ಶಿಕ್ಷಣ ಭೀಷ್ಮ ದಿ. ಹೆಚ್.ಎಂ. ಗಂಗಾಧರಯ್ಯನವರ 26ನೇ ವರ್ಷದ ಪುಣಸ್ಮರಣೆ

gangadharaiah

ಶಿಕ್ಷಣ ಭೀಷ್ಮ ದಿ. ಹೆಚ್.ಎಂ. ಗಂಗಾಧರಯ್ಯನವರ 26ನೇ ವರ್ಷದ ಪುಣಸ್ಮರಣೆ


ಶಿಕ್ಷಣ ಭೀಷ್ಮ ದಿ. ಹೆಚ್.ಎಂ. ಗಂಗಾಧರಯ್ಯನವರ
26ನೇ ವರ್ಷದ ಪುಣಸ್ಮರಣೆ

ತುಮಕೂರು: ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶಿಕ್ಷಣ ಭೀಷ್ಮ ಡಾ. ಹೆಚ್.ಎಂ. ಗಂಗಾಧರಯ್ಯನವರ 26ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಸಿದ್ಧಾರ್ಥ ನಗರದಲ್ಲಿ ಭಾನುವಾರ ನಡೆಯಿತು.  

ಬೌದ್ಧ ಬಿಕ್ಕು ಮಹಾಸಂಘದ ಬಂತೇಜಿ ಮತ್ತು ಸಹಸದಸ್ಯರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿವಂಗತ ಡಾ. ಹೆಚ್.ಎಮ್. ಗಂಗಾಧರಯ್ಯನವರ 26ನೇ ವರ್ಷದ ಪುಣ್ಯಸ್ಮರಣೆಯನ್ನು ಬೌದ್ಧ ಬಿಕ್ಕುಗಳಿಂದ ತಿಸರಣ ಗಮನ ಮತ್ತು ಗ್ರಹಣ ಹಾಗೂ ಪುಣ್ಯಾನುಮೋದನಾ ಸ್ಮರಣೆ ಮತ್ತು ನುಡಿ ನಮನವನ್ನು ಸಲ್ಲಿಸಲಾಯಿತು.


ದಿವಂಗತ ಡಾ. ಹೆಚ್.ಎಮ್. ಗಂಗಾಧರಯ್ಯ, ಶ್ರೀಮತಿ ಗಂಗಾಮಾಳಮ್ಮ ಮತ್ತು ಡಾ. ಜಿ. ಶಿವಪ್ರಸಾದ್ರವರ ಸಮಾಧಿಗೆ ಪೂಜೆ ಮಾಡಿ ಪುಷ್ಪಮಾಲೆ ಸಲ್ಲಿಸುವ ಮೂಲಕ ಧಾರ್ಮಿಕ ಕೈಂಕರ್ಯಗಳನ್ನು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಜಿ. ಪರಮೇಶ್ವರ ಹಾಗೂ ಕನ್ನಿಕಾ ಪರಮೇಶ್ವರ ಮತ್ತು ಡಾ. ಆನಂದ್ ಅವರು ಬೌದ್ಧ ಸಂಪ್ರದಾಯದ ವಿಧಿ ವಿಧಾನಗಳನ್ನು ನೆರವೇರಿಸಿದ್ದರು.


ಕಾರ್ಯಕ್ರಮದಲ್ಲಿ ಸಾಹೇ ವಿಶ್ವವಿದ್ಯಾಲಯದ ಸಿಬ್ಬಂದಿ, ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ, ಶ್ರೀ ಸಿದ್ಧಾರ್ಥ ಇಂಜಿನಿಯರಿAಗ್ ಕಾಲೇಜಿನ ಬೋಧಕ-ಬೋಧಕೇತರ ವರ್ಗ ಸೇರಿದಂತೆ ಅಂಗ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕರು, ಪ್ರಾಥಮಿಕ ಮತ್ತು ಫ್ರೌಢಶಾಲಾ ಶಿಕ್ಷಕರು ಭಾಗವಹಿಸಿದ್ದರು.