ಪುನೀತ್‌ಗೆ ಹಾಲು ತುಪ್ಪ ಎರೆದ ಕುಟುಂಬದವರು ಇಂದಿನಿಂದ  ಸಾರ್ವಜನಿಕರಿಗೆ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ

ಪುನೀತ್‌ಗೆ ಹಾಲು ತುಪ್ಪ ಎರೆದ ಕುಟುಂಬದವರು ಇಂದಿನಿಂದ  ಸಾರ್ವಜನಿಕರಿಗೆ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ

ಪುನೀತ್‌ಗೆ ಹಾಲು ತುಪ್ಪ ಎರೆದ ಕುಟುಂಬದವರು
ಇಂದಿನಿಂದ  ಸಾರ್ವಜನಿಕರಿಗೆ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ


ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ಮಂಗಳವಾರ ಹಾಲು ತುಪ್ಪ ಎರೆದ ಕುಟುಂಬದವರು ಹೃದಯದಲ್ಲಿ ಚಿರಸ್ಥಾಯಿ ಆಗಿರುವ ಅವರನ್ನು ನೆನೆದು ಭಾವುಕರಾಗಿ ಮೌನಕ್ಕೆ ಜಾರಿದರು.

ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ನಡೆದ ಕಂಠೀರವ ಸ್ಟುಡಿಯೋದ ಆವರಣದಲ್ಲಿ ದುಃಖ ಮಡುಗಟ್ಟಿದ ಮೌನ, ಗಂಭೀರ, ಭಾವುಕ ಸನ್ನಿವೇಶದ ನಡುವೆ ಸಮಾಧಿಗೆ ಹಾಲು ತುಪ್ಪ ಎರೆಯಲಾಯಿತು. ಸಿನಿಕ್ಷೇತ್ರದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಮಾಧಿ ಸ್ಥಳದ ಷೆಡ್ ಮಧ್ಯೆ ಹೂವಿನ ಮಂಟಪ ನಿರ್ಮಿಸಿ ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ಸಮಾಧಿ ಮುಂಭಾಗದಲ್ಲಿ ಪುನೀತ್ ಅವರ ನಗುಮೊಗದ ಭಾವಚಿತ್ರ ಅವರ ನೆನಪನ್ನು ಮರುಕಳಿಸಿ ಅಲ್ಲಿ ಸೇರಿದ್ದವರ ಕಣ್ಣಾಲಿಗಳು ತುಂಬುವAತೆ ಮಾಡಿತ್ತು.
ಸಮಾಧಿಯ ಮೇಲೆ ನೆಟ್ಟ ತುಳಸಿ ಗಿಡ ಪುನೀತ್ ಅವರ ಅಮರತ್ವವನ್ನು ಸಂಕೇತಿಸುತ್ತಿತ್ತು. ಸಮಾಧಿಯ ಮೇಲ್ಭಾಗವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಪೂಜೆಯ ವೇಳೆ ಪುನೀತ್ ಅವರಿಗೆ ಇಷ್ಟವಾದ ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಯಿತು. 
ಪುನೀತ್ ಪತ್ನಿ ಅಶ್ವಿನಿ, ಪುತ್ರಿಯರಾದ ಧೃತಿ, ವಂದಿತಾ, ಅಣ್ಣ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಗೋವಿಂದರಾಜ್, ಲಕ್ಷಿö್ಮÃ, ಮಂಗಳಾ ರಾಘವೇಂದ್ರ ರಾಜ್‌ಕುಮಾರ್, ಮಧು ಬಂಗಾರಪ್ಪ, ವಿಜಯ್ ರಾಘವೇಂದ್ರ, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಸೇರಿದಂತೆ ಹಲವರು ಭಾಗವಹಿಸಿದ್ದರು. 

ನೋವಿಗೆ ಔಷಧಿ ಇಲ್ಲ: ಹಾಲು ತುಪ್ಪ ಎರೆದ ಕುಟುಂಬದವರು ಈ ನೋವಿಗೆ ಯಾವುದೇ ಔಷಧಿ ಇಲ್ಲ. ಇದರೊಂದಿಗೆ ಬದುಕಲು ಶಕ್ತಿ ಕೊಡು ಎಂದು ಪ್ರಾರ್ಥಿಸಬೇಕು ಅಷ್ಟೇ ಎಂದು ಪುನೀತ್ ಸಹೋದರ, ನಟ ರಾಘವೇಂದ್ರ ರಾಜ್‌ಕುಮಾರ್ ಭಾವುಕರಾದರು. ನನ್ನ ತಮ್ಮನಿಗೆ ೪೬ ವರ್ಷ ಮಾತ್ರ ಆ ದೇವರು ಸಮಯ ಕೊಟ್ಟಿದ್ದ. ಏನೇನು ಮಾಡಬೇಕೋ, ಅದೆಲ್ಲವನ್ನೂ ೪೬ ವರ್ಷದ ಒಳಗೇ ಮುಗಿಸಿ, ಅಭಿಮಾನಿಗಳನ್ನು ಗೆದ್ದು ಹೊರಟರು. ಅವರ ಅವಧಿ ಮುಗಿಯಿತು. ಈ ನೋವನ್ನು ನಾವು ಮರೆಯಲು ಆಗದು ಎಂದರು. 

ಅಪುö್ಪ ನಮಗೆ ಹಾಲು ತುಪ್ಪ ಎರೆಯಬೇಕಿತ್ತು. ದೊಡ್ಡವರಾಗಿ ಈಗ ನಾವೇ ಅವನಿಗೆ ಆ ಕಾರ್ಯ ಮಾಡಬೇಕಾಗಿದೆ. ಪ್ರಪಂಚದಲ್ಲಿ ಯಾರಿಗೂ ಇಂತಹ ನೋವು ಬರಬಾರದು' ಎಂದು ಶಿವರಾಜ್‌ಕುಮಾರ್ ಹೇಳಿದರು. 

ನಾವೆಷ್ಟು ನೋವು ಅನುಭವಿಸಿದ್ದೇವೋ, ಅಭಿಮಾನಿಗಳು ಅದಕ್ಕಿಂತ ಹತ್ತು ಪಟ್ಟು ಹೆಚ್ಚು ನೋವು ಅನುಭವಿಸಿದ್ದಾರೆ. ನಾವು ಯಾವ ಜನ್ಮದಲ್ಲಿ ಏನು ಪುಣ್ಯ ಮಾಡಿದ್ದೆವೋ ಏನೋ, ಅಪ್ಪಾಜಿ ನಮಗೆ ಅಷ್ಟು ಪ್ರೀತಿ ಗಳಿಸಿಕೊಟ್ಟು ಹೋಗಿದ್ದಾರೆ. ಅಪುö್ಪ ಕೂಡ ಅಷ್ಟೇ ಪ್ರೀತಿ ಗಳಿಸಿ ಹೋಗಿದ್ದಾನೆ' ಎಂದರು. 

ಅಭಿಮಾನಿಗಳು ಯಾವುದೇ ಕಾರಣಕ್ಕೂ ತಪುö್ಪ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಜೀವ ಅಮೂಲ್ಯ ಉಡುಗೊರೆ. ಅದನ್ನು ಕಳೆದುಕೊಳ್ಳಬೇಡಿ ಎಂದು ಕೋರಿದರು.

ಇಂದಿನಿAದ ಸಮಾಧಿ ದರ್ಶನಕ್ಕೆ ಅವಕಾಶ: ಅಪ್ಪು ಸಮಾಧಿಯನ್ನು ಕಂಡು, ನಮಿಸಿ, ಭಾವುಕರಾಗಿ ಶ್ರದ್ಧಾಂಜಲಿ ಸಲ್ಲಿಸಬೇಕೆಂದು ಕಳೆದ ಮೂರು ದಿನಗಳಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಮತ್ತು ಸಾರ್ವಜನಿಕರಿಗೆ ಬುಧವಾರದಿಂದ ಪುನೀತ್ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ನಟ ಶಿವರಾಜ್‌ಕುಮಾರ್ ತಿಳಿಸಿದರು.


`ಪುನೀತ್ ಪದ್ಮಶ್ರೀ ಗೌರವಕ್ಕೆ ಅರ್ಹರು'

ಮೈಸೂರು: ನಟ ಪುನೀತ್ ರಾಜ್‌ಕುಮಾರ್ ಪದ್ಮಶ್ರೀ ಸೇರಿದಂತೆ ಎಲ್ಲ ಗೌರವಕ್ಕೆ ಅರ್ಹರು. ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಸರ್ವ ಸಮ್ಮತ ಒಪ್ಪಿಗೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಕಬಿನಿಗೆ ಆಗಮಿಸಿದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದರು.

ಪುನೀತ್ ರಾಜ್‌ಕುಮಾರ್ ಅವರಿಗೆ ಪದ್ಮಶ್ರಿ ಪ್ರಶಸ್ತಿಗೆ ಶಿಫಾರಸ್ಸು ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ತಮಗೆ ಅಪಾರ ಗೌರವ ಪ್ರೀತಿ ಇದೆ. ಈ ವಿಚಾರವನ್ನು ಸರ್ವಾನುಮತದಿಂದ ಎಲ್ಲರೂ ಒಪುö್ಪತ್ತಾರೆ. ಶಿಫಾರಸ್ಸು ಮಾಡಲು ಅದಕ್ಕೊಂದು ಪದ್ಧತಿ ಇದೆ. ಸರ್ಕಾರವಾಗಿ ಎಲ್ಲವನ್ನೂ ಯೋಚನೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.