ನಾಡಿದ್ದು ಬಿಜೆಪಿ  ವಿವಿಧ ವಿಭಾಗಗಳ ಸಮಾವೇಶ

ನಾಡಿದ್ದು ಬಿಜೆಪಿ  ವಿವಿಧ ವಿಭಾಗಗಳ ಸಮಾವೇಶ

ನಾಡಿದ್ದು ಬಿಜೆಪಿ  ವಿವಿಧ ವಿಭಾಗಗಳ ಸಮಾವೇಶ

ತುಮಕೂರು: ಬಿಜೆಪಿ ತುಮಕೂರು, ಮಧುಗಿರಿಜಿಲ್ಲೆ ಹಾಗೂ ವಿವಿಧ ಮಂಡಲಗಳ 24 ಪ್ರಕೋಷ್ಠಗಳ 1000 ಸಂಚಾಲಕರು ಹಾಗೂ ಸದಸ್ಯರ ಸಮಾವೇಶವನ್ನುತುಮಕೂರಿನಅಮಾನಿಕೆರೆಯಗಾಜಿನಮನೆಯಲ್ಲಿಇದೇ ಮೇ 07ರ ಶನಿವಾರ ಬೆಳಿಗ್ಗೆ 10.30 ಘÀಂಟೆಗೆಜಿಲ್ಲಾಸಮಾವೇಶ ಆಯೋಜಿಸಿದೆ ಎಂದುರಾಜ್ಯಅಸAಘಟಿತಕಾರ್ಮಿಕ ಪ್ರಕೋಷ್ಠದರಾಜ್ಯ ಸಂಚಾಲಕ ಬ್ಯಾಟರಂಗೇಗೌಡಎAದು ತಿಳಿಸಿದರು.


ಇಂದುತುಮಕೂರಿನ ಬಿಜೆಪಿ ಜಿಲ್ಲಾಕಛೇರಿಯಲ್ಲಿ ನಡೆಸಿಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಜಿಲ್ಲೆಯಎಲ್ಲಾ ಮಂಡಲಗಳಲ್ಲಿನ ಬೂತ್ ಮಟ್ಟದಲ್ಲಿ ಸಂಘಟನಾತ್ಮಾಕವಾಗಿ ವಿವಿಧ ಪ್ರಕೋಷ್ಠಗಳ ಸಮಿತಿಯನ್ನುರಚಿಸಲಾಗಿದೆ. ಪಕ್ಷದ ಸಂಘಟನೆ, ಬಲವರ್ದನೆಗೆ ಪೂರಕವಾಗಿ ಪ್ರಕೋಷ್ಠಗಳಲ್ಲಿನ ಸಂಚಾಲಕರು ಮತ್ತು ಸದಸ್ಯರು ಪಕ್ಷದಜಿಲ್ಲಾ ಹಾಗೂ ಮಂಡಲಗಳ ಸಮಿತಿಗಳಿಗೆ ಅನುಕೂಲಕರರೀತಿಯಲ್ಲಿತಮ್ಮ ಪ್ರಕೋಷ್ಠಗಳ ಫಲಾನುಭವಿಗಳೊಂದಿಗೆ ನಿರಂತರ ಸಂಪರ್ಕಇಟ್ಟುಕೊAಡುಕ್ರೀಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆಎಂದು ಮಾಹಿತಿ ನೀಡಿದರು. 


ಈ ಸಮಾವೇಶಕ್ಕೆ ಬಿಜೆಪಿ ರಾಜ್ಯಅಧ್ಯಕ್ಷರು ಹಾಗೂ ಸಂಸದರಾದ    ನಳೀನ್‌ಕುಮಾರ್ ಕಟೀಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ  ಅರುಣ್‌ಕುಮಾರ್, ಎಂ.ಬಿ.ಭಾನುಪ್ರಕಾಶ್, ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಪ್ರಕೋಷ್ಠಗಳ ರಾಜ್ಯ ಸಹ ಸಂಯೋಜಕರಾದಡಾ|| ಶಿವಯೋಗಿಸ್ವಾಮಿ,ಗೃಹ ಸಚಿವರು ಹಾಗೂ ತುಮಕೂರುಜಿಲ್ಲಾಉಸ್ತುವಾರಿ ಸಚಿವರಾದಅರಗಜ್ಞಾನೇಂದ್ರ, ಜಿಲ್ಲೆಯ ಸಚಿವರಾದ ಬಿ.ಸಿ.ನಾಗೇಶ್ ಮತ್ತುಜೆ.ಸಿ.ಮಾಧುಸ್ವಾಮಿ, ತುಮಕೂರುಜಿಲ್ಲೆಯ ಸಂಸದರಾದ ಜಿ.ಎಸ್.ಬಸವರಾಜು, ಶಾಸಕರುಗಳಾದ ಜಿ.ಬಿ.ಜ್ಯೋತಿಗಣೇಶ್, ಡಾ|| ಸಿ.ಎಂ.ರಾಜೇಶ್‌ಗೌಡ, ಮಸಾಲೆ ಜಯರಾಮ್, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದ್‌ಎA.ಗೌಡ, ಮಾಜಿ ಸಚಿವರಾದ ಸೊಗಡು ಶಿವಣ್ಣ, ಮಾಜಿ ಶಾಸಕರಾದಕೆ.ಎಸ್.ಕಿರಣ್‌ಕುಮಾರ್, ಬಿ.ಸುರೇಶ್‌ಗೌಡ ಹಾಗೂ ರಾಜ್ಯ, ಜಿಲ್ಲೆಯ ಪದಾಧಿಕಾರಿಗಳು, ಹಿರಿಯರು, ಪ್ರಮುಖರುಭಾಗವಹಿಸಿ, ಸಂಘಟನಾತ್ಮಕವಾದ ವಿಚಾರಗಳನ್ನು ಮಾರ್ಗದರ್ಶ ಮಾಡಲಿದ್ದಾರೆಂದರು.


       ಬಿಜೆಪಿ ತುಮಕೂರುಜಿಲ್ಲೆಯಲ್ಲಿ ಪ್ರಶಿಕ್ಷಣ ಪ್ರಕೋಷ್ಠ, ಸಹಕಾರ ಪ್ರಕೋಷ್ಠ, ಅಸಂಘಟಿತಕಾರ್ಮಿಕ ಪ್ರಕೋಷ್ಠ, ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ, ವ್ಯಾಪಾರಿ ಪ್ರಕೋಷ್ಠ, ಕಾನೂನು ಪ್ರಕೋಷ್ಠ, ಪ್ರಬುದ್ಧರ ಪ್ರಕೋಷ್ಠ, ವೃತ್ತಿಪರರ ಪ್ರಕೋಷ್ಠ, ವೈದ್ಯಕೀಯ ಪ್ರಕೋಷ, ಕೈಗಾರಿಕ ಪ್ರಕೋಷ್ಠ, ಪಂಚಾಯತ್‌ರಾಜ್‌ಗ್ರಾಮೀಣ ಪ್ರಕೋಷ್ಠ, ಫಲಾನುಭವಿ ಪ್ರಕೋಷ್ಠ, ಶಿಕ್ಷಕರ ಪ್ರಕೋಷ್ಠ, ಹಾಲು ಉತ್ಪಾದಕರ ಪ್ರಕೋಷ್ಠ, ಹಿರಿಯ ನಾಗರೀಕ ಪ್ರಕೋಷ್ಠ, ಪಂಚಾಯತ್‌ರಾಜ್ ನಗರ ಪ್ರಕೋಷ್ಠ, ಪೂರ್ವ ಸೈನಿಕ ಪ್ರಕೋಷ್ಠ, ಆರ್ಥಿಕ ಪ್ರಕೋಷ್ಠ, ವಿವಿಧ ಭಾಷಿಕ ಪ್ರಕೋಷ್ಠಗಳು ಸೇರಿದಂತೆ ವಿವಿಧ 24 ಪ್ರಕೋಷ್ಠಗಳಲ್ಲಿ ಸಕ್ರೀಯವಾಗಿ ಸುಮಾರು1600ಕಾರ್ಯಕರ್ತರುಕಾರ್ಯನಿರ್ವಹಿಸುತ್ತಿದ್ದು, ಸುಮಾರು 1000 ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದ ಯಶಸ್ವಿಗೆÀ ಜಿಲ್ಲೆಯ ವಿವಿಧ ಪ್ರಕೋಷ್ಠಗಳ ಸಂಚಾಲಕರು, ಸದಸ್ಯರು ಹಾಗೂ ಕಾರ್ಯಕರ್ತರು ಸಹಕರಿಸಬೇಕೆಂದು ಬ್ಯಾಟರಂಗೇಗೌಡ ತಿಳಿಸಿದರು.


ಬಿಜೆಪಿಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಮಾಧ್ಯಮ ಸಹ ಪ್ರಮುಖ್‌ಜೆ.ಜಗದೀಶ್, ಪಂಚಾಯತ್‌ರಾಜ್‌ಗ್ರಾಮೀಣ ಪ್ರಕೋಷ್ಠದರಾಜ್ಯ ಸಮಿತಿಯ ಸದಸ್ಯೆಎಂ.ಪಿ.ಜ್ಯೋತಿತಿಪ್ಪೇಸ್ವಾಮಿ, ಹಿರಿಯ ನಾಗರಿಕ ಪ್ರಕೋಷ್ಠದಜಿಲ್ಲಾ ಸಂಚಾಲಕ ಸಾಗರನಹಳ್ಳಿ ನಂಜೇಗೌಡ, ಫಲಾನುಭವಿ ಪ್ರಕೋಷ್ಠದಜಿಲ್ಲಾ ಸಹ ಸಂಚಾಲಕ ಡಾ.ಜಿ.ಎಸ್.ಶ್ರೀಧರ್, ಪಂಚಾಯತ್‌ರಾಜ್‌ಗ್ರಾಮೀಣ ಪ್ರಕೋಷ್ಠದಜಿಲ್ಲಾ ಸಂಚಾಲಕ ಎಲï.ಷಣ್ಮುಖ, ಪಂಚಾಯತ್‌ರಾಜ್ ನಗರ ಪ್ರಕೋಷ್ಠದಜಿಲ್ಲಾ ಸಹ ಸಂಚಾಲಕ್ ಕೆ.ಶಂಕರ್, ಕಾನೂನು ಪ್ರಕೋಷ್ಠದಜಿಲ್ಲಾ ಸಂಚಾಲಕÀ ಡಿ.ಸಿ.ಹಿಮಾನಂದ್, ಪ್ರಬುದ್ಧರ ಪ್ರಕೋಷ್ಠದಜಿಲ್ಲಾ ಸಂಚಾಲಕ ಹೆಚ್.ಎನ್.ನಟರಾಜ್, ಹಾಲು ಉದ್ಪಾದಕ ಪ್ರಕೋಷ್ಠದಜಿಲ್ಲಾ ಸಂಚಾಲಕ ಸಿದ್ದರಾಮಣ್ಣಇದ್ದರು.