ಜ.2ರಂದು ಪತ್ರರ‍್ತ ಶಿವಾಜಿ ಗಣೇಶನ್ ರವರ   ‘ದಲಿತ ಚಳುವಳಿಯ ಹೆಜ್ಜೆಗಳು’ ಪುಸ್ತಕ ಬಿಡುಗಡೆ 

shivaji-ganeshan-dalitha-chaluvali-hejjegalu

ಜ.2ರಂದು ಪತ್ರರ‍್ತ ಶಿವಾಜಿ ಗಣೇಶನ್ ರವರ   ‘ದಲಿತ ಚಳುವಳಿಯ ಹೆಜ್ಜೆಗಳು’ ಪುಸ್ತಕ ಬಿಡುಗಡೆ 



ಜ.2ರಂದು ಪತ್ರರ‍್ತ ಶಿವಾಜಿ ಗಣೇಶನ್ ರವರ 
 ‘ದಲಿತ ಚಳುವಳಿಯ ಹೆಜ್ಜೆಗಳು’ ಪುಸ್ತಕ ಬಿಡುಗಡೆ 


ತುಮಕೂರು: ನಗರದ ರೇಡಿಯೋ ಸಿದ್ದಾರ್ಥ ಮುಖ್ಯಸ್ಥ ಹಾಗೂ ಹಿರಿಯ ಪತ್ರಕರ್ತ ಶಿವಾಜಿ ಗಣೇಶನ್ ಅವರ ‘ ದಲಿತ ಚಳುವಳಿಯ ಹೆಜ್ಜೆಗಳು’ ಪುಸ್ತಕದ ಬಿಡುಗಡೆ ಸಮಾರಂಭವನ್ನು ಬರುವ ಜನವರಿ ಎರಡರ ಭಾನುವಾರ ಬೆಳಿಗ್ಗೆ 10.30ಗಂಟೆಗೆ ನಗರದ ಅಮಾನಿ ಕೆರೆ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ೇರ‍್ಪಡಿಸಲಾಗಿದೆ.


‘ಬೆವರ ಹನಿ’ ಪ್ರಕಾಶನ ಹಾಗೂ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ದಲಿತ ಚಳುವಳಿಯ ಸಂಗಾತಿ ಹಾಗೂ ವಿಶ್ರಾಂತ ಕೆಎಎಸ್ ಅಧಿಕಾರಿ ರುದ್ರಪ್ಪ ಹನಗವಾಡಿ ಪುಸ್ತಕ ಬಿಡುಗಡೆ ಮಾಡುವರು. ಹಿರಿಯ ಪತ್ರರ‍್ತ ಹಾಗೂ ದಲಿತ ಚಳುವಳಿಯ ಆರಂಭದ ರ‍್ಷಗಳಲ್ಲಿ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ‘ ದಲಿತ ಚಳುವಳಿಯ ಹೆಜ್ಜೆಗಳು’ ಪುಸ್ತಕದ ಲೇಖಕ  ಶಿವಾಜಿ ಗಣೇಶನ್  ಹಾಗೂ ನಾಡಿನ ಸೂಕ್ಷ್ಮ ಸಂವೇದನೆಯ ಲೇಖಕ  ಹಾಗೂ ಬೂಸಾ ಚಳುವಳಿಯಲ್ಲಿ ಸಕ್ರಿಯವಾಗಿದ್ದ ಅಗ್ರಹಾರ ಕೃಷ್ಣಮರ‍್ತಿ ಪುಸ್ತಕ ಕುರಿತು ಮಾತನಾಡುವರು.


ಪಿಯುಸಿಎಲ್ ತುಮಕೂರು ಜಿಲ್ಲಾಧ್ಯಕ್ಷ ಹಾಗೂ ಹಿರಿಯ ದಲಿತ ಮುಖಂಡರಾದ ಕೆ.ದೊರೈರಾಜ್ ಅಧ್ಯಕ್ಷತೆ ವಹಿಸುವ ಈ ಸಮಾರಂಭದಲ್ಲಿ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಹಾಗೂ ನ್ಯಾಯವಾದಿಗಳಾದ ಜಿ.ಎಸ್.ಪ್ರಸನ್ನಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಹೃದಯರು ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ‘ಬೆವರ ಹನಿ’ ಪ್ರಕಾಶನದ ಕುಚ್ಚಂಗಿ ಪ್ರಸನ್ನ ಹಾಗೂ ಎಂ.ಹೆಚ್.ನಾಗರಾಜು ಕೋರಿದ್ದಾರೆ
*******