ಮಳೆಗಾಲದಲ್ಲಿ ವಿವಿಧ ಬೆಳೆಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು

ಮಳೆಗಾಲದಲ್ಲಿ ವಿವಿಧ ಬೆಳೆಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು

ಮಳೆಗಾಲದಲ್ಲಿ ವಿವಿಧ ಬೆಳೆಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು


ಕೋಲಾರ : ಜಿಲ್ಲಾ ಕೃಷಿ ಹವಾಮಾನ ಘಟಕ, ಕೋಲಾರದ ಹವಾಮಾನ ವರದಿಯಂತೆ ಈಶಾನ್ಯ ಮಾರುತಗಳಿಂದ ಬರುವ ಹಿಂಗಾರು ಮಳೆಯು ನವೆಂಬರ್ 12, 2021 ರವರೆಗೆ ಮುಂದುವರೆಯುವ ಸಾದ್ಯತೆಯಿದ್ದು, ಜಿಲ್ಲಾದ್ಯಾಂತ ಸತತ ತುಂತುರು ಮಳೆಯಾಗುವುದು, ಮೋಡಕವಿದ ವಾತಾವರಣ ಮತ್ತು ಹೆಚ್ಚು ಆರ್ದತೆಯುಳ್ಳ ಹವಾಗುಣ ಇರುವುದರಿಂದ  ಆಲೂಗಡ್ಡೆಗೆ ಮತ್ತು ಟೊಮ್ಯಾಟೊ ಬೆಳೆಗೆ ಶೀಲೀಂದ್ರದಿAದ ಬರುವ ಅಂಗಮಾರಿ ರೋಗ ಉಲ್ಬಣವಾಗುವ ಸಾಧ್ಯತೆ ಇದೆ. 


ಕೊನೆಯ ಅಂಗಮಾರಿ ರೋಗದ ಲಕ್ಷಣಗಳು: ನೀರಿನಿಂದ ಆವೃತವಾದ ಕಂದು ಮಿಶ್ರಿತ ಕಪ್ಪು ಬಣ್ಣದ ಚುಕ್ಕೆಗಳು ಎಲೆ, ಕಾಂಡ ಮತ್ತು ಹಣ್ಣಿನ ತೊಟ್ಟುಗಳಲ್ಲಿ ಕಂಡು ಬರುತ್ತದೆ.  ಎಲೆಯ ಮೇಲೆ ಚುಕ್ಕೆಗಳು ಕಂದು ಬಣ್ಣದಿಂದ ಕೂಡಿರುತ್ತದೆ ನಂತರ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಎಲೆಯ ಕೆಳಗಡೆ ಅರಳೆಯಂತಹ ಬಿಳಿ ಬಣ್ಣದ ಶಿಲೀಂಧ್ರದ ಬೆಳವಣಿಗೆ ಕಂಡು ಬರುತ್ತದೆ. 


ಆದುದರಿಂದ ರೈತರು ಮಳೆಯಿಂದ ಬಿಡುವು ಸಿಕ್ಕಾಗ ವ್ಯಾಪಕ ಶಿಲೀಂದ್ರನಾಶಕಗಳಾದ 2 ಗ್ರಾಂ ಸೈಮಾಕ್ಸಾನಿಲ್ (8%) + ಮ್ಯಾಂಕೋಜೆಬ್ (64% ಡಬ್ಲೂö್ಯ.ಪಿ) ಅಥವಾ 3 ಗ್ರಾಂ ಫೆನಾಮಿಡಾನ್+ ಮ್ಯಾಂಕೋಜೆಬ್ ಅಥವಾ ಅಜೋಕ್ಸಿಸ್ಟಾçಬಿನ್ 18.2 + ಡೈಫಿನಕೊನಜೋಲ್ 11.4% ಎಸ್.ಸಿ. 1 ಮಿ.ಲಿ ಅಥವಾ ಮೆಟಿರಾಮ್ 55 + ಪೈರಾಕ್ಲೋಸ್ಟಾçಬಿನ್ 5% ಡಬ್ಲೂö್ಯಜಿ, 3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಲು ತಿಳಿಸಲಾಗಿದೆ. ಸಿಂಪರಣೆಯ ನಂತರ ಕನಿಷ್ಠ 4 ಗಂಟೆಯಾದರೂ ಮಳೆಯಿಂದ ಬಿಡುವು ಇರಬೇಕು ಇಲ್ಲದೇ ಹೋದರೆ ಸಿಂಪರಣೆಯನ್ನು ಪುನಾರವರ್ತಿಸಬೇಕು.   
   
   
ಡೊಣ್ಣಮೆಣಸಿನಕಾಯಿ ಬೆಳೆಯಲ್ಲಿ ಚಿಬ್ಬುರೋಗ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಹೂವಾಡುವ ಹಂತದಲ್ಲಿ ಪ್ರಥಮ ಸಿಂಪರಣೆ ಮತ್ತು ಕಾಯಿ ಕಟ್ಟುವ ಹಂತದಲ್ಲಿ ಎರಡನೇ ಸಿಂಪರಣೆ, ನಂತರದ 15 ದಿನಗಳಲ್ಲಿ ಮೂರನೇ ಸಿಂಪರಣೆಗಾಗಿ ತಾಮ್ರದ ಆಕ್ಸಿಕ್ಲೋರೈಡ್ 3 ಗ್ರಾಂ ಅಥವಾ ನೀರಿನಲ್ಲಿ ಕರಗುವ ಗಂಧಕ 2 ಗ್ರಾಂ. ಅಥವಾ ಕ್ರಾಪ್ಟನ್ (0.2%), ಅಥವಾ ಜೈರಾಮ್ (0.25%) ಶಿಲೀಂದ್ರನಾಶಕಗಳನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.  


ಈಗಾಗಲೇ ಕಾಯಿಗಳು ಚಿಬ್ಬುರೋಗದಿಂದ ಬಾಧಿತವಾಗಿದ್ದರೆ ಸಂಯುಕ್ತ ಶಿಲೀಂದ್ರ ನಾಶಕಗಳಾದ ಟೆಬುಕೊನಾಜೋಲ್ + ಟ್ರೆöÊಫ್ಲೋಕ್ಸಟ್ರೋಬಿನ್ 7 5 ಡಬ್ಲೂ.ಜಿ (50%+ 25% ಡಬ್ಲೂ. ಡಬ್ಲೂ.) ಅನ್ನು 0.5 ಗ್ರಾಂ/ಲೀ ನೀರಿಗೆ ಬೆರೆಸಿ ಸಿಂಪಡಿಸುವುದು.  

ಕೋಸು ಜಾತಿಯ ತರಕಾರಿಗಳಲ್ಲಿ ದುಂಡಾಣುವಿನಿAದ ಬರುವ ಕಪ್ಪುಕೊಳೆ ರೋಗದ ನಿಯಂತ್ರಣಕ್ಕಾಗಿ ತಾಮ್ರದ ಆಕ್ಸಿಕ್ಲೋರೈಡ್ 3 ಗ್ರಾಂ ಜೊತೆಗೆ ಸ್ಟೆçಪ್ಟೋಮೈಸಿನ್ ಸಲ್ಪೇಟ್ 0.5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪರಣೆ ಮಾಡಬೇಕು.  
ಮಾವಿನಲ್ಲಿ ಎಲೆ ಮತ್ತು ಕಾಂಡದ ಮೇಲೆ ಬರುವ ಚಿಬ್ಬುರೋಗದ ನಿಯಂತ್ರಣಕ್ಕಾಗಿ 2 ಗ್ರಾಂ ಮೆಟಾಲಾಕ್ಸಿಲ್ 4% + ಮ್ಯಾಂಕೊಜೇಬ್ 64% ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪರಣೆ ಮಾಡುವುದು.


ಕುಂಬಳಜಾತಿ ತರಕಾರಿಗಳು ಹಣ್ಣಿನ ನೊಣಗಳಿಂದ ಬಾಧಿತ ಕಾಯಿಗಳಲ್ಲಿ ಮರಿಹುಳುಗಳು ಹಣ್ಣಿನ ಒಳಭಾಗವನ್ನು ತಿನ್ನುವುದರಿಂದ ಅಂತಹ ಕಾಯಿಗಳು ಕೊಳೆಯುತ್ತವೆ. ಇದರ ನಿಯಂತ್ರಣಕ್ಕಾಗಿ 2 ಮಿ.ಲೀ. ಮೆಲಾಥಿಯನ್ 50 ಇ.ಸಿ+ 10 ಗ್ರಾಂ ಸಕ್ಕರೆ ಅಥವಾ ಬೆಲ್ಲದೊಂದಿಗೆ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಅಲ್ಲದೆ ಕ್ಯೂ ಲ್ಯೂರ್ ಮೋಹಕ ಬಲೆಗಳನ್ನು ಎಕರೆಗೆ 4-6 ರಂತೆ ಕಟ್ಟುವುದು.
ಚೆಂಡುಹೂವಿನಲ್ಲಿ ಮಳೆ ಹೆಚ್ಚಾದಾಗ ಶಿಲೀಂದ್ರದಿAದ ಬರುವ ಎಲೆ ಚುಕ್ಕೆರೋಗ ಮತ್ತು ಹೂ ಅಂಗಮಾರಿ ರೋಗವು ಹೆಚ್ಚಾಗುವ ಸಾಧ್ಯತೆಯಿದ್ದು ಹತೋಟಿಗೆ ಕ್ಲೋರೊಥ್ಯೋಲಿನಿಲ್ 2 ಗ್ರಾಂ ಅಥವಾ ಮ್ಯಾಂಕೋಜೇಬ್ 3ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪರಣೆ ಮಾಡುವುದು. 
 
ತೊಗರಿ ಬೆಳೆಯಲ್ಲಿ ಕಾಂಡದ ಮೇಲೆ  ಪೈಟೊಪ್ತರಾ ಬ್ಲೆöÊಟ್ ರೋಗವು ಅಲ್ಲಲ್ಲಿ ಕಾಣಿಸುವುದರಿಂದ ಹತೋಟಿಗೆ 2 ಗ್ರಾಂ ಮೆಟಾಲಾಕ್ಸಿಲ್ 4% + ಮ್ಯಾಂಕೊಜೇಬ್ 64% ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪರಣೆ ಮಾಡುವುದು. 
 
ಪ್ರತಿ ಸಿಂಪರಣೆ ಕೈಗೊಳ್ಳಬೇಕಾದಲ್ಲಿ 0.5 ಮಿ.ಲೀ. ಅಂಟನ್ನು ಮಿಶ್ರಣ ಮಾಡುವುದನ್ನು ಮರೆಯಬಾರದು.  ಟೊಮ್ಯಾಟೊ ಮತ್ತು ಬಳ್ಳಿ ತರಕಾರಿಗಳನ್ನು ಎತ್ತಿ ಕಟ್ಟುವಾಗ ಗಿಡಗಳ ಮಧ್ಯ ಸಾಕಷ್ಟು ಗಾಳಿ ಮತ್ತು ಬೆಳಕು ಆಡುವಂತೆ ಇದ್ದರೆ ಹಾಗೂ ವಿವಿಧ ತರಕಾರಿ ಬೆಳೆಗಳಲ್ಲಿ ನೆಲಕ್ಕೆ ಅಥವಾ ಪ್ಲಾಸ್ಟಿಕ್ ಹೋದಿಕೆಗೆ ತಾಕುವ ಹಳೆಯ ಎಲೆಗಳನ್ನು ಗಿಡಕ್ಕೆ ಹಾನಿಯಾಗದಂತೆ ತೆಗೆಯುವುದರಿಂದ  ರೋಗಗಳ ಹಾವಳಿಯನ್ನು ಅಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. 
ನಿರಂತರ ಮಳೆಯಿಂದ ತರಕಾರಿ ಉತ್ಪಾದನೆಯಲ್ಲಿ ಗಮನಿಸಬೇಕಾದ ಅಂಶಗಳು
 ಮೊದಲನೆಯದಾಗಿ ಯಾವುದೇ ಬೆಳೆಯ ತೋಟದಲ್ಲಿ ನೀರು ನಿಂತಿದ್ದರೆ, ಆದಷ್ಟು ಬೇಗನೆ ನೀರನ್ನು ಹೊರಹಾಕಿ. 
  ಯಾವುದೇ ಗೊಬ್ಬರಗಳನ್ನು, ಭೂಮಿಯ ತೇವಾಂಶ ಒಣಗುವ ತನಕ ನೀರಾವರಿ ಅಥವಾ ರಸಾವರಿ ಮೂಲಕ ಕೊಡಬಾರದು. 
  ಬೆಳೆಯು ಮೊದಲ ಬೆಳವಣಿಗೆ ಹಂತದಲ್ಲಿದ್ದರೆ,  19:19:19 ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ. ನಂತೆ ಬೆರೆಸಿ ಸಿಂಪಡಿಸಿ.
 ಹೂವು ಬಿಡುವ ಹಂತದ ಬೆಳೆಯಾದರೆ, ಕ್ಯಾಲ್ಸಿಯಂ ಮತ್ತು ಬೋರಾನ್ ಪೋಷಕಾಂಶಗಳನ್ನು ಒಳಗೊಂಡ ರಸಗೊಬ್ಬರವನ್ನು ಸಿಂಪರಣೆ ಮಾಡಿ. 
 ಬೆಳೆಯು ಕಟಾವಿನ ಹಂತದಲ್ಲಿ ಇದ್ದರೆ, ಪೊಟ್ಯಾಷ್‌ಯಂ ನೈಟ್ರೆಟ್ ಅನ್ನು ಸಿಂಪರಣೆ ಮಾಡಿ. ಸಿಂಪರಣೆ ಮಾಡುವುದರಿಂದ ಮಳೆಯಿಂದಾದ ಪೋಷಕಾಂಶಗಳ ಕೊರತೆಯನ್ನು ನಿಗಿಸುವುದರ ಜೊತೆಗೆ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ. 
  ಪ್ಲಾಸ್ಟಿಕ್ ಹೋದಿಕೆಯನ್ನು ಬಳಸದೇ ಇರುವ ಬೆಳೆಗಳಲ್ಲಿ ಮಣ್ಣನ್ನು ಏರಿಸಿ. ಇದರಿಂದ ಬೆಳೆಗಳಲ್ಲಿ ಹೊಸ ಬೇರುಗಳ ಬೆಳವಣಿಗೆಗೆ ಸಹಾಯವಾಗುತ್ತದೆ. 


  ಟೊಮ್ಯಾಟೊ ಮತ್ತು ಬಳ್ಳಿ ತರಕಾರಿಗಳನ್ನು ಎತ್ತಿ ಕಟ್ಟುವಾಗ ಗಿಡಗಳ ಮಧ್ಯ ಸಾಕಷ್ಟು ಗಾಳಿ ಮತ್ತು ಬೆಳಕು ಆಡುವಂತೆ ಇರಬೇಕು. 
  ತರಕಾರಿ ಬೆಳೆಗಳಲ್ಲಿ ನೆಲಕ್ಕೆ ಅಥವಾ ಪ್ಲಾಸ್ಟಿಕ್ ಹೋದಿಕೆಗೆ ತಾಕುವ ಹಳೆಯ ಎಲೆಗಳನ್ನು ಗಿಡಕ್ಕೆ ಹಾನಿಯಾಗದಂತೆ ತೆಗೆಯುವುದರಿಂದ  ರೋಗಗಳ ಹಾವಳಿಯನ್ನು ಅಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. 
 ಯಾವುದೇ ಬೆಳೆಯಾದರು, ಲಘು ಪೋಷಕಾಂಶಗಳ ಮಿಶ್ರಣವನ್ನು 2-3 ಬಾರಿ ಸಿಂಪರಣೆ ಮಾಡಿದಾಗ ಮಾತ್ರ ಗಿಡದ ಬೆಳವಣಿಗೆಯನ್ನು ಸುಧಾರಿಸಲು ಸಾಧ್ಯ. 
 ಕಳೆನಾಶಕಗಳನ್ನು ಸಿಂಪರಣೆ ಮಾಡುವಾಗ, ಹೆಚ್ಚಿನ ಮುತುವರ್ಜಿಯನ್ನು ತೆಗೆದುಕೊಳ್ಳಬೇಕು. ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿರುವದರಿಂದ ಬೆಳೆಗಳನ್ನು ಭಾಧಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.