ಬಂದ್-‌ ತುಮಕೂರಿನಲ್ಲಿ ಎಲ್ಲೆಲ್ಲಿ ಮೆರವಣಿಗೆ

ಬಂದ್-‌ ತುಮಕೂರಿನಲ್ಲಿ  ಎಲ್ಲೆಲ್ಲಿ ಮೆರವಣಿಗೆ

ಬಂದ್: ನಗರದಲ್ಲಿ ಎಲ್ಲೆಲ್ಲಿ ಮೆರವಣಿಗೆ

ತುಮಕೂರು: ಭಾರತ ಬಂದ್ ಅಂಗವಾಗಿ ಸೋಮವಾರ ಬೆಳಿಗ್ಗೆ 8 ಗಂಟೆಗೆ ನಗರದ ನಾಲ್ಕು ದಿಕ್ಕಿನಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ತುಮಕೂರು ಬಟವಾಡಿ ವೃತ್ತದಿಂದ, ಆರ್.ಕೆ.ಎಸ್.ನ ಸ್ವಾಮಿಯವರು ಮತ್ತು ಎಐಕೆಎಸ್ ಕಂಬೇಗೌಡ ಹಾಗೂ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಎ. ನರಸಿಂಹಮೂರ್ತಿಯವರ ಕಾರ್ಮಿಕ ಸಂಘಟನೆಯ ಮಂಜುಳಾ ಮುಂದಾಳತ್ವದಲ್ಲಿ ಮೆರವಣಿಗೆ ನಡೆಯಲಿದೆ.

ಮರಳೂರು ಕೆರೆಯ ರಿಂಗ್ ರಸ್ತೆಯಿಂದ ಹಾಗೂ ಗುಬ್ಬಿ ಗೇಟ್ ರಿಂಗ್ ರಸ್ತೆಯಿಂದ ಕೆ.ಆರ್.ಆರ್.ಎಸ್  ಎ.ಗೋವಿಂದರಾಜು, ಮತ್ತು ಆನಂದ ಪಟೇಲ್ ಹಾಗೂ ಕಟ್ಟಡ ಕಾರ್ಮಿಕ ಸಂಘಟನೆಯ  ಶಂಕರಪ್ಪ ಪ್ರಗತಿಪರ ಸಂಘಟನೆ  ತಾಜ್ ಉದ್ದೀನ್  ಮುಂದಾಳತ್ವದಲ್ಲಿ ಮೆರವಣಿಗೆ ಆರಂಭವಾಗಲಿದೆ.

 ಶಿರಾ ಗೇಟ್ ವೃತ್ತದಿಂದ ಪ್ರಾಂತ್ಯ ರೈತ ಸಂಘದ ಕರಿಬಸವಯ್ಯ, ಕಾರ್ಮಿಕ ಮುಖಂಡರಾದ ಗಿರೀಶ್, ಲೋಕೇಶ್, ಷಣ್ಮುಖಪ್ಪ ಖಲೀಲ್,  ಮುಂದಾಳತ್ವದಲ್ಲಿ ಪ್ರಾರಂಭವಾಗಿ ಟೌನ್ ಹಾಲ್ ವೃತ್ತದಲ್ಲಿ ಮೆರವಣಿಗೆಗಳು 9 ಗಂಟೆಗೆ ಸಮಾವೇಶಗೊಳ್ಳುವವು.

 ಈ ಮೆರವಣಿಗೆಗಳಲ್ಲಿ ಎಲ್ಲಾ ಸಂಘಟನೆಗಳ ಕಾರ್ಯಕರ್ತರು ತಪ್ಪದೆ ಭಾಗವಹಿಸಬೇಕಾಗಿ ವಿನಂತಿ,

ಸಂಯುಕ್ತ ಹೋರಾಟ-ಕರ್ನಾಟಕ ತುಮಕೂರು ತಾಲ್ಲೂಕು ಘಟಕದ ಪರವಾಗಿ, ಹೆಚ್.ಎಂ.

ರವೀಶ್, ಚಿರತೆ ಚಿಕ್ಕಣ್ಣ ಕೋರಿದ್ದಾರೆ.