‘ಭೂಮಿ’ಯೇ ‘ಬಳಗ’ವಾದ ಸೋಮಣ್ಣ

ಸೋಮಣ್ಣನವರಿಲ್ಲದೇ ಮೂರು ವರ್ಷ ಕಳೆದುಹೋಯಿತು. ಸೋಮಣ್ಣ ಅಂದರೆ, “ಅದೇ ಜಿ.ಎಸ್.ಸೋಮಣ್ಣ, ಸಿದ್ಧಗಂಗಾ ಸೈನ್ಸ್ಕಾಲೇಜಿನಲ್ಲಿ ಲೆಕ್ಚರರ್‌ ಆಗಿದ್ರಲ್ಲ, ಓತುಮಕೂರಲ್ಲಿ ಜೆಡಿಎಸ್‌ನಿಂದ ಅಸೆಂಬ್ಲಿಗೆ ನಿಂತಿದ್ದರಲ್ಲ ಆ ಸೋಮಣ್ಣ, ನಂಜುಂಡೇಶ್ವರ ಹೋಟೆಲ್ ಪರ‍್ಟ್ನರ್‌ಆಗಿದ್ರಲ್ಲ, ಅಯ್ಯೋ ನಿಮಗೆ ಗೊತ್ತಿಲ್ವಾ ‘ ಕಿವುಡ ಮತ್ತು ಮೂಕರ ಸಂಘದ ಜಿಲ್ಲಾಧ್ಯಕ್ಷರೂಆಗಿದ್ರಲ್ಲಾ ಆ ಸೋಮಣ್ಣಕಣ್ರೀ, ಹೂಂ ಕಣ್ರೀತುಮಕೂರು ತುಂಬ ಕಲ್ಚರಲ್ ಪ್ರೋಗ್ರಾಮ್ಸ್ ಮಾಡ್ತಾಇದ್ರಲ್ಲ ಭೂಮಿ ಬಳಗದ ಸೋಮಣ್ಣಅಲ್ವಾ,” ಹೀಗೆ ತುಮಕೂರಿನ ಎಲ್ಲರಿಗೂ ಬೇಕಾಗಿದ್ದ ಜಿ.ಎಸ್.ಸೋಮಶೇಖರ್ @ ಜಿ.ಎಸ್.ಸೋಮಣ್ಣ ಸಿದ್ಧಗಂಗಾ ಮಠದರಾಯಭಾರಿಯಂತಿದ್ದವರು. ಮೂರು ವರ್ಷದ ಹಿಂದೆಕೊರೋನಾ ನೆಪದಲ್ಲಿಕಣ್ಮರೆಯಾದ ಸೋಮಣ್ಣನವರು ಸಿದ್ಧಗಂಗಾ ಮಠದತೆಂಗಿನತೋಟದತಂಪು ನೆರಳಲ್ಲಿ ಚಿರ ವಿಶ್ರಾಂತಿ ಪಡೆಯಲು ಅವಕಾಶ ಮಾಡಿ ಆಶೀರ್ವದಿಸಿದ ದೊಡ್ಡ ಮನಸ್ಸು ಸಿದ್ಧಗಂಗಾ ಮಠಾಧೀಶ ಶ್ರೀ ಸಿದ್ಧಲಿಂಗ ಸ್ವಾಮೀಜಿಅವರದು. ಸೋಮಣ್ಣನವರಒಡನಾಡಿ ನಾಗರಾಜಶೆಟ್ಟಿಯವರ ಆಪ್ತ ಬರಹಇಲ್ಲಿದೆ, ಓದಿ- ಸಂಪಾದಕ

‘ಭೂಮಿ’ಯೇ  ‘ಬಳಗ’ವಾದ ಸೋಮಣ್ಣ

ವ್ಯಕ್ತಿ-ವ್ಯಕ್ತಿತ್ವ

ಎಂ.ನಾಗರಾಜ ಶೆಟ್ಟಿ

ಸುಮಾರು ಮೂರೂವರೆ ದಶಕಗಳ ಹಿಂದೆ. ಬೆಳಿಗ್ಗೆ ಸ್ಕೂಟರಿನಲ್ಲಿ ಬ್ಯಾಂಕಿಗೆ ಹೋಗುತ್ತಿದ್ದೆ. ನಂಜುಂಡೇಶ್ವರ ಹೋಟೆಲಿನ ಪಕ್ಕದ ಸಂದಿಯಿಂದ ವೇಗವಾಗಿ ಬಂದ ಸ್ಕೂಟರ್‌ ಡಿಕ್ಕಿ ಹೊಡೆಯಿತು. ರಸ್ತೆಗೆ ಬಿದ್ದವನು ಸಾವರಿಸಿಕೊಂಡು ಏಳಲು ನೋಡಿದೆ. ಬವಳಿ ಬಂತು. ಮತ್ತೆ ಎದ್ದಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ.


ಪ್ರೊ.ನಾಗಭೂಷಣ್ ಮತ್ತು ಕೆಲವು ಗೆಳೆಯರು ಪಕ್ಕದಲ್ಲಿ ನಿಂತಿದ್ದರು. ಹಣೆಗೆ ಏಟು ಬಿದ್ದಿತ್ತು. ಮತ್ತೇನೂತೊಂದರೆಇರಲಿಲ್ಲ.


 “ಆಕ್ಸಿಡೆಂಟ್‌ ಆಗಿದ್ದು ಹೇಗೆ ತಿಳಿಯಿತು,ಆಸ್ಪತ್ರೆಗೆ ಸೇರಿಸಿದವರು ಯಾರು, ಸ್ಕೂಟರ್‌ ಎಲ್ಲಿ?” ನಾಗಭೂಷಣ್‌ಗೆ ಕೇಳಿದೆ. 


"ಎಲ್ಲಾ ಸರಿಇದೆ, ಮೊದಲು ಡಿಸ್ಚಾರ್ ಜ್ಆಗ್ಲಿ" ಎಂದು ಹೇಳಿದ ನಾಗಭೂಷಣ್, ಆಸ್ಪತ್ರೆಗೆ ಸೇರಿಸಿದವರು ಯಾರು ಎಂದು ಹೇಳಲಿಲ್ಲ.


ಕೆಲದಿನಗಳ ನಂತರ ಒತ್ತಾಯಿಸಿದಾಗ ತಿಳಿಯಿತು. ಕಾಲೇಜಲ್ಲಿದ್ದ ನಾಗಭೂಷಣ್‌ಗೆ ಫೋನ್ ಮಾಡಿ "ನಿಮ್ಮ ಗೆಳೆಯರಿಗೆ ಆಕ್ಸಿಡೆಂಟ್‌ಆಗಿದೆ, ಬನ್ನಿ" ಎಂದು ಹೇಳಿ ಅಸ್ಪತ್ರೆಗೆದಾಖಲು ಮಾಡಿದವರು ಸೋಮಣ್ಣ. ಇದುಜಿ.ಎಸ್.ಸೋಮಶೇಖರ್. ತನ್ನಕರ್ತವ್ಯವನ್ನು ಮುಗಿಸಿ ನೇಪಥ್ಯಕ್ಕೆ ಸೇರಿ ಬಿಡುವುದು ಸೋಮಣ್ಣನಗುಣ.


ಈ ಘಟನೆಗಿಂತ ಮೊದಲೇ ಸೋಮಣ್ಣನ ಪರಿಚಯವಿತ್ತು. ಸಿ. ವಿ. ಮಹದೇವಯ್ಯ ನಂಜುಂಡೇಶ್ವರ ಹೋಟೆಲ್ ಪ್ರಾರಂಭಿಸಿದಾಗ ಅವರಜತೆ ನಿಂತವರು ಸೋಮಣ್ಣ. ಸಂಜೆಆರರಿಂದ ರಾತ್ರಿಒಂಬತ್ತರ ತನಕ ಹೋಟೆಲಲ್ಲಿ ತಾನೇ ಮುಂದೆ ನಿಂತು ಬಂದವರನ್ನು ಸುಧಾರಿಸುತ್ತಿದ್ದರು. ಆ ದಿನಗಳಲ್ಲಿ ನಂಜುಂಡೇಶ್ವರ ಹೋಟೆಲಲ್ಲಿ ಗಿರಾಕಿಗಳ ಸಾಲು. ಮಧ್ಯಾಹ್ನದ ಊಟಕ್ಕೆ ಗಂಟೆ ಗಟ್ಟಲೆ ಕಾಯಬೇಕಿತ್ತು. ಬ್ಯಾಂಕಿನ ಕಾರ್ಯಕ್ರಮಗಳಾದಾಗ ಊಟದ ವ್ಯವಸ್ಥೆಗೆ ನಾವು ಹೇಳುತ್ತಿದ್ದುದು ಸೋಮಣ್ಣಗೆ. ಹೀಗೆ ಶುರುವಾದ ಪರಿಚಯ ಗೆಳೆತನವಾಗಿ ಮಾರ್ಪಡಲು ಬಹಳ ದಿನ ಬೇಕಾಗಲಿಲ್ಲ.


ನಗುಮೊಗದ ಮೋಡಿಗಾರ


ಪರಿಚಯ ಗೆಳೆತನವಾದ ಮೇಲೆ ನವಂಬರ್, ಡಿಸೆಂಬರ್ ತಿಂಗಳಲ್ಲಿ ಬೆಳಿಗ್ಗಿನ ಉಪಾಹಾರ ಹೆಚ್ಚು, ಕಮ್ಮಿ ಸೋಮಣ್ಣನ ಮನೆಯಲ್ಲಿಯೇ ಆಗುತ್ತಿತ್ತು.ಅವರೇ ಆಯ್ದು ತಂದ ಸೊಗಡು ಅವರೆಕಾಯಿ ಉಸುಳಿ, ಅಕ್ಕಿ ರೊಟ್ಟಿ, ಚಪಾತಿಇತ್ಯಾದಿ. ಬೇಡ ಬೇಡವೆಂದರೂ ಹೊಟ್ಟೆ ಬಿರಿಯುವಂತೆ ತಿನಿಸುತ್ತಿದ್ದರು. ಕೆಲವೊಮ್ಮೆ ಜಿ ಎಂ ಶ್ರೀನಿವಾಸಯ್ಯನವರನ್ನು ಸ್ಕೂಟರಿನಲ್ಲಿಕರೆದುಕೊಂಡು ಹೋಗುವ ಕೆಲಸ ನನ್ನ ಮೇಲಿರುತ್ತಿತ್ತು. ಈ ಸಮಾರಾಧನೆ ಒಬ್ಬಿಬ್ಬರಿಗಲ್ಲ. ಜಿ ಎಂ ಶ್ರೀನಿವಾಸಯ್ಯ, ಎಸ್ ಜಿ ಸಿದ್ಧರಾಮಯ್ಯ, ನಾಗಭೂಷಣ್, ಜಿ ವಿ ಆನಂದಮೂರ್ತಿ, ನರಸೀಯಪ್ಪ ಯಾರಾದರೂ ಇದ್ದೇ ಇರುತ್ತಿದ್ದರು.


ಹಾಗೆ ಎಲ್ಲರೂ ಸೇರಿದ್ದ ಒಂದು ದಿನ 'ಭೂಮಿ ಬಳಗ'ಕ್ಕೆ ಕಾರ್ಯದರ್ಶಿಯಾಗಿ ನನ್ನ ಹೆಸರು ಬಂತು. ಅವರೆಲ್ಲ ಹಿರಿಯರು,ಸಾಕಷ್ಟು ಹೆಸರು ಮಾಡಿದವರು ಅವರ ನಡುವೆ ನಾನೆಷ್ಟರವನೆಂದು ಹಿಂಜರಿದೆ. ಬೇಡ ಎಂದರೂ ಬಿಡದೆ ಒಪ್ಪಿಸಿಬಿಟ್ಟರು. ಇದರಿಂದ, ತುಮಕೂರು ಬಿಡುವ ವರೆಗೂ ಸೋಮಣ್ಣನ ಜತೆಯಲ್ಲಿದ್ದು ಅವರ ಸಂಘಟನಾ ಶಕ್ತಿಯನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು. ದಿನದಇಪ್ಪತ್ತನಾಲ್ಕು ಗಂಟೆಯೂ ಆಯಾಸಗೊಳ್ಳದೆ, ಬೇಸರಿಸದೆ, ಮುಖದಲ್ಲಿ ಕಿರುನಗೆಯೊಂದನ್ನು ಉಳಿಸಿಕೊಂಡು ಕೆಲಸ ಮಾಡುವ ಅವರ ಅದಮ್ಯ ಶಕ್ತಿಯ ಪರಿಚಯವಾಯಿತು.


'ಭೂಮಿ ಬಳಗ' ಒಂದು ಸಾಂಸ್ಕೃತಿಕ ಸಂಘಟನೆ. ಕಾರ್ಯಕ್ರಮದ ವಿವರಗಳನ್ನು ನಾವೆಲ್ಲ ಚರ್ಚಿಸಿದರೂ ಕಾರ್ಯಭಾರವೆಲ್ಲ ಸೋಮಣ್ಣನವರದೇ. ಬಿಡಿಕಾಸೂ ಯಾರೂ ಖರ್ಚು ಮಾಡುವಂತಿರಲಿಲ್ಲ. 'ಭೂಮಿ ಬಳಗ' ನಡೆಸಿದ ಕಾರ್ಯಕ್ರಮಗಳು ನೂರಾರು. ನಾಟಕ- ಚಲನಚಿತ್ರಗಳ ಪ್ರದರ್ಶನ, ಪುಸ್ತಕ ಪ್ರಕಟಣೆ, ಚಿತ್ರಕಲಾ ಪ್ರದರ್ಶನ, ಸಂವಾದಗಳು, ತಜ್ಞರ ಭಾಷಣಗಳು, ಸಂಗೀತ ಗೋಷ್ಠಿಗಳು ಹೀಗೆ ತಿಂಗಳು, ತಿಂಗಳು ಒಂದೆರಡು ಕಾರ್ಯಕ್ರಮಗಳು ಇದ್ದೇ ಇರುತ್ತಿತ್ತು.


'ಮುನ್ನುಡಿ' ಚಿತ್ರದ ನಿರ್ಮಾಪಕರಲ್ಲಿ ಸೋಮಣ್ಣ ಒಬ್ಬರು. ಆ ಸಿನಿಮಾವನ್ನು ಪ್ರಶಾಂತ್ ಟಾಕೀಸಿನಲ್ಲಿ ಬೆಳಗಿನ ಹೊತ್ತು ಪ್ರದರ್ಶಿಸಿದಾಗ ನಿರೀಕ್ಷೆ ಮೀರಿ ಪ್ರೇಕ್ಷಕರಿದ್ದರು. ಸೋಮಣ್ಣನ ಮೇಲಿನ ಪ್ರೀತಿಯಿಂದತುಮಕೂರಿನಗಣ್ಯರು, ಹಿರಿಯರು ಆಗಮಿಸಿದ್ದರು. ಸೋಮಣ್ಣ ಈ ಚಿತ್ರದ ಯಶಸ್ಸಿನಿಂದ ಉತ್ತೇಜಿತರಾಗಿ ಪಿ ಶೇಷಾದ್ರಿಜೊತೆಯಲ್ಲಿ ಮತ್ತೆ ಕೆಲವು ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಿದರು. 


'ಮುನ್ನುಡಿ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆತಾಗ ಪ್ರಶಸ್ತಿಯನ್ನು ಪಡೆಯಲುದೆಹಲಿಗೆ ಹೋಗಿದ್ದರು. ಇದು ಸೋಮಣ್ಣನಜೀವನದ ಮರೆಯಲಾರದ ಘಟನೆಗಳಲ್ಲೊಂದು. ಸಿನಿಮಾರಂಗದ ಘಟಾನುಘಟಿಗಳನ್ನು ಸಮೀಪದಲ್ಲಿ ನೋಡುವ ಅವಕಾಶ ದೊರಕಿತ್ತು. ಶ್ರೀದೇವಿಯನ್ನು ಹತ್ತಿರದಿಂದ ನೋಡಿ ಖುಷಿ ಪಟ್ಟಿದ್ದರು. "ಅವಳು ಸಿನಿಮಾದಲ್ಲಿಇರುವ ಹಾಗಿಲ್ಲ. ಎತ್ತರಕಮ್ಮಿ. ಮುಖ, ನಗು ತುಂಬಾಚಂದ " ಎಂದಿದ್ದು ಈಗಲೂ ನೆನಪಿದೆ.


ಟಿ.ಎನ್.ಸೀತಾರಾಂರವರ 'ಮುಕ್ತ,ಮುಕ್ತ' ಧಾರಾವಾಹಿ ಕುರಿತ ಸಂವಾದವನ್ನು ಎಸ್‌ಐಟಿ ಸಭಾಂಗಣದಲ್ಲಿ ಏರ್ಪಡಿಸಿದ್ದೆವು. ಧಾರಾವಾಹಿಯ ನಟ-ನಟಿಯರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಎಲ್ಲರಿಗೂ ವೇದಿಕೆ ಹತ್ತುವ, ಪ್ರಶ್ನೆ ಕೇಳುವ ಆತುರ. ಭದ್ರತಾ ಸಿಬ್ಬಂದಿ ಇಲ್ಲದ ಸಂದರ್ಭದಲ್ಲಿ ಸೋಮಣ್ಣನ ಸಭಾ ನಿರ್ವಹಣೆಯೇ ನೂಕುನುಗ್ಗಲನ್ನು ನಿಯಂತ್ರಿಸಿತ್ತು.


ತುಮಕೂರಲ್ಲಿಜರಗುವ ಕಾರ್ಯಕ್ರಮಗಳಲ್ಲಿ ಒಂದಲ್ಲ, ಒಂದುರೀತಿಯಲ್ಲಿ ಸೋಮಣ್ಣನ ಭಾಗವಹಿಸುವಿಕೆ ಇರುತ್ತಿತ್ತು. ಕೆಲವೊಮ್ಮೆತೆರೆಮರೆಯಲ್ಲಿ! ಯುಆರ್‌ಅನಂತಮೂರ್ತಿಯವರಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ, ಸಿದ್ಧಗಂಗಾ ಮಠದ ಕಾರ್ಯಕ್ರಮಗಳು, ಗಣ್ಯರಅಭಿನಂದನಾ ಕಾರ್ಯಕ್ರಮಗಳಲ್ಲಿ ಅವರ ಪರಿಶ್ರಮಎದ್ದುಕಾಣುತ್ತಿತ್ತು.


ಮದುವೆ, ಗೃಹಪ್ರವೇಶ, ಉದ್ದಿಮೆಗಳ ಪ್ರಾರಂಭೋತ್ಸವಇತ್ಯಾದಿ ಕಾರ್ಯಗಳು ಸೋಮಣ್ಣನಕಣ್ಗಾವಲಿದ್ದರೆ ಯಶಸ್ವಿಯಾಯಿತೆಂದೇ ಲೆಕ್ಕ. ಅವರಿಗೆ ವಿಶೇಷಆಹ್ವಾನದಅಗತ್ಯವಿರಲಿಲ್ಲ. "ಸೋಮಣ್ಣ ಬನ್ನಿ" ಅಂದರೆ ಸಾಕು; ಶಾಮಿಯಾನದಿಂದ ಹಿಡಿದು, ಅಡುಗೆಯರುಚಿ ನೋಡುವ ವರೆಗೆ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸಿ ಅತಿಥಿಗಳ ಮನಸ್ಸಂತೋಷ ಪಡಿಸುತ್ತಿದ್ದರು. ಯಾವಜವಾಬ್ದಾರಿಯನ್ನೇ ಆಗಲಿ ಪೂರ್ಣಗೊಳಿಸುವ ವರೆಗೆ ವಿರಮಿಸುತ್ತಿರಲಿಲ್ಲ. ಅಸಾಧ್ಯಎನ್ನುವ ಶಬ್ದ ಅವರ ಶಬ್ದಕೋಶಕ್ಕೆ ಹೊರತಾಗಿತ್ತು.


ರಾಜಕಾರಣಿಯಾಗದ ನಾಯಕ


ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡವರಿಗೆ ರಾಜಕೀಯದ ಸೆಳೆತವಿರುವುದು ವಿಶೇಷವಲ್ಲ. ಅದರಲ್ಲೂತುಮಕೂರುಆಡುಂಬೊಲವಾದವರಿಗೆಇಲ್ಲಿನಓರೆ,ಕೋರೆಗಳನ್ನು ದೂರ ಮಾಡಲು ಸಕ್ರಿಯ ರಾಜಕಾರಣ ಬೇಕೆನ್ನಿಸುವುದು ಸಹಜ.


ಸೋಮಣ್ಣಎರಡು ಚುನಾವಣೆಗಳಲ್ಲಿ ತನ್ನ ಸಾಮರ್ಥ್ಯವನ್ನು ಪರೀಕ್ಷೆಗೊಡ್ಡಿದ್ದರು. ಮೊದಲು ಪದವೀಧರರ ಕ್ಷೇತ್ರ, ಬಳಿಕ ವಿಧಾನ ಸಭಾಚುನಾವಣೆ. ಇವೆರಡರಲ್ಲು ನಿರೀಕ್ಷಿತ ಯಶಸ್ಸು ದೊರಕದಿದ್ದರೂ ಎದೆಗುಂದಿರಲಿಲ್ಲ. ತುಮಕೂರಿನ ಮತ್ತುರಾಜ್ಯ ಮಟ್ಟದ ರಾಜಕಾರಣಿಗಳ ಪರಿಚಯ , ತಳಮಟ್ಟದ ಜನಸಂಪರ್ಕವಿತ್ತು. ಒಂದಲ್ಲ, ಒಂದು ದಿನ ಅವಕಾಶಗಳ ಬಾಗಿಲು ತೆರೆಯಬಹುದುಎನ್ನುವ ನಿರೀಕ್ಷೆಇತ್ತು.


ಸಿದ್ಧರಾಮಯ್ಯನವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಸೋಮಣ್ಣ ಮನೆಗೆ ಕರೆಸಿ, ಗಂಟೆಗಟ್ಟಳೆ ಚರ್ಚಿಸಿದ್ದರು. ಆ ನಂತರ ಸರ್ಕಾರಿ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾದ ಅಭೂತ ಪೂರ್ವ ಅಹಿಂದ ಸಮಾವೇಶದಲ್ಲೂ ತೊಡಗಿಸಿಕೊಂಡಿದ್ದರು. ಕಾಲಾಂತರದಲ್ಲಿ ಸಿದ್ಧರಾಮಯ್ಯ ಮುಖ್ಕಮಂತ್ರಿಯಾದರು. ಆ ಸಂದರ್ಭದಲ್ಲಿ ಹಳೆಯ ಪರಿಚಯವನ್ನು ನವೀಕರಿಸುವ ಪ್ರಯತ್ನ ಸೋಮಣ್ಣ ಮಾಡಲೇಇಲ್ಲ. ಇದಕ್ಕೆತುಮಕೂರಿನ ರಾಜಕೀಯದ ಒಳಸುಳಿಗಳು ಕಾರಣವಿರಬಹುದು.


ತನಗಾಗಿಏನನ್ನೂ ಕೇಳುವುದು ಸೋಮಣ್ಣನಜಾಯಮಾನವಲ್ಲ. ಓಲೈಕೆ ಅವರಿಂದಾಗುತ್ತಿರಲಿಲ್ಲ. ಸೋಮಣ್ಣನಕಣ್ಣ ಮುಂದೆಅವರು ಬೆಳೆಸಿದವರೇ ಮೆರೆಯುತ್ತಿದ್ದರು. ಇದೆ ಬಗೆಗೂ ಕಿಂಚಿತ್ತೂ ಖೇದವಿರಲಿಲ್ಲ. "ನಾವೇನು ಚೆನ್ನಾಗಿಲ್ವ" ಎಂದು ನಕ್ಕು ಬಿಡುತ್ತಿದ್ದರು. ಅದರಲ್ಲಿ ಸತ್ಯವೂಇತ್ತು. ರಾಜಕಾರಣಿಯೊಬ್ಬನಿಗೆ ದಕ್ಕದ ಪ್ರೀತಿಅವರಿಗೆ ದಕ್ಕಿತ್ತು. ಎಲ್ಲರಿಗೂ ಸೋಮಣ್ಣ ಬೇಕು. ಇದನ್ನವರು ಆನಂದಿಸುತ್ತಿದ್ದರು.


ತುಮಕೂರು ನಗರದ ಅಭಿವೃದ್ದಿಯ ಕುರಿತು ಸೋಮಣ್ಣನಿಗೆ ತನ್ನದೇ ಆದ ಯೋಜನೆಗಳಿದ್ದವು. ಸುಂದರ ನಗರವನ್ನು ಕನಸಿದ್ದರು, ಬಡವರ, ದಲಿತರ ಬಗ್ಗೆ ಅಪಾರ ಕಾಳಜಿಯಿತ್ತು, ಎಲ್ಲರ ಬದುಕು ಹಸನಾಗಲು ಬಯಸಿದ್ದರು. ಆದರೆ ಅದಕ್ಕೆ ತಕ್ಕ ಭೂಮಿಕೆ ಒದಗಲಿಲ್ಲ. ವೈಯಕ್ತಿಕವಾಗಿ ಸೋಮಣ್ಣನಿಗೆ ನಷ್ಟವಾಗದಿದ್ದರೂ ತುಮಕೂರಿನ ಜನ ಒಳ್ಳೆಯ ಜನಪ್ರತಿನಿಧಿಯನ್ ನುಗುರುತಿಸುವಲ್ಲಿ ಸೋತರು.


ಆಚಾರವಿಡಿದು ಶರಣ


ತುಮಕೂರಿನಲ್ಲಿ ಹಲವರ ಅಸ್ತಿತ್ವವಿರುವುದು ಲಿಂಗಾಯತನೆನಿಸಿಕೊಳ್ಳುವುದರಲ್ಲಿ. ಬಹುತೇಕರ ವ್ಯಕ್ತಿತ್ವ ಈ ಸರಹದ್ದನ್ನು ಮೀರಿ ಬೆಳೆಯುವುದಿಲ್ಲ. ಸೋಮಣ್ಣಧಾರ್ಮಿಕ.ಆದರೆಧರ್ಮದ ಪರಿಧಿ ಸೋಮಣ್ಣನ್ನುಕಟ್ಟಿ ಹಾಕಲಿಲ್ಲ.


ಸೋಮಣ್ಣನಿಗೆ ಸಿದ್ಧಗಂಗಾ ಮಠದ ಮೇಲೆ ಪರಮ ನಿಷ್ಠೆ.ಅದಕ್ಕೆ ಬಹುಮುಖ್ಯ ಕಾರಣ ಶ್ರೀ ಶಿವಕುಮಾರ ಸ್ವಾಮಿಗಳು. ಸ್ವಾಮೀಜಿಯ ಮೇಲೆ ಸೋಮಣ್ಣನವರಿಗೆಗೌರವ, ಭಕ್ತಿ ಮತ್ತು ಪ್ರೀತಿ. ಅದುತೋರಿಕೆಯದಲ್ಲ. ಯಾವುದೇ ನಿರ್ಧಾರವನ್ನು ಕೈಗೊಳ್ಳುವಾಗ ಸ್ವಾಮೀಜಿಯವರ ಹತ್ತಿರ ಕೇಳದೆ ಇರುತ್ತಿರಲಿಲ್ಲ. ಅವರು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಮಠದ ಬಗ್ಗೆ ಅಥವಾ ಮಠದ ಸಂಸ್ಥೆಗಳ ಬಗೆಗಿನ ಟೀಕೆಗಳನ್ನು ಸಹಿಸುತ್ತಿರಲಿಲ್ಲ. ಮಠದ ಗೊಂದಲದ ದಿನಗಳಲ್ಲಿ ಹಲವು ನಿಷ್ಠರು ದೂರವಾದಾಗಲೂ ಸೋಮಣ್ ಣದೃಢವಾಗಿದ್ದರು. 


ಹಿರೇಮಠದ ಸ್ವಾಮಿಗಳು, ಕರಿಬಸವ ಸ್ವಾಮಿಗಳಲ್ಲಿ ಸೋಮಣ್ಣನಿಗೆ ಹೊಕ್ಕು ಬಳಕೆಯಿತ್ತು. ಅಲ್ಲೆಲ್ಲ ಕೆಲಸಗಳಿದ್ದರೆ ಆಹ್ವಾನವಿರುತ್ತಿತ್ತು. 


ಅದೇರೀತಿ ಸಿಎಸ್‌ಐ ಸಂಸ್ಥೆಯಜೊತೆಯಲ್ಲು ಒಡನಾಟವಿತ್ತು. ಒಮ್ಮೆ ಸೋಮಣ್ಣನವರಜತೆ ಸಿಎಸ್‌ಐ ಚರ್ಚಿನ ಫಾದರ್ ಮನೆಗೆ ಹೋಗಿದ್ದೆ. ಯಾವುದೋ ಕೆಲಸ ಆಗಬೇಕಿತ್ತು. ಚರ್ಚಿಗೆ ಸಂಬಂಧಪಟ್ಟ ಕೆಲಸದಲ್ಲಿ ಮಗ್ನರಾಗಿದ್ದ ಫಾದರ್ ಸೋಮಣ್ಣ ಬಂದಿದ್ದು ಗೊತ್ತಾದ ತಕ್ಷಣ ಎದ್ದು ಬಂದರು. ಸೋಮಣ್ಣ ಹೇಳಿದ್ದನ್ನು ಮರು ಮಾತಿಲ್ಲದೆ ಒಪ್ಪಿದರು.


ಕೋಳಿ ನೈವೇದ್ಯ ಸ್ವೀಕರಿಸುವ ದೇವರು, ಸಾರಾಯಿ ಹರಕೆ ಸಲ್ಲಿಸುವಗುಡಿ, ಬೇಡಿದುದನ್ನು ನೀಡುವದರ್ಗಾಇವೆಲ್ಲ ಸೋಮಣ್ಣನಿಗೆಗೊತ್ತಿತ್ತು. ಅಲ್ಲೆಲ್ಲಅವರೊಂದಿಗೆತಿರುಗಾಡಿದ್ದೆವು. ಅವರ ಸ್ನೇಹ ವಲಯದಲ್ಲಿಅವರಿವರೆನ್ನದೆಎಲ್ಲರಿಗೂಜಾಗವಿತ್ತು. 


ಇದ್ದಕ್ಕಿದ್ದಂತೆ ಸೋಮಣ್ಣ ಗೆಳೆಯರ ಮನೆಗೆ ಲಗ್ಗೆಯಿಡುವುದಿತ್ತು. ನೇರಅಡುಗೆ ಮನೆಗೆ ದಾಳಿ ಮಾಡಿ ನನ್ನ ಹೆಂಡತಿಗೆಏನಿದೆಎAದು ಕೇಳುತ್ತಿದ್ದರು. ಅವರೇ ಬಡಿಸಿಕೊಳ್ಳುತ್ತಿದ್ದರು. ಚಿದಂಬರಯ್ಯನ ಮನೆಗೆ ಹೋದರೆಅವರ ಶ್ರೀಮತಿಗೆ ಇದನ್ನೇ ಮಾಡಿಎನ್ನುವ ಸ್ವಾತಂತ್ರ‍್ಯವಿತ್ತು. ನರಸೀಯಪ್ಪನ ಮನೆಯಲ್ಲಿಯೂಅದೇಕ್ರಮ. ಜಾತ್ಯತೀತನಾಗಿರುವುದು ಹೇಗೆ ಎನ್ನುವುದಕ್ಕೆಅವರೊಂದು ನಿದರ್ಶನದಂತಿದ್ದರು.


ಒಳಿತು ಮಾಡುವ ಮನಸ್ಸು


ಸಾಧಕರನ್ನು ಗುರುತಿಸಿ, ಗೌರವಿಸುವುದು ಅನೂಚಾನವಾಗಿ ಸೋಮಣ್ಣ ಅನುಸರಿಸಿಕೊಂಡು ಬಂದ ವಿಧಾನ. ಇದರಲ್ಲಿ ಹಿರಿಯರು, ಕಿರಿಯರು ಎನ್ನುವ ಭೇದವಿಲ್ಲ. ಸೋಮಣ್ಣನ ಮನೆ ತುಮಕೂರಿಗೆ ಬರುವಕಲಾವಿದರಕೊನೆಯ ನಿಲ್ದಾಣ. ಅಲ್ಲಿಆತ್ಮೀಯರ ನಡುವೆ ಸಂವಾದ, ಕಾರ್ಯಕ್ರಮಗಳ ರೂಪರೇಷೆ ತಯಾರಾಗುತ್ತಿತ್ತು.


ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಸೋಮಣ್ಣನವರ ಮನೆಗೆ ಬಂದಿದ್ದರೆಂದು ನಾಗಭೂಷಣ್ ಹೇಳಿದರು. ಸೋಮಣ್ಣನವರಿಗೆ ಹಂಸಲೇಖ ಅವರ ಪರಿಚಯ ನಿನ್ನೆ ಮೊನ್ನೆಯದಲ್ಲ. ತುಮಕೂರಿನಲ್ಲಿ ಹಂಸಲೇಖರವರ ನಾಟಕದ ಕಂಪೆನಿ ಬೀಡು ಬಿಟ್ಟಿತ್ತು. ಹಂಸಲೇಖ ಅವರಕಷ್ಟದ ದಿನಗಳು. ಗಲ್ಲಾ ಪೆಟ್ಟಿಗೆತುಂಬುತ್ತಿರಲಿಲ್ಲ. ಅಂತಹ ದಿನಗಳಲ್ಲಿ ಜತೆಗೂಡಿದವರು ಸೋಮಣ್ಣ. ಆ ನಂತರದಲ್ಲಿ ಹಂಸಲೇಖ ಬಹಳ ಎತ್ತರಕ್ಕೆ ಏರಿದರು. ಆದರೂ ಸಂಕಷ್ಟದ ದಿನಗಳ ಜೊತೆಗಾರನನ್ನು ಮರೆಯದೆ ಹಂಸಲೇಖ ಬಾಂಧವ್ಯ ಕಾಪಿಟ್ಟುಕೊಂಡಿದ್ದರು. 


ಸಿದ್ಧಗಂಗಾ ಕಾಲೇಜಿನಲ್ಲಿದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಸೋಮಣ್ಣನವರಿಗೆ ಸಹಜವಾಗಿಯೇ ಆಟಗಳು ಮತ್ತು ವಿದ್ಯಾರ್ಥಿಗಳ ಮೇಲೆ ಒಲವಿತ್ತು. ವಾಲಿಬಾಲ್, ಟೆನಿಸ್, ಬ್ಯಾಡ್ಮಿಂಟನ್ ಆಟಗಳಲ್ಲಿ ಪರಿಶ್ರಮವಿತ್ತು. ಆಥ್ಲೆಟಿಕ್ಸ್ ಅಚ್ಚುಮೆಚ್ಚು. ಕ್ಷಣಮಾತ್ರದಲ್ಲಿ ಕ್ರೀಡಾಪಟುಗಳ ಲೋಪದೋಷಗಳನ್ನು ಕಂಡುಹಿಡಿಯುವ, ಪ್ರತಿಭೆಯನ್ನುಗುರುತಿಸುವಗುಣವಿತ್ತು. ಓಟಗಾರನಿರಬೇಕಾದ ಕಾಲಿನ ಮೀನಖಂಡ, ಪಾದರಚನೆಯ ಬಗೆಗೆ ನಮಗೊಮ್ಮೆ ಪಾಠ ಮಾಡಿದ್ದರು.


ಒಮ್ಮೆಅವರ ಮನೆಗೆ ಹದಿಹರೆಯದ ಹುಡುಗನೊಬ್ಬ ಬಂದಿದ್ದ. ತುಮಕೂರು ಪಕ್ಕದ ಹಳ್ಳಿಯ ಹುಡುಗ. ಹೈಸ್ಕೂಲ್ ಮಟ್ಟದ ಓಟದ ಸ್ಪರ್ಧೆಯಲ್ಲಿ ಸೋಮಣ್ಣನ ಕಣ್ಣಿಗೆ ಬಿದ್ದಿದ್ದ. ಅವನಿಗೆ ಪ್ರೋತ್ಸಾಹ ನೀಡಿ, SಂI (ಸ್ಪೋರ್ಟ್ಅಥಾರಿಟಿಆಫ್‌ಇಂಡಿಯಾ)ಗೆ ಕಳುಹಿಸಿ ಸೋಮಣ್ಣ ಖರ್ಚು ವೆಚ್ಚ ನೋಡಿಕೊಂಡರು. 


ಸೋಮಣ್ಣನವರ ಸಾಹಿತ್ಯಾಸಕ್ತಿ ಬರಿ ಮಾತಿನದಲ್ಲ. ಪಟ್ಟಾಗಿ ಕೂತು ಓದುತ್ತಿದ್ದರು. ಓದಿದ್ದನ್ನುಚರ್ಚೆ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಯಾವುದೋ ಒಂದು ಕವಿತೆಯ ಚರಣ ಗುಣುಗುತ್ತಿದ್ದರು. ನಾವೆಲ್ಲಅದು ಯಾರ ಕವಿತೆ ಎಂದು ಹೇಳಬೇಕು!


ಒಂದು ಮುಂಜಾನೆಕವಿತೆಯ ಸಾಲೊಂದನ್ನು ಹೇಳಿ, ಇದುಯಾರದ್ದು ಹೇಳಿ ಎಂದು ಎಲ್ಲರೆದುರು ಪ್ರಶ್ನಿಸಿದರು. ನನಗೆ ಹೊಳೆಯಲಿಲ್ಲ.


"ಎಂತಾಸ್ನೇಹಿರ‍್ರೀ ನೀವು? ನಿಮ್ಮ ಗೆಳೆಯರ ಕವನ ನಿಮಗೇ ಗೊತ್ತಿಲ್ಲ. ನಿಲ್ಲಿ, ಎಸ್‌ಜಿಎಸ್‌ಗೆ ಬಂದಾಗ ಹೇಳುತ್ತೇನೆ” ಎಂದು ಕಿಚಾಯಿಸಿದರು.


ನಮ್ಮ ನಡುವೆ ಪ್ರೇಮ ಕಲಹವಿರುತ್ತಿತ್ತು. ಪರಸ್ಪರರೇಗಿಸುತ್ತಿದ್ದೆವು. ಸೋಮಣ್ಣಗೆ ಹೊಗಳಿಕೆ ಇಷ್ಟ. ಈ ದೌರ್ಬಲ್ಯಗೊತ್ತಿದ್ದ ನಾವು ಕೆಲವರು ಇಷ್ಟವಾಗದ ಮಾತುಗಳನ್ನು ಹೇಳುತ್ತಿದ್ದೆವು. ನಮ್ಮ ಸ್ವಭಾವ ಗೊತ್ತಿದ್ದ ಅವರು ನಕ್ಕು ಸುಮ್ಮನಾಗುತ್ತಿದ್ದರು.


ಈ ಸಾವು ನ್ಯಾಯವೇ?


ಸೋಮಣ್ಣಗೆ ಬಹಳ ದಿನ ಮಾತಾಡದೇ ಇದ್ದರೆ ಸಿಟ್ಟು ಬರುತ್ತಿತ್ತು. ಕರೆಮಾಡಿ ಮುನಿಸು ತೋರಿಸುತ್ತಿದ್ದರು.


2020 ರಜುಲೈ ತಿಂಗಳಲ್ಲಿ ಫೋನ್ ಮಾಡಿದ್ದೆ.


"ತುಮಕೂರಿಗೆ ಬಂದೇ ಇಲ್ಲ" ಆಕ್ಷೇಪಿಸಿದರು


"ಹೇಗೆ ಬರೋದು ಸೋಮಣ್ಣ, ಕೊರೋನಾ ಇರುವಾಗ?"


"ನೀವೆಲ್ಲ ಬಹಳ ಹೆದರ್ತೀರಪ್ಪ"


"ನೀವೂ ಜಾಗ್ರತೆ ಮಾಡಿ, ಜಾಸ್ತಿ ತಿರುಗಾಡಬೇಡಿ"


“ ಆಯಿತು. ಬೆಂಗಳೂರಿಗೆ ಬರ್ತೇನೆ" ಎಂದರು


"ಬನ್ನಿ,ಯಾವಾಗ ಬರ್ತೀರಿ?"


"ಮೇಡಮ್‌ಗೆ ಟೊಮ್ಯಾಟೋ ಸಾರು ಮಾಡಲು ಹೇಳಿ. ಬಾಳಾ ದಿನಾಯ್ತು ತಿಂದು"


"ಅದಕ್ಕೇನಂತೆ, ಬನ್ನಿ" ಅಂದೆ


ಇದು ನಮ್ಮಿಬ್ಬರ ಕೊನೆಯ ಮಾತುಕತೆ. 


ಆ ಮೇಲೆ ನಾವು ಅವರಿಗೆ ಇಷ್ಟವಾದ ಟೊಮ್ಯಾಟೋ ಸಾರು ಮಾಡಲೇಇಲ್ಲ!