ಕನಕ ಗುರು ಮಠದಲ್ಲಿ ರೂ.3.35 ಕೋಟಿ ಕಾಮಗಾರಿಗೆ ಚಾಲನೆ ಕರ್ನಾಟಕದ ದಲಿತ ಸಿಎಂ ಕನಸು ಈಡೇರಲಿ: ಈಶ್ವರಾನಂದಪುರಿ ಸ್ವಾಮೀಜಿ

ಕನಕ ಗುರು ಮಠದಲ್ಲಿ ರೂ.3.35 ಕೋಟಿ ಕಾಮಗಾರಿಗೆ ಚಾಲನೆ  ಕರ್ನಾಟಕದ ದಲಿತ ಸಿಎಂ ಕನಸು ಈಡೇರಲಿ: ಈಶ್ವರಾನಂದಪುರಿ ಸ್ವಾಮೀಜಿ


ಕನಕ ಗುರು ಮಠದಲ್ಲಿ ರೂ.3.35 ಕೋಟಿ ಕಾಮಗಾರಿಗೆ ಚಾಲನೆ

ಕರ್ನಾಟಕದ ದಲಿತ ಸಿಎಂ ಕನಸು ಈಡೇರಲಿ: ಈಶ್ವರಾನಂದಪುರಿ ಸ್ವಾಮೀಜಿ

ಕೊರಟಗೆರೆ: ಕರ್ನಾಟಕದಲ್ಲಿ ಸಂಘಟನೆಯ ಹೆಸರಿನಲ್ಲಿ ಶೂಚನೀಯ ಪರಿಸ್ಥಿತಿ ನಿರ್ಮಾಣ. ಕಾನೂನು ಸುವ್ಯವಸ್ಥೆ ಏನಾಗಿದೆ ಎಂಬುದೇ ಯಕ್ಷಪ್ರಶ್ನೆ. ರಾಜ್ಯದ ಎಲ್ಲಾ ಮಠಾಧೀಶರು ಒಂದಾಗಿ ರಾಜ್ಯ ಸರಕಾರ ಮತ್ತು ಸಂಘಟನೆಗಳಿಗೆ ಬುದ್ದಿವಾದ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೊಸದುರ್ಗ ಕನಕ ಗುರುಪೀಠದ ಶ್ರೀಈಶ್ವರಾನಂದಪುರಿ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೇಟ್ಟದ ಶ್ರೀರೇವಣ್ಣ ಸಿದ್ದೇಶ್ವರ ಕನಕಗುರು ಶ್ರೀಮಠದಲ್ಲಿ ಜಿಪಂ ಮತ್ತು ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯ 3ಕೋಟಿ 35ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ಮಾಡಿದ ನಂತರ ಮಾತನಾಡಿದರು.

ಕನಕಗುರು ಮಠದಲ್ಲಿ ಜಯಂತಿ ಆದರೇ ಅಲ್ತಾಪ್ ತೋರಣ ಕಟ್ತಾನೇ, ಕ್ರಿಶ್ಚಿಯನ್ ಹುಡುಗ ಭಕ್ತರಿಗೆ ಊಟ ಬಡಿಸ್ತಾನೇ, ಯುಗಾದಿ ಹಬ್ಬದ ಊಟದ ವಿಚಾರದಲ್ಲಿ ಸಂಘಟನೆಯಿAದ ಒಂದು ವರ್ಗದ ಜನರನ್ನು ದೂರುವಿಡುವ ಹುನ್ನಾರ ನಡೆಯುತ್ತಿದೆ. ರಾಜ್ಯದಲ್ಲಿ ಹಿಂದು-ಮುಸ್ಲಿA ಸಮುದಾಯದ ನಡುವೆ ಗೊಂದಲ ಮೂಡಿಸುವ ಪ್ರಯುತ್ನ ನಡೆಯುತ್ತೀದೆ. ರಾಜ್ಯ ಸರಕಾರ ಮಧ್ಯ ಪ್ರವೇಶ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಆಗ್ರಹ ಮಾಡಿದರು.


ಕರ್ನಾಟಕ ರಾಜ್ಯದಲ್ಲಿ ಲಿಂಗಾಯಿತ, ಬ್ರಾಹ್ಮಣ, ಕುರುಬ, ಒಕ್ಕಲಿಗ ಸಮುದಾಯದಿಂದ ಈಗಾಗಲೇ ಸಿಎಂ ಆಗಿ ರಾಜ್ಯದ ಆಡಳಿತ ನಡೆಸಿದ್ದಾರೆ. ಕರ್ನಾಟಕ ರಾಜಕೀಯ ರಂಗದಲ್ಲಿ ಡಾ.ಜಿ.ಪರಮೇಶ್ವರ್ ಅಜಾತಶತ್ರು. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ದಲಿತ ಸಿಎಂ ಆದರೆ ಸಾಮಾಜಿಕ ನ್ಯಾಯ ದೊರೆಯುವ ಕನಸು ನನಸಾಗಲಿದೆ. ಸದಾ ಜನತೆಯ ಮಧ್ಯೆ ಇರುವಂತಹ ಸರಳತೆಯ ರಾಜಕಾರಣಿ ಮತ್ತೆ ಕೊರಟಗೆರೆ ಕ್ಷೇತ್ರದಿಂದ ಜಯಗಳಿಸಿ ರಾಜ್ಯದ ಸಿಎಂ ಆಗಲಿ ಎಂದು ಶ್ರೀಈಶ್ವರಾನಂದಪುರಿ ಮಹಾಸ್ವಾಮಿಗಳು ಆರ್ಶಿವಾದ ಮಾಡಿದರು.


ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಮಾತನಾಡಿ ಕೊರಟಗೆರೆ ಕ್ಷೇತ್ರದ ಪ್ರತಿ ಹೋಬಳಿಯಲ್ಲಿ ತಲಾ ಎರಡು ಮಠಗಳಿವೆ. ಮಠಮಂದಿರ ಹೆಚ್ಚಾದಂತೆ ಸ್ವಾಮರಸ್ಯ ಒಂದಾಗಿ ಸಮಾಜದಲ್ಲಿ ಶಾಂತಿ ನೆಲೆಸಲಿದೆ. ಸಿದ್ದರಬೆಟ್ಟದ ಕನಕ ಶ್ರೀಮಠಕ್ಕೆ ಈಗಾಗಲೇ 10ಲಕ್ಷದ ಕೌಪೌಂಡು ಮತ್ತು ಕೊಳವೆ ಬಾವಿಗೆ ಅನುದಾನ ನೀಡಿದ್ದೇನೆ. ಶ್ರೀಮಠಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲು ನಾನು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.


ಮಧುಕರ್, ತಹಶೀಲ್ದಾರ್ ನಾಹೀದಾ, ತಾಪಂ ಇಓ ದೊಡ್ಡಸಿದ್ದಯ್ಯ, ಜಿಪಂ ಎಇಇ ರವಿಕುಮಾರ್, ಸಿದ್ದರಬೆಟ್ಟ ಗ್ರಾಪಂ ಅಧ್ಯಕ್ಷೆ ವಿನೋದ, ಕುರುಬರ ಸಂಘದ ಅಧ್ಯಕ್ಷ ಮೈಲಾರಪ್ಪ, ಮುಖಂಡರಾದ ರಂಗಧಾಮಯ್ಯ, ನಾಗಭೂಷನ್, ಲಕ್ಷಿ÷್ಮÃಕಾಂತ, ರಂಗರಾಜು ಇದ್ದರು.