ಮುಂದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕು ಕೊರಟಗೆರೆ ವಿಜಯೋತ್ಸವದಲ್ಲಿ ಆರ್. ರಾಜೇಂದ್ರ

congress-should-win-in-tumkur-district-r-rajendra

ಮುಂದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕು ಕೊರಟಗೆರೆ ವಿಜಯೋತ್ಸವದಲ್ಲಿ ಆರ್. ರಾಜೇಂದ್ರ


ಮುಂದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕು
ಕೊರಟಗೆರೆ ವಿಜಯೋತ್ಸವದಲ್ಲಿ ಆರ್. ರಾಜೇಂದ್ರ


ಕೊರಟಗೆರೆ: ತುಮಕೂರು ವಿಧಾನಪರಿಷತ್ ಚುನಾವಣಾ ಗೆಲುವು ಕಾಂಗ್ರೆಸ್ ಪಕ್ಷದ ನಾಯಕರ, ಮುಖಂಡರ, ಕಾರ್ಯಕರ್ತರ ಗೆಲುವು ಎಂದು ನೂತನ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ತಿಳಿಸಿದರು. 


ಅವರು ಗೆಲುವಿನ ಬಳಿಕ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಮಾಜಿ ಉಪಮುಖ್ಯಮಂತ್ರಿ ಶಾಸಕರಾದ ಡಾ. ಜಿ. ಪರಮೇಶ್ವರ ಈ ಚುನಾವಣೆಯ ನೇತೃತ್ವ ವಹಿಸಿದ್ದರು. ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರ ಒಗ್ಗಟ್ಟು ಈ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು. ಆದರೆ ಇಂದು ನಾವುಗಳು ಸಂಭ್ರಮ ಪಡುವುದಲ್ಲ. ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರÀ ಸೇರಿದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಆಧಿಕಾರಕ್ಕೆ ಬರಬೇಕು ಅದಕ್ಕಾಗಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಶ್ರಮವಹಿಸಬೇಕು ಎಂದ ಅವರು, ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲೂ ಪಕ್ಷವು ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿದೆ. ಕ್ಷೇತ್ರದ ಶಾಸಕರು ಪಕ್ಷದ ನಾಯಕರಾದ ಡಾ. ಜಿ. ಪರಮೇಶ್ವರ ನನ್ನ ಗೆಲುವಿಗೆ ಸಾಕಷ್ಟು ಶ್ರಮವಹಿಸಿದ್ದಾರೆ. ಈಗಾಗಲೇ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಮಾಡಿ ಗೆಲುವಿನ ಸಂಭ್ರಮ ಹಂಚಿಕೊAಡಿದ್ದೇನೆ. ಮುಂದಿನ ದಿನಗಳಲ್ಲಿ ಡಾ. ಜಿ. ಪರಮೇಶ್ವರ ಮತ್ತು ಜಿಲ್ಲೆಯ ಎಲ್ಲಾ ಪಕ್ಷದ ನಾಯಕರುಗಳೊಂದಿಗೆ ಕೊರಟಗೆರೆಯಲ್ಲಿ ಗೆಲುವಿನ ಸಾಧನೆಯನ್ನು ಆಚರಿಸಿಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಪಕ್ಷ ಮುಖಂಡರು ಕಾರ್ಯಕರ್ತರು ಹಾಜರಿದ್ದರು.