ಟಿಪ್ಪು ವಿರುದ್ಧ ಅಸಹನೀಯ ಘೋಷಣೆ: ಕ್ರಮಕ್ಕೆ ಕೆಪಿಸಿಸಿ ಒತ್ತಾಯ

ಟಿಪ್ಪು ವಿರುದ್ಧ ಅಸಹನೀಯ ಘೋಷಣೆ: ಕ್ರಮಕ್ಕೆ ಕೆಪಿಸಿಸಿ ಒತ್ತಾಯ

ಟಿಪ್ಪು ವಿರುದ್ಧ ಅಸಹನೀಯ ಘೋಷಣೆ: ಕ್ರಮಕ್ಕೆ ಕೆಪಿಸಿಸಿ ಒತ್ತಾಯ


ತುಮಕೂರು: ತುಮಕೂರಿನಲ್ಲಿ ಅ. ೨೨ರಂದು ನಡೆದ ಬಂದ್ ವೇಳೆ ವಿಶ್ವ ಹಿಂದೂ ಪರಿಷತ್,  ಬಜರಂಗದಳ ಮತ್ತು ಇನ್ನಿತರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಮುಸಲ್ಮಾನರ ಬಗ್ಗೆ ಹಾಗೂ ಸ್ವಾತಂತ್ರö್ಯ ಹೋರಾಟಗಾರ ಟಿಪ್ಪು ಬಗ್ಗೆ ಅವಾಚ್ಯಕಾರಿ ಮತ್ತು ಅಸಹನೀಯ ಪದಗಳನ್ನು ಬಳಸಿ ಕೋಮು ಪ್ರಚೋದನೆ ಮಾಡಿರುವವರ ಮೇಲೆ ಕ್ರಮ ಜರುಗಿಸುವಂತೆ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕೆ.ಪಿ.ಸಿ.ಸಿ ನಿಯೋಗವು ಪೋಲಿಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್, ಸಂಸದ ನಾಸೀರ್À ಹುಸೇನ್, ಶಾಸಕರಾದ ಎನ್.ಎ. ಹ್ಯಾರಿಸ್, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಶಾಸಕಿ ಖನೀಜ್ ಫಾತಿಮಾ, ಮಾಜಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಾಜಿ ಶಾಸಕ ಡಾ. ರಫೀಕ್‌ಅಹ್ಮದ್ ಇದ್ದರು.

ಮಾಜಿ ಶಾಸಕ ಡಾ. ರಫೀಕ್ ಅಹ್ಮದ್ ಪ್ರಕರಣದ ಬಗ್ಗೆ ಸವಿವರವಾಗಿ ಪೋಲಿಸ್ ಮಹಾನಿರ್ದೇಶಕರಿಗೆ ತಿಳಿಸಿದರು. ಉದ್ದೇಶ ಪೂರ್ವಕವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಪ್ರಚೋದನಕಾರಿ ಭಾಷಣ ಮಾಡಿ ಹಾಗೂ ಸ್ವಾತಂತ್ರö್ಯ ಹೋರಾಟಗಾರ ಟಿಪ್ಪು ಬಗ್ಗೆ ಅವಹೇಳನಕಾರಿ ಘೋಷಣೆ ಕೂಗಿರುವ ಕಿಡಿಗೇಡಿಗಳ ಮೇಲೆ ಕಠಿಣಕ್ರಮ ಜರುಗಿಸಿ ತುಮಕೂರು ನಗರದಲ್ಲಿ ಶಾಂತಿಯುತ ವಾತಾವರಣ ಕಲ್ಪಿಸಿ ಎಂದು ಮನವಿ ಮಾಡಿದರು.