ಕೋವಿಡ್ ಸಂಕಷ್ಟ ಮತ್ತೆ ಎದುರಾಗದಿರಲಿ-ಡಿಸಿ ಡಾ.ಸೆಲ್ವಮಣಿ ಹೊಸವರ್ಷದಲ್ಲಿ ಸೇವೆಯೊಂದಿಗೆ ಜನತೆಗೆ ಹತ್ತಿರವಾಗೋಣ-ಕರೆ

ಕೋವಿಡ್ ಸಂಕಷ್ಟ ಮತ್ತೆ ಎದುರಾಗದಿರಲಿ-ಡಿಸಿ ಡಾ.ಸೆಲ್ವಮಣಿ ಹೊಸವರ್ಷದಲ್ಲಿ ಸೇವೆಯೊಂದಿಗೆ ಜನತೆಗೆ ಹತ್ತಿರವಾಗೋಣ-ಕರೆ

ಕೋವಿಡ್ ಸಂಕಷ್ಟ ಮತ್ತೆ ಎದುರಾಗದಿರಲಿ-ಡಿಸಿ ಡಾ.ಸೆಲ್ವಮಣಿ
ಹೊಸವರ್ಷದಲ್ಲಿ ಸೇವೆಯೊಂದಿಗೆ ಜನತೆಗೆ ಹತ್ತಿರವಾಗೋಣ-ಕರೆ

ಕೋಲಾರ:- ಕೋವಿಡ್  ಸಮಸ್ಯೆಗಳನ್ನು ಕಳೆದ ವರ್ಷ ಸಮರ್ಪಕವಾಗಿ ನಿರ್ವಹಿಸಿದ್ದೇವೆ, ಈ ಬಾರಿ ಅಂತಹ ಯಾವುದೇ ಸಮಸ್ಯೆಗಳು ಎದುರಾಗದೇ ಜನರ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಿ ಸಮಾಜಕ್ಕೆ ಮತ್ತಷ್ಟು ಹತ್ತಿರವಾಗೋಣ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹಾರೈಸಿದರು.


ಹೊಸ ವರ್ಷಾರಂಭದ ಹಿನ್ನಲೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಶುಭಾಷಯ ಕೋರಿ ಅಭಿನಂದಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಕೋವಿಡ್‌ನಿಂದಾಗಿ ಕಳೆದ ವರ್ಷ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇವೆ, ಸರ್ಕಾರಿ ನೌಕರರು ಕೋವಿಡ್ ವಾರಿರ‍್ಸ್ ರೀತಿ ಕೆಲಸ ಮಾಡಿದ್ದಾರೆ, ಜಿಲ್ಲೆಗೆ ಅಂತಹ ಪರಿಸ್ಥಿತಿ ಎದುರಾಗದೇ ಜನತೆಗೆ ಉತ್ತಮ ಆರೋಗ್ಯ ಲಭಿಸಿಲಿ, ಅಭಿವೃದ್ದಿಯ ಹಾದಿ ಸುಗಮವಾಗಿರಲಿ ಎಂದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ್‌ಬಾಬು ಜಿಲ್ಲಾಧಿಕಾರಿಗಳಿಗೆ ಸಂಘದ ಪರವಾಗಿ ಶುಭಾಷಯ ಕೋರಿ, ಸರ್ಕಾರಿ ನೌಕರರು ಜನಸೇವೆಗೆ ಸದಾ ಸಿದ್ದರಿದ್ದೇವೆ, ತಮ್ಮ ಆದೇಶಗಳನ್ನು ಪಾಲಿಸುವ ಮೂಲಕ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಮ್ಮ ನಡೆ ಪ್ರಾಮಾಣಿಕವಾಗಿರಲಿದೆ ಎಂದು ಭರವಸೆ ನೀಡಿದರು.


ಅಪರ ಡಿಸಿಗೂ ಸಂಘದ ಅಭಿನಂದನೆ


ಇದೇ ಸಂದರ್ಭದಲ್ಲಿ ನೌಕರರ ಸಂಘದಿಂದ ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ ಅವರನ್ನು ಅಭಿನಂದಿಸಿ ಶುಭಾಷಯ ಕೋರಲಾಯಿತು.


ಈ ಸಂದರ್ಭದಲ್ಲಿ ಹಾಜರಿದ್ದ ನೌಕರರು,ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡುದ ಸುರೇಶ್‌ಬಾಬು, ಜಿಲ್ಲೆಯ ಅಭಿವೃದ್ದಿಗೆ ನೌಕರರ ಕೊಡುಗೆ ಅಪಾರವಾಗಿದೆ, ನಮ್ಮ ಕೆಲಸವನ್ನು ನ್ಯಾಯಯುತವಾಗಿ ನಿರ್ವಹಿಸೋಣ, ಸಮಾಜದೊಂದಿಗೆ ಉತ್ತಮ ಬಾಂಧವ್ಯ ವೃದ್ದಿಯ ಜತೆಗೆ ಹೊಸ ವರ್ಷದಲ್ಲಿ ಜನಸೇವೆಯ ಜತೆ ನಮ್ಮ ಸಂಘಟನಾ ಶಕ್ತಿಯನ್ನು ಬಲಪಡಿಸೋಣ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಭೂಮಾಪನಾ ಇಲಾಖೆ ಉಪನಿರ್ದೇಶಕಿ ಭಾಗ್ಯಮ್ಮ, ಸಹಾಯಕ ನಿದೇಶಕ ಹನುಮಂತರಾಯಪ್ಪ, ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷರಾದ ಪುರುಷೋತ್ತಮ್, ಅಜಯ್,ಎಂ.ನಾಗರಾಜ್,ಮAಜುನಾಥ್, ಕಾರ್ಯದರ್ಶಿ ಶಿವಕುಮಾರ್, ಪದಾಧಿಕಾರಿಗಳಾದ ಶ್ರೀರಾಮ್, ನವೀನಾ, ಮಲ್ಲಿಕಾರ್ಜುನ್, ಹರೀಶ್,ರವಿ,ಪಿಡಿಒ ನಾಗರಾಜ್,  ಗಣಿ,ಭೂವಿಜ್ಞಾನ ಇಲಾಖೆ ಅಧಿಕಾರಿ ತಿಪ್ಪೇಸ್ವಾಮಿ, ಭೂಮಾಪನಾ ಇಲಾಖೆಯ ಜಯಲಕ್ಷಿö್ಮ, ನಮ್ರತಾ, ಶೋಭಾ,ಸುಭಾಷ್,ವಿಜಯಲಕ್ಷಿö್ಮ ಮತ್ತಿತರರಿದ್ದರು.

_________