ದ್ವೇಷ ರಾಜಕೀಯ ಮಾಡಲ್ಲ: ದೇವೇಗೌಡ ಲೋಕಸಭಾ ಚುನಾವಣೆಗೆ ಸೋಲಿಗೆ ಕಾರಣರಾದವರ ಬಗ್ಗೆ ವಿಷಾದ

mlc election canvas from hddin madhugiri

ದ್ವೇಷ ರಾಜಕೀಯ ಮಾಡಲ್ಲ: ದೇವೇಗೌಡ ಲೋಕಸಭಾ ಚುನಾವಣೆಗೆ ಸೋಲಿಗೆ ಕಾರಣರಾದವರ ಬಗ್ಗೆ ವಿಷಾದ


ದ್ವೇಷ ರಾಜಕೀಯ ಮಾಡಲ್ಲ: ದೇವೇಗೌಡ
ಲೋಕಸಭಾ ಚುನಾವಣೆಗೆ ಸೋಲಿಗೆ ಕಾರಣರಾದವರ ಬಗ್ಗೆ ವಿಷಾದ


ಮಧುಗಿರಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆಲವರ ಷಡ್ಯಂತ್ರದಿAದ ನಾನು ಸೋಲು ಅನುಭವಿಸಬೇಕಾಯಿತು. ಆದರೆ ನಾನು ಅದನ್ನು ಮನದಲ್ಲಿಟ್ಟುಕೊಂಡು ದ್ವೇಷ ರಾಜಕೀಯ ಮಾಡುವವನಲ್ಲ ಎಂದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರು 1994 ರಲ್ಲಿ ನನಗೆ ಜ್ವರ ಬಂದಿದ್ದರೂ ಅಂದು ಬೆಳ್ಳಾವಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಿ ಗೆಲ್ಲಿಸಿದ್ದೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಅವರೇ ಕಾರಣರಾದರು ಎಂದು ಕ್ಷೇತ್ರದ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಹೆಸರು ಹೇಳದೇ ಕುಟುಕಿದರಲ್ಲದೇ, ಇದರಿಂದ ನಾನು ಅಂದು ತಪ್ಪು ಮಾಡಿದೆ ಎಂದು ಈಗ ಅನ್ನಿಸುತ್ತಿದೆ ಎಂದು ವಿಷಾದಿಸಿದರು.


ಪಟ್ಟಣದ ಒಕ್ಕಲಿಗರ ಸಮುದಾಯ ಭವನದ ಆವರಣದಲ್ಲಿ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಪರ ಪ್ರಚಾರ ಭಾಷಣ ಮಾಡಿದ ಗೌಡರು, ಈಗ ನೀವು ಅದೇ ತಪ್ಪು ಮಾಡುವುದು ಬೇಡ. ನಮ್ಮ ಪಕ್ಷದ ವಿಧಾನ ಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್ ಅವರನ್ನು ಗೆಲ್ಲಿಸಿಕೊಂಡು ಅದಕ್ಕೆ ಉತ್ತರ ನೀಡಬೇಕು.  ಅನಿಲ್ ಕುಮಾರ್ ತಳ ಸಮುದಾಯದಿಂದ ಮೇಲಕ್ಕೆ ಬಂದಿರುವAತಹ ಉತ್ತಮ ವ್ಯಕ್ತಿಯಾಗಿದ್ದು, ಅವರು ತಮ್ಮ ಪದವಿಗೂ ಕೂಡ ರಾಜೀನಾಮೆ ಸಲ್ಲಿಸಿ ಜನರ ಸೇವೆ ಮಾಡಲು ಬಂದಿದ್ದಾರೆ. ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಿ ಕೊಡಬೇಕೆಂದು ಮತ ಯಾಚಿಸಿದರು. 


ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ, ರಾಜ್ಯಗಳು ಅಭಿವೃದ್ಧಿ ಹೊಂದಲು ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಹಾಗೂ ಅನಿವಾರ್ಯತೆ ಇದೆ. ಎರಡೂ ರಾಷ್ಟಿçÃಯ ಪಕ್ಷಗಳು ಸಂವಿಧಾನಬದ್ಧವಾಗಿ ನೀಡುವಂತಹ ಅನುದಾನವನ್ನು ಸಹ ನೀಡುತ್ತಿಲ್ಲ. ಮಧುಗಿರಿ ಕ್ಷೇತ್ರವು ಬಹಳ ಹಿಂದುಳಿದ ಕ್ಷೇತ್ರವಾಗಿದ್ದು ಕಂದಾಯ ಜಿಲ್ಲೆಯನ್ನು ಮಾಡಲು ದೇವೇಗೌಡರು ಸಹಕಾರ ನೀಡಬೇಕೆಂದು ಮನವಿ ಮಾಡಿದ ಅವರು ಕಾಂಗ್ರೆಸ್‌ನೊAದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ದೇವೇಗೌಡರು ಸ್ಪರ್ಧಿಸಿದ್ದಲ್ಲಿ 1.50 ಲಕ್ಷ ಮತಗಳಿಂದ ಗೆಲ್ಲುತ್ತಿದ್ದರು ಎಂದರು.


ವಿಧಾನಪರಿಷತ್ ಅಭ್ಯರ್ಥಿ ಅನೀಲ್‌ಕುಮಾರ್ ಮಾತನಾಡಿ, ನನ್ನಂತಹ ತಳ ಸಮುದಾಯದ ವ್ಯಕ್ತಿಗೆ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವ ಜೆಡಿಎಸ್ ಪಕ್ಷಕ್ಕೆ ನಾನು ಆಭಾರಿಯಾಗಿದ್ದು, ಯಾವುದೇ ಸಂದರ್ಭದಲ್ಲೂ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಕೈ ಬಲಪಡಿಸಿ ಅವರನ್ನು ಮುಖ್ಯಮಂತ್ರಿ ಮಾಡಲು ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.


ಹಾಜರಿದ್ದ ಪ್ರಮುಖರು


ವಿಧಾನ ಪರಿಷತ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ, ಮಾಜಿ ಶಾಸಕರಾದ ಕೆ.ಎಂ. ತಿಮ್ಮರಾಯಪ್ಪ, ವೈ.ಎಸ್.ವಿ. ದತ್ತ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ಪುರಸಭೆ ಸದಸ್ಯರಾದ ಎಂ.ಎಸ್. ಚಂದ್ರಶೇಖರ್ ಬಾಬು, ಎಂ.ಆರ್. ಜಗನ್ನಾಥ್, ಎಂ.ಎಲ್. ಗಂಗರಾಜು, ಕೆ. ನಾರಾಯಣ್, ನರಸಿಂಹಮೂರ್ತಿ, ಜಿ.ಪಂ ಮಾಜಿ ಸದಸ್ಯೆ ಭಾರತಿ ಗೋವಿಂದರಾಜು, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಕೇಬಲ್ ಸುಬ್ಬು, ಮುಖಂಡರಾದ ತುಂಗೋಟಿ ರಾಮಣ್ಣ, ತಿಮ್ಮೇಗೌಡ, ಟಿ.ಗೋವಿಂದರಾಜು, ಬಿ.ಎಸ್. ಶ್ರೀನಿವಾಸ್, ಪ್ರಭು, ರಘು, ಬೆಳ್ಳಿ ಲೋಕೇಶ್, ಲಕ್ಷ್ಮಮ್ಮ, ಎಚ್. ಹನುಮಂತರಾಯಪ್ಪ, ಎಸ್. ಮೋಹನ್, ವೆಂಕಟಾಪುರ ಗೋವಿಂದರಾಜು. 


ಬಿಜೆಪಿ–ಕಾಂಗ್ರೆಸ್ ನಡುವೆ
ಒಳ ಒಪ್ಪಂದ: ಗೌರಿಶಂಕರ್


ಬಿಜೆಪಿಯವರು ನಾಮಕಾಸ್ತೆಗೆ ಗೊತ್ತು-ಗುರಿ ಇಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಜಿಲ್ಲೆಯಲ್ಲಿ ಆ ಪಕ್ಷದಿಂದ ನಿಲ್ಲುವಂತ ಗಂಡಸು ಯಾರೂ ಸಿಗಲಿಲ್ಲವೇ? ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಒಳ ಒಪ್ಪಂದ ಮಾಡಿಕೊಂಡಿವೆ. ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಲು ಷಡ್ಯಂತ್ರ ಮಾಡಿದವರಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದ್ದು, ಮಧುಗಿರಿ ನನ್ನ ತವರು ಮನೆಯಾಗಿದ್ದು, 2008ರ ವಿಧಾನಸಭಾ ಚುನಾವಣೆಯಲ್ಲಿ ಅಳವಡಿಸಿಕೊಂಡಿದ್ದ ತಂತ್ರಗಾರಿಕೆಯನ್ನು ಈ ಚುನಾವಣೆಯಲ್ಲಿ ಮತ್ತೆ ಜಾರಿಗೊಳಿಸಿ ಅನಿಲ್ ಕುಮಾರ್ ಗೆಲುವಿಗೆ ಶ್ರಮಿಸುತ್ತೇನೆ. 
- ಡಿ.ಸಿ.ಗೌರಿಶಂಕರ್,  ತುಮಕೂರು ಗ್ರಾ. ಶಾಸಕ