ಮಟ್ಕ ದಂಧೆ ಕ್ರಮಕ್ಕೆ ಆಗ್ರಹ

ಮಟ್ಕ ದಂಧೆ ಕ್ರಮಕ್ಕೆ ಆಗ್ರಹ

ಮಟ್ಕ ದಂಧೆ ಕ್ರಮಕ್ಕೆ ಆಗ್ರಹ

ಪಾವಗಡ : ರಾಜಾರೋಷವಾಗಿ ಪ್ರತಿ ದಿನ ಮಟ್ಕ ದಂದೆ ತಾಲೂಕಿನಾದ್ಯಂತ ನಡೆಯುತ್ತಿದ್ದು ಇದಕ್ಕೆ ಕೆಲವು ಪೋಲಿಸರ ಕುಮ್ಮಕ್ಕು ಸಹ ಇದೆ ಎಂದು ತಾಲ್ಲೂಕು ಐಟಿ ಘಟಕದ ಜೆಡಿಎಸ್ ಪಕ್ಷದ ಮುಖಂಡರು ಆರೋಪಿಸಿದರು.

ತಾಲ್ಲೂಕಿನ ಪಟ್ಟಣದ ಸಿಪಿಐ ಕಚೇರಿಯಲ್ಲಿ  ಜೆಡಿಎಸ್ ಪಕ್ಷದ ಮುಖಂಡರು ದಿನಂಪ್ರತಿ ಕೋಟ್ಯಾಂತರ ರೂಪಾಯಿ ಮಟ್ಕಾ ದಂಧೆ ನಡೆಯುತ್ತಿದೆ ಎಂದು ಸಿಪಿಐ ಲಕ್ಷ್ಮಿಕಾಂತ್ ರವರಿಗೆ  ಮನವಿ ಪತ್ರ ಸಲ್ಲಿಸಲಾಯಿತು
ನಂತರ  ಮುಖಂಡರಾದ ಕಾವಲಗೇರೆ ರಾಮಾಂಜಿನಪ್ಪ ಮಾತನಾಡಿ ಪಾವಗಡ ಪಟ್ಟಣ ಹಾಗೂ ತಾಲೂಕಿನ ನಾಲ್ಕು ಹೊಬಳಿ ಕೇಂದ್ರಗಳಲ್ಲಿ ಮಟ್ಕಾ ಅಶ್ವತ್ತಪ್ಪ, ಕೃಷ್ಣಪ್ಪ, ಸುಜಾತ, ರಾಮಾಂಜಿನಪ್ಪ, ಲಕ್ಷ್ಮಿ, ರಂಜೀತ್, ಬಿ.ಇ.ಶಿಲ್ಪ, ಗಂಗಾಧರಪ್ಪ ಇವರುಗಳು ತಮ್ಮ ಅನುಚರರನ್ನು ನೇಮಿಸಿಕೊಂಡು ಪ್ರತಿ ನಿತ್ಯ 1 ಕೋಟಿಗೂ ಹೆಚ್ಚು ವ್ಯವಹಾರವನ್ನ ನಡೆಸುತ್ತಿದ್ದು, ಮತ್ತಷ್ಠು ಪರಣಾಮಕಾರಿಯಾಗಿ ಜನತೆಯನ್ನ ತಲುಪಲು ಮೊಬೈಲ್ ಮೂಲಕ ವ್ಯವಹಾರ ನಡೆಸುತ್ತಿದ್ದು ಇವರಿಗೆ ಪೋಲಿಸ್ ಠಾಣಿಗಳಲ್ಲಿ ಕೆಲವೊಂದು ಸಿಬ್ಬಂದಿಯ ಸಹಕಾರವಿರುವ ಕಾರಣ ದಾಳಿ ನಡೆಯುವ ಮಾಹಿತಿ ತಿಳಿದ ತಕ್ಷಣ ನಾಪತ್ತೆಯಾಗುತ್ತಾರೆ ಎಂದು ತಿಳಿಸಿದರು.

ಮಾಜಿ ಪುರಸಭಾ ಸದಸ್ಯರಾದ ಮನುಮಹೇಶ್ ಮಾತನಾಡಿ, ಪಾವಗಡ ಪಟ್ಟಣ ಹಾಗೂ ಹೊಬಳಿ ಕೇಂದ್ರಗಳಲ್ಲಿ ನಿರಂತರವಾಗಿ ಮಟ್ಕಾ ದಂದೆ ನಡೆಯುತ್ತಿದ್ದು, ಪೋಲಿಸ್ ಇಲಾಖೆಯ ಕೆಲವೊಂದು ಸಿಬ್ಬಂದಿ ಮಟ್ಕಾ ದಂಧೆಯಲ್ಲಿ ತೊಡಗಿದವರ ಮೇಲೆ ದಾಳಿ ಯಾವ ಸಮಯದಲ್ಲಿ ದಾಳಿ ಮಾಡಲಾಗುತ್ತದೆ ಎಂಬ ವಿಷಯವನ್ನು ಜಿಲ್ಲಾ ಮಟ್ಟದ ಸಂಪರ್ಕದಿಂದ ಮಾಹಿತಿ ಪಡೆದು ಇವರುಗಳಿಗೆ ರವಾನಿಸುತ್ತಿರುವ ಹಿನ್ನೆಲೆಯಲ್ಲಿ ಮಟ್ಕಾ ದಂದೆಯನ್ನ ಬುಡ ಸಮೇತ ಕೀಳಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಇಲಾಖೆಯೇ ಮೂಲ ಕಾರಣವಾಗಿದ್ದು, ಬಡ ಶೋಷಿತ ವರ್ಗಗಳ ರಕ್ತವನ್ನ ಹೀರುತ್ತಿರುವ ಮಟ್ಕಾ ಕಂಪನಿಗಳ ಮಾಲೀಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜೆಡಿಎಸ್ ಐಟಿ ಘಟಕದ ವತಿಯಿಂದ ಉಗ್ರಹೋರಾಟ ನಡೆಸಲಾಗುವುದೆಂದು ತಿಳಿಸಿದ್ದಾರೆ.

ಸಿಪಿಐ ಲಕ್ಷ್ಮಿಕಾಂತ್ ರಿಂದ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ

ಮನವಿ ಸ್ವೀಕರಿಸಿ ಮಾತನಾಡಿದ ಸಿಪಿಐ ಲಕ್ಷ್ಮಿಕಾಂತ್‌ ರು ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.  ಲೋಕೇಶ್ ಪಾಳ್ಳೇಗಾರ್, ಕೃಷ್ಣಗಿರಿ ಶಿವಕುಮಾರ್, ತಿಮ್ಮರಾಜು, ಗಂಗಾಧರ್ ನಾಯ್ಡ್, ನರಸಿಂಹ್ಮ, ಶ್ರೀನಿವಾಸ ನೇಕಾರ್, ಶಿವ, ಪಳವಳ್ಳಿ ಅಗ್ನಿ, ಮಂಜುನಾಥ್, ಮಾಜಿ ಪುರಸಭೆ ಸದಸ್ಯರಾದ ರೋಪ್ಪ ಗೋಪಾಲ, ನಾಗೇಂದ್ರ, ಕಡಮಲಕುಂಟೆ ಓಬಳೇಶ್ ಇದ್ದರು.