ಬಿಜೆಪಿ ಎಂಬುದು ಸುಳ್ಳಿನ ಫ್ಯಾಕ್ಟರಿ: ಸಿದ್ದರಾಮಯ್ಯ

ಬಿಜೆಪಿ ಎಂಬುದು ಸುಳ್ಳಿನ ಫ್ಯಾಕ್ಟರಿ: ಸಿದ್ದರಾಮಯ್ಯ

ಬಿಜೆಪಿ ಎಂಬುದು ಸುಳ್ಳಿನ ಫ್ಯಾಕ್ಟರಿ: ಸಿದ್ದರಾಮಯ್ಯ


ಹಾನಗಲ್: ನಾವು ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಾಗ ದೊಡ್ಡ ಗಂಟಲಿನಲ್ಲಿ ಟೀಕಿಸಿದ್ದ ಜನರೆ ಇಂದು ಅನ್ನಭಾಗ್ಯದ ಕ್ರೆಡಿಟ್ಟನ್ನು ಮೋದಿಯವರಿಗೆ ನೀಡಲು ಹೊರಟಿದ್ದಾರೆ. ಈ ಕಾರಣದಿಂದಲೇ ನಾವು ಪದೇ ಪದೇ ಹೇಳುವುದು ಬಿಜೆಪಿ ಎಂಬುದು ಸುಳ್ಳಿನ ಫ್ಯಾಕ್ಟಿç ಎಂದು. ಈ ಬಿಜೆಪಿಯವರಿಗೆ ಕನಿಷ್ಠ ಅನ್ನದ ವಿಚಾರದಲ್ಲಾದರೂ ನಿಜ ಹೇಳಬೇಕು ಎಂಬ ಕನಿಷ್ಠ ನೈತಿಕತೆ ಮತ್ತು ಪ್ರಾಮಾಣಿಕತೆ ಇಲ್ಲದೇ ಹೋಗಿರುವುದು ನಮ್ಮ ಕಾಲದ ದುರಂತ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಹಾನಗಲ್ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ಸಿದ್ದರಾಮಯ್ಯ ಅವರು ಗಾನಯೋಗಿ, ಶಿವಯೋಗಿ ಡಾ.ಪಂ. ಪುಟ್ಟರಾಜ ಗವಾಯಿಗಳ ಹುಟ್ಟೂರು ದೇವರ ಹೊಸಪೇಟೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಅವರು ಗವಾಯಿಗಳ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರುಗಳು ಒಂದೇ ಸಮನೆ ಸುಳ್ಳನ್ನು ಉತ್ಪಾದಿಸಿ ಹಂಚುತ್ತಿರುವುದರಿAದ ಸತ್ಯ ಸಂಗತಿ ಏನೆಂದು ತಿಳಿಸುವ ಪ್ರಯತ್ನವನ್ನು ನಾನು ಮಾಡುತ್ತಿರುವೆ ಎಂದು ಹೇಳಿದರು.

ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್ ಪಕ್ಷ. ಯುದ್ಧ, ಬರಗಾಲ, ಪ್ರವಾಹ ಸೇರಿದಂತೆ ಇನ್ನಿತರೆ ಸಂದರ್ಭಗಳಲ್ಲಿ ಎದುರಾಗುವ ಹಸಿವು ಮತ್ತು ಹಾಹಾಕಾರದ ಪರಿಸ್ಥಿತಿಯನ್ನು ನಿಭಾಯಿಸಲು 1960 ರಿಂದಲೇ ಉಚಿತ ಪಡಿತರ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ನಮ್ಮ ಕಾಂಗ್ರೆಸ್ ಪಕ್ಷ. 1992 ರಲ್ಲಿ, ಕಾಂಗ್ರೆಸ್ ಪರಿಷ್ಕöÈತ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಜಾರಿ ಮಾಡಿತು. ಕೇಂದ್ರ ಸರ್ಕಾರ ರಾಜ್ಯಗಳಿಗೆ ರಿಯಾಯ್ತಿ ದರದಲ್ಲಿ ಪಡಿತರವನ್ನು ಒದಗಿಸಿ ಅದನ್ನು ಬಡವರಿಗೆ ವಿತರಿಸಲು ಈ ಪರಿಷ್ಕöÈತ ವ್ಯವಸ್ಥೆಯಲ್ಲಿ ಅನುಕೂಲ ಮಾಡಿಕೊಟ್ಟಿತು ಎಂದರು.
2004 ರಲ್ಲಿ ಅಂತ್ಯೋದಯದ ಪ್ರಯೋಜನ ಪಡೆಯುವ ಬಡಜನರ ಪ್ರಮಾಣವನ್ನು ಒಂದು ಕೋಟಿಯಿಂದ 2 ಕೋಟಿಗೆ ಏರಿಸಿದ್ದಲ್ಲದೆ, ಮತ್ತೆ 2005 ರಲ್ಲಿ 2.5 ಕೋಟಿಗೆ ಮತ್ತೆ ಏರಿಸಲಾಯಿತು. 2013 ರಲ್ಲಿ ಮನ ಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ರಾಷ್ಟಿಯ `ಆಹಾರ ಭದ್ರತಾ ಕಾಯ್ದೆ'ಯನ್ನು ಜಾರಿಗೆ ತಂದಿತು. ಈ ಕಾಯ್ದೆಯ ಅಡಿಯಲ್ಲಿ ಆರೋಗ್ಯಕರ ಆಹಾರ ಪಡೆಯುವುದು ಈ ದೇಶದ ಪ್ರತಿಯೊಬ್ಬ `ನಾಗರಿಕರ ಹಕ್ಕು' ಎನ್ನುವ ಕ್ರಾಂತಿಕಾರಕ ನಿಲುವನ್ನು ಕಾಂಗ್ರೆಸ್ ತಳೆಯಿತು. ಇದರಿಂದಾಗಿ ಹಸಿದ ಪ್ರತಿಯೊಬ್ಬರಿಗೂ ಆಹಾರ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಯಿತು ಎಂದರು.

ಈ ಕಾಯ್ದೆಯ ಪರಿಣಾಮದಿಂದಾಗಿ ಹಸಿದ ಜನರು ಪಡಿತರವನ್ನು ತಮ್ಮ ಹಕ್ಕಾಗಿ ಬೇಡಿಕೆ ಮಂಡಿಸಬಹುದು. ಇದರಿಂದಾಗಿ 2005 ರಿಂದ ಇದ್ದ ಫಲಾನುಭವಿಗಳ ಪ್ರಮಾಣ 2.5 ಕೋಟಿಯಿಂದ ಒಮ್ಮೆಗೇ 80 ಕೋಟಿಗೆ ಏರಿಕೆಯಾಯಿತು. ಈ ಕಾಯ್ದೆಯ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ 35 ಕೆಜಿ ಸಿಗುವಂತಾಯಿತು. ಇದರಡಿಯಲ್ಲಿ ಪ್ರತಿ ಕೆಜಿ ಅಕ್ಕಿಯನ್ನು 3 ರೂಗೆ, ಗೋದಿಯನ್ನು 2 ರೂಗೆ ಬೇಳೆ ಕಾಳನ್ನು 1 ರೂಗೆ ಒದಗಿಸಲಾಗುತ್ತಿತ್ತು. ಕರ್ನಾಟಕದಲ್ಲಿ 2013 ರಲ್ಲಿ ನಮ್ಮ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಘೋಷಿಸಿ ಪ್ರತಿ ಅಂತ್ಯೋದಯ ಕುಟುಂಬಕ್ಕೆ 35 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ ಕೇವಲ 1 ರೂ ಗೆ ನೀಡಿತು. ಈ ಅನ್ನಭಾಗ್ಯ ಯೋಜನೆಯಿಂದ ರಾಜ್ಯದ 1.05 ಕೋಟಿ ಕುಟುಂಬಗಳ 4.2 ಕೋಟಿ ಜನರು ಅನುಕೂಲ ಪಡೆಯುವಂತಾಯಿತು. ಇದರಿಂದಾಗಿ, ಆದ್ಯತಾ ಮತ್ತು ಬಿಪಿಎಲ್ ಕುಟುಂಬಗಳಿಗೆ 30 ಕೆಜಿ ಅಕ್ಕಿ ಮತ್ತು ಗೋಧಿಯನ್ನು ಕೆಜಿಗೆ 1 ರೂ ನಂತೆ ವಿತರಿಸಲಾಯಿತು.
2017 ಏಪ್ರಿಲ್‌ನಿಂದ ಕುಟುಂಬಗಳ ಪ್ರತಿ ಸದಸ್ಯರಿಗೆ 7 ಕೆಜಿ ಅಕ್ಕಿ, 2 ಕೆಜಿ ಗೋಧಿ, 1 ಕೆಜಿ ಬೇಳೆಯನ್ನು ವಿತರಿಸಲು ಪ್ರಾರಂಭಿಸಲಾಯಿತು. ಕುಟುಂಬದಲ್ಲಿ 10 ಜನರಿದ್ದರೆ 70 ಕೆಜಿ ಅಕ್ಕಿ, 20 ಕೆಜಿ ಗೋಧಿ ಸಿಗುತ್ತಿತ್ತು. ಅಕ್ಕಿ ಮತ್ತು ಗೋಧಿಯನ್ನು ಉಚಿತವಾಗಿ ನೀಡಿದರೆ ಬೇಳೆಯನ್ನು ಪ್ರತಿ ಕೆಜಿಗೆ 38 ರೂ ಗಳಿಗೆ ವಿತರಿಸಲಾಯಿತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಗ ಅಕ್ಕಿಯನ್ನು 2 ಕೆಜಿಗೆ ಇಳಿಸಿದೆ. ನಾವು ಪ್ರತಿಯೊಬ್ಬರಿಗೆ 2 ಕೆಜಿ ಗೋಧಿ ನೀಡುತ್ತಿದ್ದೆವು. ಈ ಸರ್ಕಾರ ಪ್ರತಿ ಕಾರ್ಡೆ್ಗ 2 ಕೆಜಿ ಯನ್ನು ಮಾಡಿದೆ. ಅಕ್ಕಿ ಹೆಚ್ಚು ಕೊಡಿ ಎಂದು ಜನ ಕೇಳಿದರೆ, ಆಹಾರ ಸಚಿವರಾಗಿದ್ದ ಉಮೇಶ್ ಕತ್ತಿಯವರು ನೀವು ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಮಾತಾಡಿದ್ದರು.
ಕಡು ಬಡವರಿಗೆ ನೀಡುವ ಅಂತ್ಯೋದಯ ಯೋಜನೆಯಲ್ಲಿ ನಾವು ಅಕ್ಕಿ, ಗೋಧಿ, ಬೇಳೆ, ಉಪುö್ಪ, ಅಡುಗೆ ಎಣ್ಣೆ ಇತ್ಯಾದಿಗಳನ್ನು ಸೇರಿಸಿದ್ದೆವು. ಈಗಿನ ಬಿಜೆಪಿ ಸರ್ಕಾರ ಏಪ್ರಿಲ್ 2020 ರಿಂದ ಕೇವಲ ಅಕ್ಕಿ ಮಾತ್ರ ನೀಡುತ್ತಿದೆ. ಗೋಧಿ, ಸಕ್ಕರೆ, ಬೇಳೆ ಇವುಗಳನ್ನು ರದ್ದುಮಾಡಿದೆ. ಯುಪಿಎ ಅವಧಿಯಲ್ಲಿ ಜಾರಿಗೆ ತಂದಿದ್ದ ಆಹಾರ ಭದ್ರತಾ ಕಾಯ್ದೆ ಮತ್ತು ನಾನು ನನ್ನ ಅವಧಿಯಲ್ಲಿ ಘೋಷಿಸಿದ್ದ ಅನ್ನಭಾಗ್ಯ ಯೋಜನೆಯನ್ನೇ ಕಾಪಿ ಮಾಡಿದ ಮೋದಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಕೇವಲ ಹೆಸರನ್ನು ಮಾತ್ರ ``ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾ (ಪಿಎಂಜಿಕೆಎವೈ)'' ಎಂದು ಹೆಸರು ಬದಲಾಯಿಸಿತು.
ಯುಪಿಎ ಸರ್ಕಾರದ ಯೋಜನೆಯನ್ನು ಹೆಸರು ಬದಲಾಯಿಸಿ ತನ್ನದೇ ಹೊಸ ಯೋಜನೆ ಎಂದು ರಾಷ್ಟಕ್ಕೆ ಸುಳ್ಳು ಹೇಳಿದ ಕೇಂದ್ರ ಸರ್ಕಾರ ಇಷ್ಟಕ್ಕೇ ಸುಮ್ಮನಾಗದೆ, ರಾಷ್ಟಿಯ ಆಹಾರ ಭದ್ರತಾ ಕಾಯ್ದೆಯ ಮೂಲಕ ಮೊದಲೇ ಇದ್ದ 80 ಕೋಟಿ ಫಲಾನುಭವಿಗಳಿಗೆ ಕೇವಲ 8 ತಿಂಗಳ ಅವಧಿಗೆ ಕೋವಿಡ್ ಕಾರಣದಿಂದ ಮಾತ್ರ ಉಚಿತ ಅಕ್ಕಿ ನೀಡುತ್ತಿದ್ದು ಇದು 2021ರ ನವೆಂಬರ್‌ಗೆ ಕೊನೆಯಾಗಲಿದೆ. ಆ ನಂತರದ ಪರಿಸ್ಥಿತಿ ಏನೆಂದು ದೇವರೇ ಬಲ್ಲ. ಒಂದು ಕಡೆ ಯುಪಿಎ ಸರ್ಕಾರದ ಯೋಜನೆಯ ಹೆಸರನ್ನು ಕೇಂದ್ರ ಬಿಜೆಪಿ ಸರ್ಕಾರ ಬದಲಾಯಿಸಿದರೆ, ಮತ್ತೊಂದು ಕಡೆ ರಾಜ್ಯ ಬಿಜೆಪಿ ಸರ್ಕಾರ ಕಾಂಗ್ರೆಸ್ ಅವಧಿಯಲ್ಲಿ ನೀಡಲಾಗುತ್ತಿದ್ದ 7 ಕೆಜಿ ಉಚಿತ ಅಕ್ಕಿಯ ಪ್ರಮಾಣವನ್ನು ದಿಢೀರನೆ 2 ಕೆಜಿಗೆ ಇಳಿಸಿದೆ. ಹಂತ ಹಂತವಾಗಿ ಕಾಂಗ್ರೆಸ್ ಅವಧಿಯ ಆಹಾರ ಭದ್ರತಾ ಕಾಯ್ದೆಯನ್ನು ಕೊಲ್ಲುತ್ತಾ ಬಂದ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಪ್ರತಿ ವ್ಯಕ್ತಿಗೆ ನೀಡಲಾಗುತ್ತಿದ್ದ ಉಚಿತ ಅಕ್ಕಿಯ ಪ್ರಮಾಣವನ್ನು 7 ರಿಂದ 2 ಕೆಜಿಗೆ ಇಳಿಸಿದ್ದಲ್ಲದೆ ನಮ್ಮ ಕಾಂಗ್ರೆಸ್ ಸರ್ಕಾರದ ಕನಸಿನ ಯೋಜನೆಯಾಗಿದ್ದ ಇದನ್ನು ಕೇಂದ್ರ ಸರ್ಕಾರದ ``ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾ (ಪಿಎಂಜಿಕೆಎವೈ)'' ಜತೆಗೆ ಜಮೆ ಮಾಡಲಾಗಿದೆ.
ರಾಜ್ಯ ಬಿಜೆಪಿ ನಾಯಕರು ಮತ್ತು ಮಂತ್ರಿಗಳು ಹೇಳುತ್ತಿರುವಂತೆ ಇದು ಕೇಂದ್ರ ಸರ್ಕಾರದ ಹಣದಿಂದಲೇ ನಡೆಯುವ ಯೋಜನೆ ಆಗಿದ್ದರೆ ಏಕೆ ಇದುವರೆಗೂ ಕರ್ನಾಟಕ ಹೊರತಾಗಿ ದೇಶದ ಇತರೆ ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲಿ ಈ ಯೋಜನೆ ಜಾರಿ ಆಗಿಲ್ಲ ? ಇದೇ ನವೆಂಬರ್ ತಿಂಗಳ ಬಳಿಕ ಸದ್ಯ ಸಿಗುತ್ತಿರುವ 2 ಕೆಜಿ ಉಚಿತ ಅಕ್ಕಿಯೂ ಸ್ಥಗಿತಗೊಳ್ಳಲಿದೆ. ಹೀಗೆ ಇಡಿ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ನಮ್ಮ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಘೋಷಿಸಿ ಕುಟುಂಬದಲ್ಲಿ ಎಷ್ಟೇ ಸದಸ್ಯರಿದ್ದರೂ ಕೂಡ ಪ್ರತಿ ಸದಸ್ಯರಿಗೆ ತಿಂಗಳಿಗೆ ತಲಾ 7 ಕೆಜಿ ಉಚಿತ ಅಕ್ಕಿಯನ್ನು ನೀಡುತ್ತಿತ್ತು. ಇದಕ್ಕಾಗಿ ವರ್ಷಕ್ಕೆ ಗರಿಷ್ಠ 3400 ಕೋಟಿಗೂ ಹೆಚ್ಚು ಅನುದಾನವನ್ನು ಆಹಾರ ಇಲಾಖೆಗೆ ಬಿಡುಗಡೆ ಮಾಡಿದ್ದೆವು ಎಂದು ಸಿದ್ದರಾಮಯ್ಯ ಹೇಳಿದರು.
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಹಾನಗಲ್ ನಲ್ಲಿರುವ ಅವರ ಪ್ರತಿಮೆಗೆ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ವಿಧಾನಸಭೆ ಮಾಜಿ ಸ್ಪೀಕರ್ ಕೋಳಿವಾಡ, ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಜಯಮಾಲಾ, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಹಾಜರಿದ್ದರು.