರದ ಭರವಸೆ ನೀಡಿದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗ್ರಾಮದ ಗರ್ಭಿಣಿಯರಿಗೆ ಸೀಮಂತ ಕಾರ್ಯವನ್ನು ನಡೆಸಿಕೊಟ್ಟರು. ಮಹಿಳಾ ಅಧಿಕಾರಿಗಳು ಗರ್ಭಿಣಿಯರಿಗೆ ಸೀರೆ, ಅರಶಿಣ, ಕುಂಕುಮ ನೀಡಿ ಗೌರವಿಸಿದರು. ಜಿಲ್ಲಾಧಿಕಾರಿಗಳು ಮಗುವೊಂದಕ್ಕೆ ಅನ್ನಪ್ರಾಶನ ಮಾಡಿದರು.


ರಾಷ್ಟ್ರೀಯ ಅಂಧತ್ವ ನಿವಾರಣ ಕಾರ್ಯಕ್ರಮದಡಿ ಆರೋಗ್ಯ ಇಲಾಖೆಯಿಂದ ಕಣ್ಣು ಪರೀಕ್ಷೆ ನಡೆಸಿ ಕನ್ನಡಕಗಳನ್ನು ವಿತರಿಸಲಾಯಿತು. ಅರಣ್ಯ ಇಲಾಖೆಯಿಂದ ಗಿಡಗಳನ್ನು ನೀಡಲಾಯಿತು.


ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ 9 ಫಲಾನುಭವಿಗಳಿಗೆ ಕಾರ್ಯದೇಶ ಪತ್ರಗಳನ್ನು ವಿತರಿಸಲಾಯಿತು.


ಗ್ರಾಮ ಪಂಚಾಯತಿ ಅಧ್ಯಕ್ಷೆ ಚಂದ್ರಕಲಾ, ಉಪಾಧ್ಯಕ್ಷ ಸಂಜೀವಯ್ಯ, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ರೇಷ್ಮೆ ಇಲಾಖೆ ಉಪನಿರ್ದೇಶಕ ವೈ.ಕೆ.ಬಾಲಕೃಷ್ಣಪ್ಪ , ಕೃಷಿ ಜಂಟಿ ನಿರ್ದೇಶಕಿ ರಾಜ ಸುಲೋಚನ, ತೋಟಗಾರಿಕಾ ಉಪನಿರ್ದೇಶಕ ರಘು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ಜಿಲ್ಲಾ ಕಾರ್ಮಿಕಾಧಿಕಾರಿ ರಮೇಶ್,ಡಿಡಿಎಲ್‌ಆರ್ ಸುಜಯ್ ಕುಮಾರ್, ತಹಶೀಲ್ದಾರ್ ಮೋಹನ್ ಕುಮಾರ್,  ಭೂಮಿ ಕೇಂದ್ರದ ಅಧಿಕಾರಿ ನರಸಿಂಹರಾಜು, ಎಪಿಎಂಸಿ ನಿರ್ದೇಶಕ ಗಂಗಾಧರಪ್ಪ ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.


************