ತಿಮ್ಮಾಪುರ ಕೆರೆಗೆ ಹರಿದ ಹೇಮೆ ದಶಕಗಳ ನಂತರ ನನಸಾದ ಕನಸು

Hemavathi water to Timlapur lake

ತಿಮ್ಮಾಪುರ ಕೆರೆಗೆ ಹರಿದ ಹೇಮೆ ದಶಕಗಳ ನಂತರ ನನಸಾದ ಕನಸು

ತಿಮ್ಮಾಪುರ ಕೆರೆಗೆ ಹರಿದ ಹೇಮೆ

ದಶಕಗಳ ನಂತರ ನನಸಾದ ಕನಸು

ಹುಳಿಯಾರು: ಹೇಮೆ ಯೋಜನೆ ಮಂಜೂರಾಗಿ ದಶಕಗಳ ನಂತರ ಹುಳಿಯಾರು ಹೋಬಳಿಯ ತಿಮ್ಲಾಪುರ ಕೆರೆಗೆ ಹೇಮಾವತಿ ನೀರು ಹರಿದಿದೆ. ಈ ಮೂಲಕ ಬರದ ನಾಡಿನ ಜನರ ಮೂರ್ನಾಲ್ಕು ದಶಕಗಳ ಕನಸು ನನಸಾಗಿದೆ. ಆದರೆ ತಿಮ್ಲಾಪುರ ಕೆರೆ ತುಂಬಿ ಹುಳಿಯಾರು ಕೆರೆಗೆ ಹೇಮೆ ಹರಿಯಲು ಇನ್ನೂ ಕನಿಷ್ಟ 1 ತಿಂಗಳು ನೀರು ಹರಿಸುವ ಅಗತ್ಯವಿದೆ.
ದಶಕಗಳ ಹಿಂದೆ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ 64 ದಿನಗಳ ಅಹೋರಾತ್ರಿ ಹೋರಾಟ ಫಲ ಹಾಗೂ ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್ ಹಾಗೂ ಸಿ.ಬಿ. ಸುರೇಶ್‌ಬಾಬು ಒತ್ತಡದ ಪರಿಣಾಮ ಬರದನಾಡು ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ಯೋಜನೆ ಮಂಜೂರಾಗಿತ್ತು. ಆದರೆ ಯೋಜನೆ ಮಂಜೂರಾಗಿ ದಶಕಗಳು ಕಳೆದಿದ್ದರೂ ಕಾಮಗಾರಿ ನೆನಗುದಿಗೆ ಬಿದ್ದು ತಾಲೂಕಿಗೆ ಹೇಮೆ ಹರಿಯುವ ಕನಸು ಕನಸಾಗಿಯೇ ಉಳಿದಿತ್ತು.
ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಚುನಾವಣಾ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಜಿಂಕೆ ವೇಗ ಕೊಟ್ಟರಲ್ಲದೆ ಕಾಮಗಾರಿ ಅನುಷ್ಟಾನಕ್ಕೆ ಇದ್ದ ಎಡರುತೊಡರುಗಳನ್ನು ನಿವಾರಿಸಿ ಕಳೆದ ವರ್ಷವೇ ತಾಲೂಕಿಗೆ ಪ್ರಾಯೋಗಿಕವಾಗಿ ಹೇಮೆ ಹರಿಸಿ ಈ ಭಾಗದ ಜನರ ಕನಸು ನನಸಾಗಿಸಿದರು.
ಕಳೆದ ವರ್ಷ ಸಾಸಲು, ಶೆಟ್ಟಿಕೆರೆ, ಅಣೆಕಟ್ಟೆ, ಅಂಕಸAದ್ರ ಕೆರೆಗಳನ್ನು ತುಂಬಿ ಬರಗೂರು, ಟೀ ತಾಂಡ್ಯ, ಸಂಧಿ ಹೊಳೆ ಅಣೆಗಳನ್ನು ಭರ್ತಿಯಾಗುವಷ್ಟರಲ್ಲಿ ಜಲಾಶಯದಲ್ಲಿ ನೀರಿನ ಕೊರತೆ ಮುಂದಿಟ್ಟು ನಿಲ್ಲಿಸಲಾಗಿತ್ತು. ಪರಿಣಾಮ ಹೇಮೆ ಯೋಜನೆಯ ಕೊನೆಯ ಕೆರೆಗಳಾದ ತಿಮ್ಲಾಪುರ ಮತ್ತು ಹುಳಿಯಾರು ಕೆರೆಗೆ ನೀರು ಹರಿಯದೆ ಈ ಭಾಗದ ಜನರಿಗೆ ತೀರ್ವ ನಿರಾಸೆ ಮೂಡಿಸಿತ್ತು.
ಈ ವರ್ಷ ಕಳೆದ ಎರಡ್ಮೂರು ತಿಂಗಳಿAದ ಹೇಮೆ ನೀರು ನಿರಂತರವಾಗಿ ಹರಿಯುವ ಜೊತೆಗೆ ಉತ್ತಮವಾಗಿ ಮಳೆಯಾಗುತ್ತಿರುವ ಪರಿಣಾಮ ಗೂಬೆಹಳ್ಳಿ, ನಂದಿಹಳ್ಳಿ ಗ್ರಾಮಗಳ ಎರಡ್ಮೂರು ಸಣ್ಣ ಪಿಕಪ್‌ಗಳನ್ನು ತುಂಬಿ ಬಹು ನಿರೀಕ್ಷಿತ ಕೆರೆಯಾದ ತಿಮ್ಲಾಪುರ ಕೆರೆಗೆ ಶುಕ್ರವಾರ ಹೇಮೆ ನೀರು ಹರಿಯುತ್ತಿದೆ. ಸರಿಸುಮಾರು ನಾಲ್ಕು ಕಿ.ಮೀ. ವಿಸ್ತಾರದ ಈ ಕೆರೆ ತುಂಬಲು ಇನ್ನೂ ಒಂದು ತಿಂಗಳು ನೀರು ಹರಿಯಬೇಕಿದೆ. 
ಮಳೆಯಾಶ್ರಿತ ಪ್ರದೇಶವಾದ ತಾಲೂಕಿನಲ್ಲಿ ಸಮರ್ಪಕವಾದ ಮಳೆಯಿಲ್ಲದೆ ಬರದನಾಡಾಗಿ ಪರಿವರ್ತನೆಯಾಗಿತ್ತು. ಒಂದು ಸಾವಿರ ಅಡಿ ಕೊಳೆವೆ ಬಾವಿ ಕೊರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಣಾಮ ತೋಟಗಳು ಒಣಗಿ ಇಲ್ಲಿನ ಜನರು ಉದ್ಯೋಗ ಅರಸಿ ಪಟ್ಟಣ ಸೇರಿದ್ದರು. 2 ನೇ ವರ್ಷ ತಾಲೂಕಿಗೆ ಗುರುತ್ವಾಕರ್ಷಣೆ ಮೂಲಕ ಹೇಮೆ ಹರಿಯುತ್ತಿರುವುದರಿಂದ ಬತ್ತಿದ್ದ ಬಾವಿ, ಕೊಳವೆಗಳಲ್ಲಿ ನೀರು ಬರಲಾರಂಭಿಸಿದೆ. 
ಇದರಿಂದಾಗಿ ನೀರು ಹರಿಯುತ್ತಿರುವ ಭಾಗದ ರೈತರ ಸಂಭ್ರಮಕ್ಕೆ ಪಾರವೇ ಇಲ್ಲದಾಗಿದೆ. ಹಾಗಾಗಿ ಹೇಮೆ ನೀರು ಹರಿಯುವ ಪ್ರದೇಶದ ಒಂದೊAದು ಕೆರೆ ತುಂಬಿದಾಗಲೂ ಜನರು ಹೇಮೆ ಹರಿಯುತ್ತಿರುವುದನ್ನು ನೋಡಲು ಮುಗಿಬೀಳುತ್ತಿದ್ದಾರೆ. ಮಕ್ಕಳು, ಮಹಿಳೆಯರು ಎನ್ನದೆ ಬೈಕು, ಸೈಕಲ್, ಕಾರು ಹೀಗೆ ವಾಹನಗಳಲ್ಲಿ ತೆರಳಿ ಕೆರೆ ಕೋಡಿ ಬಳಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಒಟ್ಟಾರೆ ಹೇಮೆ ನೀರು ಬರದ ನಾಡಿದ ಚಿತ್ರಣವನ್ನು ಬದಲಿಸುತ್ತಿದೆ.